ಅಪ್ಪಿಕೊಂಡೇ ಪ್ರಾಣ ಬಿಟ್ಟ ಅಣ್ಣ-ತಂಗಿ

Public TV
1 Min Read
CKD 2

ಬೆಳಗಾವಿ/ಚಿಕ್ಕೋಡಿ: ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಸಹೋದರ-ಸಹೋದರಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ.

ಪಾರಿಸನಾಥ ಕುಪವಾಡ (15) ಸನ್ಮತಿ ಕುಪವಾಡ (13) ಮೃತ ದುರ್ದೈವಿಗಳು. ಈಜು ಕಲಿಯಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ.

FARM PITS

ಮೃತ ಸನ್ಮತಿ ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿದ್ದಳು. ಈ ಸಂದರ್ಭದಲ್ಲಿ ಸನ್ಮತಿ ಸೊಂಟಕ್ಕೆ ಕಟ್ಟಿದ್ದ ಡಬ್ಬಿ ಹರಿದಿದೆ. ಈ ವೇಳೆ ಸಹೋದರಿಯನ್ನು ರಕ್ಷಿಸಲು ಹೋದ ಅಣ್ಣ ಕೂಡ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.

ಅಣ್ಣ-ತಂಗಿಯ ಸಾವು ಕಂಡು ಗ್ರಾಮದ ಜನರು ಕಣ್ಣೀರು ಹಾಕಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಥಣಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Police I

Share This Article
Leave a Comment

Leave a Reply

Your email address will not be published. Required fields are marked *