ಅಧಿಕಾರಕ್ಕಾಗಿ ಬಿಎಸ್‍ವೈಯಿಂದ ಮಹಾ ರುದ್ರಯಾಗ

Public TV
1 Min Read
bsy yaga

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಲಿ ಎಂದು ಇಂದು ಗವಿಗಂಗಾಧರ ದೇಗುಲದಲ್ಲಿ ಮಹಾ ರುದ್ರಯಾಗ ಮಾಡಲಿದ್ದಾರೆ.

ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಯಡಿಯೂರಪ್ಪ ಅವರು ಮಹಾ ರುದ್ರಯಾಗ ಮಾಡಲಿದ್ದು, ಈಗಾಗಲೇ ದೇಗುಲದ ಹೊರಭಾಗದಲ್ಲಿ ಹೋಮಕ್ಕೆ ಸಿದ್ಧತೆ ಮಾಡಲಾಗಿದೆ.

BSY e1562773013136

ಬಿಎಸ್‍ವೈ ನಡೆಸಲಿರುವ ಮಹಾರುದ್ರ ಯಾಗದ ಮಹತ್ವ ತಿಳಿಸಿರುವ ಗವಿ ಗಂಗಾಧರ ಸಹಾಯಕ ಅರ್ಚಕ ಶ್ರೀಕಂಠದೀಕ್ಷಿತ್, ಈ ಯಾಗದಿಂದ ಅಂದುಕೊಂಡಿರುವುದನ್ನು ಸಾಧಿಸಬಹುದು. ಅಧಿಕಾರ ಪ್ರಾಪ್ತಿಯ ಬಗ್ಗೆ ಅವರು ಅಂದುಕೊಂಡರೆ ಅದು ಕೂಡ ನೆರವೇರಲಿದೆ. ಲೋಕಕಲ್ಯಾಣದ ಕಾರಣದ ಜೊತೆಗೆ ಅವರ ಮನಸ್ಸಿನ ಇಷ್ಟಾರ್ಥ ನೆರವೇರಿಕೆಗಾಗಿ ಮಹಾ ರುದ್ರಯಾಗ ನಡೆಯಲಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *