ಉಡುಪಿ: ಆಂಧ್ರಪ್ರದೇಶದ ವೈಶಾಖ ಶ್ರೀ ಶಾರದಾ ಪೀಠದ ಶ್ರೀಸ್ವಾತ್ಮಾನಂದೇಂದ್ರ ಸ್ವಾಮೀಜಿ ದೇವಾಲಯಗಳ ನಗರಿ ಉಡುಪಿ ಯಾತ್ರೆಯಲ್ಲಿದ್ದಾರೆ. ಈ ಸಂದರ್ಭ ಮಲ್ಪೆಯಲ್ಲಿ ಸಮುದ್ರ ಪೂಜೆ ಸಲ್ಲಿಸಿದ್ದಾರೆ.
ಉಡುಪಿಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಶ್ರೀಗಳು ಮೂರು ದಿನಗಳ ಯಾತ್ರೆಯನ್ನು ಕೈಗೊಂಡಿದ್ದಾರೆ. ಸಂಚಾರ ಸಂದರ್ಭ ಮಲ್ಪೆ ಸಾಗರತೀರಕ್ಕೆ ಸ್ವಾಮೀಜಿ ಭಕ್ತರ ಜೊತೆ ಭೇಟಿ ನೀಡಿದರು. ಸಮುದ್ರರಾಜನಿಗೆ ನಮಸ್ಕರಿಸಿದ ಅವರು, ಸಮುದ್ರದ ನೀರನ್ನು ದೇಹಕ್ಕೆ ಚಿಮುಕಿಸಿಕೊಂಡರು.
ಸ್ವರೂಪೇಂದ್ರ ಸರಸ್ವತಿ ಮಹಾಸ್ವಾಮಿಗಳ ಶಿಷ್ಯರಾಗಿರುವ ಶ್ರೀಸ್ವಾತ್ಮಾನಂದೇಂದ್ರರು ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳ ಯಾತ್ರೆಯಲ್ಲಿದ್ದಾರೆ. ಈ ಸಂದರ್ಭ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನಕ್ಕೂ ಭೇಟಿ ನೀಡಿದ್ದಾರೆ. ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.