ಅಲ್ಲಲ್ಲಿ ಬಂಡೆ, ಗುಡ್ಡ ಜರಿತ – ಮಳೆಗೆ ಕೊಚ್ಚಿ ಹೋಗಿದೆ ಚಾರ್ಮಾಡಿ ರಸ್ತೆ

Public TV
1 Min Read
ckm charmadi ghat collage

ಚಿಕ್ಕಮಗಳೂರು: ಮಹಾ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ ತತ್ತರಿಸಿ ಹೋಗಿದ್ದು ಸಂಚಾರಕ್ಕೆ ಮುಕ್ತವಾಗಲು ಬಹಳ ಸಮಯ ಬೇಕಾಗಿದೆ.

ದಕ್ಷಿಣ ಕನ್ನಡ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಮಳೆ ಬಂದಾಗ ಗುಡ್ಡದ ಮಣ್ಣು ಕುಸಿಯುತ್ತಿತ್ತು. ಆದರೆ ಈಗ ಕಳೆದ 7 ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿರುವ ಕಾರಣ ರಸ್ತೆಯಲ್ಲಿ ರಾಶಿ ರಾಶಿ ಗುಡ್ಡದ ಮಣ್ಣು, ಬಂಡೆಗಳು ಬಿದ್ದಿದೆ. ಅಲ್ಲದೆ ಅಲ್ಲಲ್ಲಿ ರಸ್ತೆಗಳು ಕೊಚ್ಚಿ ಹೋಗಿವೆ.

ckm charmadi ghat e1565592019886

ಇತ್ತ ಚಿಕ್ಕಮಗಳೂರಿನಲ್ಲಿ ಮಳೆಯ ಅವಾಂತರಕ್ಕೆ ನೋಡ ನೋಡ್ತಿದ್ದಂತೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಮುಳುಗಡೆಯಾಗಿದ್ದ ಮನೆಗಳು ಶಿಥಿಲಾವಸ್ಥೆಯಾಗಿ ಕುಸಿದು ಬಿದ್ದಿದೆ. ಸ್ಥಳೀಯರು ಮನೆ ಕುಸಿಯುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಬಾಳೆಹೊನ್ನೂರಿನಲ್ಲಿ ಒಟ್ಟು 112 ಮನೆಗಳು ನೆಲಸಮಗೊಂಡಿದ್ದು, ಮಾಗುಂಡಿ ಗ್ರಾಮದಲ್ಲಿ 53 ಮನೆಗಳು ನಾಶವಾಗಿದೆ. ಅಲ್ಲದೆ ಕಳಸ ಹೋಬಳಿಯಲ್ಲಿ 123 ಮನೆಗಳು ನೆಲಸಮ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *