ಮಲೆ ಮಾದಪ್ಪನ ಹೊರತುಪಡಿಸಿ ಉಳಿದ ದೇವಸ್ಥಾನದ ಬಾಗಿಲು ಬಂದ್

Public TV
1 Min Read
cng mm hills

ಚಾಮರಾಜನಗರ: ಗ್ರಹಣದ ಹಿನ್ನೆಲೆ ಬೆಳಗ್ಗೆ 8ರಿಂದ 11:30ರವರೆಗೆ ಜಿಲ್ಲೆಯ ವಿವಿಧ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಆದರೆ ಕೇತುಗ್ರಸ್ಥ ಸೂರ್ಯ ಗ್ರಹಣವಿದ್ದರೂ ಸಹ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎಂದಿನಂತೆ ಭಕ್ತರು ಮಾದಪ್ಪನ ದರ್ಶನ ಪಡೆದರು.

ಬೆಳಗ್ಗೆ 8 ಗಂಟೆಗೂ ಮೊದಲೇ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ದಾಸೋಹ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಸಂಜೆ 4ರಿಂದ 7ರವರೆಗೆ ದೇಗುಲದಲ್ಲಿ ವಿಶೇಷ ಪೂಜೆ ಜರುಗುವುದರಿಂದ ಪ್ರಮುಖ ದ್ವಾರಗಳನ್ನು ಮುಚ್ಚಲಾಗಿತ್ತು. ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.

cng mm hills 2

ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಶಸ್ವಾಮಿ ದೇಗುಲವನ್ನು ಬೆಳಗ್ಗೆ 5.30ರಿಂದ 1 ಗಂಟೆಯವರೆಗೆ ಮುಚ್ಚಲಾಗಿತ್ತು. ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಶ್ರಿರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯ ಪ್ರಸನ್ನ ಮೀನಾಕ್ಷಿ, ಸೋಮೇಶ್ವರ ಮತ್ತು ಆದಿಶಕ್ತಿ ಮಾರಮ್ಮನ ದೇವಾಲಯಗಳಲ್ಲಿ ಸೂರ್ಯಗ್ರಹಣ ಇರುವುದರಿಂದ ಇಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 12.30ವರೆಗೆ ದೇವರ ದರ್ಶನಕ್ಕೆ ಅವಕಾಶವಿರಲಿಲ್ಲ.

cng mm hills 1

ಇತ್ತ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ, ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನವನ್ನು ಸೂರ್ಯಗ್ರಹಣ ಪೂರೈಸಿದ ನಂತರ ತೆರೆಯಲಾಯಿತು. ಗ್ರಹಣ ಕಾಲ ಕಳೆದ ನಂತರ ಬಾಗಿಲು ತೆರೆದ ದೇವಸ್ಥಾನಗಳಲ್ಲಿ ವಿಶೇಷ ಹೋಮ-ಹವನಗಳನ್ನು ನೆರವೇರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *