Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ

Latest

ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ

Public TV
Last updated: January 20, 2020 3:35 pm
Public TV
Share
3 Min Read
KERAL LOVE
SHARE

– ನೀನು ಹೇಗೆ ಇದ್ರೂ ನಾನ್ ಪ್ರೀತಿಸ್ತೀನಿ
– ಕಣ್ಣೀರು ತರಿಸೋ ನಿಜವಾದ ಪ್ರೇಮ ಕಥೆ

ತಿರುವನಂತಪುರಂ: ಯುವಕನೊಬ್ಬ ತನ್ನ ಶಿಕ್ಷಣದ ಕನಸನ್ನೇ ಬಿಟ್ಟು ಕೂಲಿ ಕೆಲಸ ಮಾಡಿ, ಕ್ಯಾನ್ಸರ್ ನಿಂದ ಬಳಲುತ್ತಿದ್ದ  ಪ್ರಿಯತಮೆಯನ್ನು ಗುಣಪಡಿಸಿದ್ದಾನೆ.  ಇಂದು ಈ ಪ್ರೇಮಿಗಳು ಮದುವೆಯಾಗಿ ಸಂತಸದಿಂದ ಜೀವನ ನಡೆಸುತ್ತಿದ್ದಾರೆ.

ಕೇರಳದ ಮಲಪ್ಪೂರಂನ ಸಚಿನ್ ಮತ್ತು ಭವ್ಯಾ ಪ್ರೇಮಿಗಳು ಕ್ಯಾನ್ಸರ್ ಗೆದ್ದು ಮದುವೆಯಾಗಿದ್ದಾರೆ. ಸಚಿನ್ ಮತ್ತು ಭವ್ಯಾ ಇಬ್ಬರಿಗೂ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾಗ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದು, 8 ತಿಂಗಳವರೆಗೂ ಇವರ ಸ್ನೇಹ ಮುಂದುವರಿಯಿತು. ಆದರೆ ಇವರಿಬ್ಬರ ಸ್ನೇಹವನ್ನು ಭವ್ಯಾ ಪೋಷಕರು ಅಪಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಇನ್ಮುಂದೆ ಸಚಿನ್ ಜೊತೆ ಮಾತಾಡಬಾರದೆಂದು ಎಚ್ಚರಿಕೆ ಕೂಡ ಕೊಟ್ಟಿದ್ದರು.

sachinbhavya 4 1537610643

ಪೋಷಕರ ಮಾತಿಗೆ ಬೆಲೆ ಕೊಟ್ಟ ಭವ್ಯಾ, ಸಚಿನ್ ಜೊತೆ ಮಾತಾಡುವುದನ್ನು ನಿಲ್ಲಿಸಿದ್ದಳು. ಈ ವೇಳೆ ಸಚಿನ್ ಮತ್ತು ಭವ್ಯಾ ಒಬ್ಬರಿಗೊಬ್ಬರು ಬಿಟ್ಟಿರಲಾರದೆ ಮತ್ತೆ ಮಾತನಾಡಲು ಶುರು ಮಾಡಿದರು. ಆಗ ಅವರಿಬ್ಬರಿಗೆ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದು ಅರಿವಾಗಿದೆ. ನಂತರ ಮನೆಯವರಿಗೆ ತಿಳಿಯದಂತೆ ಭೇಟಿಯಾಗುತ್ತಿದ್ದರು. ಶಿಕ್ಷಣ ಮುಗಿದ ಬಳಿಕ ಭವ್ಯಾ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲವು ದಿನಗಳ ನಂತರ ಭವ್ಯಾಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಮೊದಲು ಭವ್ಯಾ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನೋವು ಹೆಚ್ಚಾದ ಕಾರಣ ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದಾಳೆ. ಆಗ ಭವ್ಯಾಗೆ ಬೆನ್ನುಮೂಳೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಈ ವಿಚಾರವನ್ನು ತಿಳಿದು ಭವ್ಯಾ ದುಃಖಿತಳಾಗಿದ್ದಳು. ಆಗ ಸಚಿನ್, ಭವ್ಯಾಳಿಗೆ ಧೈರ್ಯ ತುಂಬಿದ್ದಾನೆ. ನಿನ್ನ ಜೊತೆ ನಾನಿದ್ದೇನೆ. ಹಣ ಎಷ್ಟಾದರೂ ಖರ್ಚು ಆಗಲಿ. ನಿನ್ನನ್ನು ನಾನು ಉಳಿಸಿಕೊಳ್ಳುತ್ತೇನೆ, ಭಯಪಡಬೇಡ ಎಂದು ಭರವಸೆ ನೀಡಿದ್ದಾನೆ. ಕೊನೆಗೆ ಸಚಿನ್ ಭವ್ಯಾ ಮನೆಯವರಿಗೂ ತಿಳಿಯದಂತೆ ಆಕೆಯನ್ನು ಆಸ್ಪತ್ರೆಗೆ ಪ್ರತಿವಾರ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿ, ಪ್ರಾಥಮಿಕ ಚಿಕಿತ್ಸೆ ಕೊಡಿಸುತ್ತಿದ್ದನು. ಒಂದು ದಿನ ಈ ವಿಚಾರ ಮನೆಯವರಿಗೆ ತಿಳಿದಿದೆ. ಮಗಳಿ ಕ್ಯಾನ್ಸರ್ ಇರುವ ಬಗ್ಗೆ ತಿಳಿದು ಆಘಾತಗೊಂಡಿದ್ದರು. ಕೊನೆಗೆ ಸಚಿನ್ ಒಳ್ಳೆಯ ಗುಣವನ್ನು ನೋಡಿ ಭವ್ಯಾ ಪೋಷಕರು ಮೆಚ್ಚಿಕೊಂಡಿದ್ದರು.

10 1

ಸಚಿನ್, ಭವ್ಯಾಳನ್ನು ಬಿಟ್ಟು ಒಂದು ಕ್ಷಣವೂ ಎಲ್ಲೂ ಹೋಗುತ್ತಿರಲಿಲ್ಲ. ಸದಾ ಆಕೆಯ ಜೊತೆ ಇದ್ದುಕೊಂಡು ಧೈರ್ಯ ಹೇಳುತ್ತಿದ್ದನು. ಕೊನೆಗೆ ಕ್ಯಾನ್ಸರ್ ಇದ್ದರೂ ಕಳೆದು ವರ್ಷ ಮಾರ್ಚ್ ತಿಂಗಳಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭವ್ಯಾಗೆ ದಿನ ಕಳೆದಂತೆ ತಲೆ ಕೂದಲು ಉದುರಲು ಆರಂಭಿಸಿತು. ಆಗ ಭವ್ಯಾ ಅದನ್ನು ನೋಡಿ ನೋವು ಪಡುತ್ತಿದ್ದಳು. ಈ ವೇಳೆ ಸಚಿನ್, ಪ್ರೀತಿ ಎಂಬುದು ಮನಸ್ಸಿಗೆ ಸಂಬಂಧಿಸಿರುತ್ತದೆ. ದೈಹಿಕವಾಗಿ ಅಲ್ಲ. ನೀನು ಹೇಗೆ ಇದ್ದರೂ ಯಾವಾಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಧೈರ್ಯ ತುಂಬಿದ್ದನು.

ಭವ್ಯಾ ತಿಂಗಳಲ್ಲಿ ಸುಮಾರು 10 ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಗಿತ್ತು. ಕೊನೆಗೆ ಸಚಿನ್ ಮತ್ತು ಭವ್ಯಾ ಸೆಪ್ಟೆಂಬರ್ ತಿಂಗಳಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಪೋಷಕರ ಅನುಮತಿ ಪಡೆದ ನಂತರ ಪ್ರೇಮಿಗಳು ಮದುವೆಯಾದರು. ನಾನು ಯಾವಾಗಲೂ ಅವಳೊಂದಿಗೆ ಇದ್ದರೆ ಸಂತೋಷವಾಗಿರುತ್ತಾಳೆ. ಹೀಗಾಗಿ ನಾನು ಮದುವೆಯಾದೆ ಎಂದು ಸಚಿನ್ ಹೇಳಿದ್ದನು.

071457 Sachin Bhavya 4

ಸಚಿನ್ ಸ್ನಾತಕೋತ್ತರ ಪದವಿಯನ್ನು ಮಾಡಬೇಕೆಂಬ ಕಸನು ಕಂಡಿದ್ದನು. ಆದರೆ ತನ್ನ ಪ್ರಿಯತಮೆಗಾಗಿ ಆ ಕನಸ್ಸನ್ನು ಬಿಟ್ಟು ಆಕೆಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದನು. ಆದರೆ ಭವ್ಯಾ ಚಿಕಿತ್ಸೆ ಅಧಿಕ ಹಣ ಬೇಕಾಗಿತ್ತು. ಇತ್ತ ಆಕೆಯ ಮನೆಯವರು ಆರ್ಥಿಕವಾಗಿ ದುರ್ಬಲರಾಗಿದ್ದರು. ಕೊನೆಗೆ ಅವರ ಮದುವೆಗೆ ಬಂದವರು ಹಣದ ಸಹಾಯ ಮಾಡಿದರು. ನಂತರ ಸ್ನೇಹಿತರು, ಪರಿಚಯಸ್ಥರು ಮತ್ತು ಕುಟುಂಬದವರು ಸಹಾಯ ಮಾಡಿದರು. ಕೊನೆಗೆ ಸಚಿನ್, ಭವ್ಯಾಗೆ ಉತ್ತಮ ಚಿಕಿತ್ಸೆ ಕೊಡಿಸಿದ್ದಾನೆ.

ಇತ್ತೀಚೆಗೆ ಭವ್ಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕ್ಯಾನ್ಸರ್ ಕಾಯಿಲೆಯಿಂದ ಸುಧಾರಿಸಿಕೊಳ್ಳುತ್ತಿದ್ದಾಳೆ. “ನಮ್ಮ ಸ್ನೇಹಿತರು ನಮಗೆ ಸಾಕಷ್ಟು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಸಚಿನ್ ಮತ್ತು ಭವ್ಯಾ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

COUPLE

TAGGED:cancereducationhospitalkeralalovemarriagemoneyPublic TVಆಸ್ಪತ್ರೆಕೂಲಿಕೇರಳಕ್ಯಾನ್ಸರ್ಪಬ್ಲಿಕ್ ಟಿವಿಪ್ರೀತಿಮದುವೆಶಿಕ್ಷಣಹಣ
Share This Article
Facebook Whatsapp Whatsapp Telegram

Cinema news

Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories
JC Movie Surya Prakyath
ಫ್ಯಾನ್ಸ್ ಮಧ್ಯೆ ಲಾಂಗ್ ಹಿಡಿದು ಪೋಸ್ – ಜೆಸಿ ಸಿನಿಮಾ ನಟನ ವಿರುದ್ಧ ಸುಮೋಟೊ ಕೇಸ್ ದಾಖಲು
Bengaluru City Cinema Districts Karnataka Latest Sandalwood Top Stories

You Might Also Like

Raichuru Water Protest
Districts

ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ: ಗ್ರಾ.ಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರ ಹೋರಾಟ

Public TV
By Public TV
8 minutes ago
siddu dkshi
Bengaluru City

ಸಮಯ ಬಂದಾಗ ಸಿದ್ದರಾಮಯ್ಯ ಅವರೇ ಹೇಳ್ತಾರೆ – ಹೊಸ ಗೂಗ್ಲಿ ಬಿಟ್ಟ ಡಿಸಿಎಂ ಡಿಕೆಶಿ

Public TV
By Public TV
9 minutes ago
CJ Roy 1 3
Bengaluru City

ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ – ಅಂತಿಮ ಹಂತಕ್ಕೆ ಎಸ್‌ಐಟಿ ತನಿಖೆ

Public TV
By Public TV
14 minutes ago
New Zealand 2
Cricket

T20 World Cup | ಫಿಲಿಪ್ಸ್ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ – ಸೂಪರ್‌-8 ಗೆ ಜಿಗಿದ ಕಿವೀಸ್‌

Public TV
By Public TV
21 minutes ago
Bengaluru Mysuru Expressway 2
Bellary

ಕರ್ನಾಟಕದ 9 ರಸ್ತೆಗಳು NHAI ಉಸ್ತುವಾರಿಗೆ

Public TV
By Public TV
34 minutes ago
Siddu H.Vishwanath
Bengaluru City

ಸಿದ್ದರಾಮಯ್ಯ ಶಾಸಕರನ್ನು ಫಾರಿನ್ ಟ್ರಿಪ್ ಕಳಿಸಿ ಜನರಿಗೆ ಫೂಲ್ ಮಾಡೋಕಾಗಲ್ಲ- ಹೆಚ್.ವಿಶ್ವನಾಥ್

Public TV
By Public TV
51 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?