ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದನ್ನು ಇನ್ನೂ ಮರೆಯದ ಸಿದ್ದು

Public TV
1 Min Read
SIDDU NEW

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋತು ಒಂದೂವರೆ ಎರಡು ವರ್ಷ ಆಗುತ್ತಾ ಬಂದರೂ ಇನ್ನೂ ಅವರು ಆ ಸೋಲನ್ನು ಮರೆತಿಲ್ಲ.

ಇವತ್ತು ಮೈಸೂರಿನಲ್ಲಿ ಹುಣಸೂರು ಉಪ ಚುನಾವಣೆಯಲ್ಲಿ ಗೆದ್ದ ಕಾರಣ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಕೆ ವೇಳೆ ತಮ್ಮ ಸೋಲನ್ನು ಸಿದ್ದು ನೆನಪಿಸಿಕೊಂಡರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದರು. ಗ್ರಾ.ಪಂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯನ್ನು ಬಿಜೆಪಿಯವರು ನಿಲ್ಲಿಸಿದರು. ಇದರಿಂದ ಬಿಜೆಪಿ ಮತಗಳು ಜೆಡಿಎಸ್ ಪಾಲಾಯಿತು ಎಂದು ಹೇಳಿದ್ದಾರೆ.

SIDDU 1

ಅಷ್ಟೇ ಅಲ್ಲದೆ ಶ್ರೀರಾಮುಲು ಡಿಸಿಎಂ ಮಾಡುತ್ತಾರೆ ಎಂದು ಪ್ರಚಾರ ಮಾಡಿದರು. ಲಿಂಗಾಯತರನ್ನು ಸಿದ್ದರಾಮಯ್ಯ ಒಡೆದ, ಹಿಂದೂ ಧರ್ಮ ವಿರೋಧಿ ಎಂದು ಅಪಪ್ರಚಾರ ಮಾಡಿದರು. ಇದನ್ನು ಸರಿಯಾಗಿ ನಮ್ಮವರು ಜನರಿಗೆ ತಿಳಿಸುವಲ್ಲಿ ವಿಫಲವಾದರು. ಇದರಿಂದ ನಮಗೆ ಸೋಲಾಯಿತು ಎಂದರು. ನನ್ನ ಚಾಮುಂಡೇಶ್ವರಿ ಉಪಚುನಾವಣೆಯಲ್ಲೇ 60 ಕೋಟಿ ಖರ್ಚು ಮಾಡಿ ಸೋಲಿಸಲು ಪ್ರಯತ್ನ ಪಟ್ಟರು ಎಂದು ತಿಳಿಸಿದರು.

ಹುಣಸೂರು ಉಪ ಚುನಾವಣೆಯಲ್ಲಿ 100 ಕೋಟಿವರೆಗೆ ಖರ್ಚು ಮಾಡಿದರು. ಆದರೂ ಈ ಹೊಡೆತವನ್ನು ಮಂಜುನಾಥ್ ತಡೆದುಕೊಂಡ. ನನ್ನ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಚೆನ್ನಿಂಗಪ್ಪ ಅಂತ ಒಬ್ಬ ಇದ್ದ, ಅವ ನೂರು ರೂ. ಕಂತೆ ತೆಗೆದುಕೊಂಡು ಊರೂರಲ್ಲಿ ಚೆಲ್ಲಿ ಬಿಡುತ್ತಿದ್ದ. ಈ ಉಪಚುನಾವಣೆಗಳಲ್ಲಿ ಹಣವನ್ನು ಚೆಲ್ಲಿ ಚುನಾವಣೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಸಿದರು.

Share This Article
Leave a Comment

Leave a Reply

Your email address will not be published. Required fields are marked *