ಬೆಂಗ್ಳೂರಿನ ಕಲಾವಿದನ ಕೈಯಲ್ಲಿ ಮೂಡಿತು ಚಿನ್ನದ ಚಂದ್ರಯಾನ-2

Public TV
2 Min Read
gold chandrayana 2 1

ಬೆಂಗಳೂರು: ಚಂದ್ರಯಾನ-2 ಉಪಗ್ರಹ ಚಂದ್ರನ ಮುತ್ತಿಕ್ಕುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ಆದರೆ ಸಿಲಿಕಾನ್ ಸಿಟಿಯ ಕಲಾವಿದರೊಬ್ಬರು ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ಚಂದ್ರಯಾನ-2ಕ್ಕೆ ಶುಭಹಾರೈಸಿದ್ದಾರೆ.

ಬೆಂಗಳೂರಿನ ಶ್ರೀರಾಮ್‍ಪುರದ ನಿವಾಸಿ ಅಕ್ಕಸಾಲಿಗರಾದ ನಾಗರಾಜ್ ರೇವಣಕರ್ ಚಿನ್ನದಲ್ಲಿ ಮಿನಿ ಚಂದ್ರಯಾನ-2 ಆಕೃತಿ ತಯಾರಿಸಿದ್ದಾರೆ. ನಾಗರಾಜ್ ಅವರು ಕಲಾವಿದರಾಗಿದ್ದು, 2 ಗ್ರಾಂ 700 ಮಿಲಿಗ್ರಾಂ ಚಿನ್ನದಲ್ಲಿ ಬಾಹುಬಲಿ ರಾಕೆಟ್ ತಯಾರಿಸಿದ್ದು, ಈ ಆಕೃತಿ ಸ್ಟಾಂಡ್ ಸೇರಿ 4.5 ಸೆಂಟಿಮೀಟರ್ ಎತ್ತರವಿದೆ. ಜೊತೆಗೆ ತ್ರಿವರ್ಣ ಧ್ವಜ, ಇಂಡಿಯಾ ಹಾಗೂ ಇಸ್ರೋ ಹೆಸರನ್ನು ಕೂಡ ಇದರ ಮೇಲೆ ಬರೆಯಲಾಗಿದೆ.

gold chandrayana 2

ಈ ಚಿನ್ನದ ಚಂದ್ರಯಾನ ತಯಾರಿಸಲು ನಾಗರಾಜ್ ಅವರು ಬರೋಬ್ಬರಿ 30 ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ. ಈ ಗೋಲ್ಡ್ ರಾಕೆಟ್ ಅನ್ನು ಭಾರತೀಯ ವಿಜ್ಞಾನಿಗಳಿಗೆ ಅರ್ಪಿಸುವುದಾಗಿ ನಾಗರಾಜ್ ತಿಳಿಸಿದ್ದಾರೆ. ಈ ಮಿನಿ ಚಂದ್ರಯಾನ-2ರ ಚಿನ್ನದ ಆಕೃತಿ ಸದ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್

Chandrayaan 2 Vikram

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು `ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಇಲ್ಲಿಯ ವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.

ಈ ವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೇರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.

Share This Article
Leave a Comment

Leave a Reply

Your email address will not be published. Required fields are marked *