Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

Bengaluru City

ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

Public TV
Last updated: June 30, 2019 5:07 pm
Public TV
Share
3 Min Read
Uday K Mehta 7
SHARE

ಬೆಂಗಳೂರು: ಸಿನಿಮಾ ನಿರ್ಮಾಣವೆಂಬುದು ವ್ಯವಹಾರ. ಆದರೆ ನಿರ್ಮಾಪಕ ಅದನ್ನು ಬರೀ ಬ್ಯುಸಿನೆಸ್ ಅಂತಷ್ಟೇ ಪರಿಗಣಿಸಿದರೆ ಬಹುಶಃ ಅದ್ಭುತ ದೃಶ್ಯ ಕಾವ್ಯಗಳು ಹುಟ್ಟಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ, ಯಶಸ್ವಿ ಸಿನಿಮಾಗಳ ಹಿಂದೆ ಇಂಥಾ ವ್ಯಾವಹಾರಿಕ ಉದ್ದೇಶದಾಚೆಯ ಉತ್ಕಟ ಕಲಾ ಪ್ರೇಮವಿರುತ್ತದೆ. ನಿರ್ದೇಶಕರ ಕನಸಿಗೆ ಪ್ರತೀ ಹೆಜ್ಜೆಯಲ್ಲೂ ಸಾಥ್ ಕೊಡುತ್ತಾ, ಎಂಥಾ ಸವಾಲುಗಳು ಬಂದರೂ ಎದೆಕೊಡುತ್ತಾ ನಿರ್ಮಾಪಕ ಸಾಗಿ ಬಂದರೇನೇ ಸಿನಿಮಾವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತೆ. ಹೀಗೆ ಸ್ವತಃ ದೊಡ್ಡ ಮಟ್ಟದ ವ್ಯಾಪಾರ ಉದ್ಯಮದ ವಾರಸುದಾರರಾಗಿದ್ದರೂ ಸಿನಿಮಾವನ್ನು ಆರಾಧಿಸುವ ಸ್ವಭಾವದ ಉದಯ್ ಮೆಹ್ತಾರ ಏಳನೇ ಕನಸು ‘ಸಿಂಗ’!

Uday K Mehta 5

ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿರೋ ಈ ಚಿತ್ರವನ್ನು ಈ ಹಿಂದೆ ರಾಮ್ ಲೀಲಾ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ರೂಪಿಸಿದ್ದಾರೆ. ಯಾವುದೇ ಚಿತ್ರ ಬಿಡುಗಡೆ ಪೂರ್ವದಲ್ಲಿ ಈ ಥರದ ಟಾಕ್ ಕ್ರಿಯೇಟ್ ಮಾಡಿದರೆ ಗೆಲುವು ಗ್ಯಾರಂಟಿ. ಅಂಥಾದ್ದೊಂದು ಸಕಾರಾತ್ಮಕ ವಾತಾವರಣದೊಂದಿಗೆ ಥೇಟರಿನ ಹಾದಿಯಲ್ಲಿರೋ ಸಿಂಗನನ್ನು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡಲು ಒಪ್ಪಿಕೊಂಡಿರೋದೇ ಕಥೆಯ ಕಾರಣದಿಂದ.

Uday K Mehta 1

ಅಷ್ಟಕ್ಕೂ ಎಲ್ಲ ದಿಕ್ಕಿನಿಂದಲೂ ಕಥೆ ಒಪ್ಪಿಗೆಯಾಗದೇ ಇದ್ದರೆ ಉದಯ್ ಮೆಹ್ತಾ ನಿರ್ಮಾಣಕ್ಕಿಳಿಯುವವರೇ ಅಲ್ಲ. ಅವರು ಎಂಥಾ ಟೇಸ್ಟು ಹೊಂದಿದ್ದಾರೆ, ಗುಣಮಟ್ಟವನ್ನು ಹೇಗೆಲ್ಲ ಬಯಸುತ್ತಾರೆಂಬುದಕ್ಕೆ ಅವರೇ ನಿರ್ಮಾಣ ಮಾಡಿರೋ ಆರು ಚಿತ್ರಗಳೇ ಸಾಕ್ಷಿಗಿವೆ. ವಿಜಯ್ ಕಿರಣ್ ಆರಂಭದಲ್ಲಿ ಈ ಕಥೆ ಹೇಳಿದಾಗ ಒಂದೇ ಗುಕ್ಕಿಗದು ಮೆಹ್ತಾರಿಗೆ ಹಿಡಿಸಿತ್ತಂತೆ.

Uday K Mehta 3

 

ಪಕ್ಕಾ ಕಮರ್ಶಿಯಲ್ ಶೈಲಿಯ ಈ ಕಥೆ ಎಲ್ಲ ಅಂಶಗಳನ್ನೂ ಒಳಗೊಂಡು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿರೋದರಿಂದಲೇ ಮೆಹ್ತಾ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಇದೀಗ ಒಟ್ಟಾರೆಯಾಗಿ ಸಿಂಗ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಅವರಲ್ಲೊಂದು ತೃಪ್ತಿಯಿದೆ.

Uday K Mehta 2

ಉದಯ್ ಮೆಹ್ತಾ ಮೂಲತಃ ಬೆಂಗಳೂರಿನವರೇ. ಆರಂಭ ಕಾಲದಿಂದಲೂ ಅವರಿಗೆ ಸಿನಿಮಾಗಳ ಮೇಲೆ ವಿಪರೀತ ಸೆಳೆತ. ಇಂಥಾ ಸಿನಿಮಾ ಒಲವನ್ನು ಕಾಪಾಡಿಕೊಂಡೇ ಮುಂದುವರೆದರೂ ಬದುಕಿನ ಅನಿವಾರ್ಯತೆ ಅವರನ್ನು ಡೈಮಂಡ್ ಮರ್ಚೆಂಟ್ ಆಗಿ ರೂಪಿಸಿತ್ತು. ಈ ಉದ್ಯಮದಲ್ಲಿ ಬಲು ಆಸ್ಥೆಯಿಂದ ತೊಡಗಿಸಿಕೊಂಡು ಯಶಸ್ವಿಯಾದ ಮೆಹ್ತಾ ಈಗ್ಗೆ ದಶಕಗಳ ಹಿಂದೆಯೇ ನಿರ್ಮಾಪಕರಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಹೀಗೆ ಒಂದೊಳ್ಳೆ ಪ್ರಾಜೆಕ್ಟಿಗೆ ಹುಡುಕುತ್ತಿದ್ದಾಗ 2009ರಲ್ಲಿ ಲೂಸ್ ಮಾದ ಯೋಗಿ ಅಭಿನಯದ ರಾವಣ ಎಂಬ ಚಿತ್ರದ ಮೂಲಕ ಅದಕ್ಕೆ ಅವಕಾಶ ಒದಗಿ ಬಂದಿತ್ತು.

Uday K Mehta 4

ಆ ಚಿತ್ರ ಯಶ ಕಾಣುತ್ತಲೇ ನಿರ್ಮಾಪಕರಾಗಿ ಕಾಲೂರಿ ನಿಂತ ಉದಯ್ ಮೆಹ್ತಾ, ಕೃಷ್ಣನ್ ಲವ್ ಸ್ಟೋರಿ, ಕಿಚ್ಚ ಸುದೀಪ್ ಅಭಿನಯದ ಬಚ್ಚನ್, ನೀನಾಸಂ ಸತೀಶ್ ಅಭಿನಯದ ಲವ್ ಇನ್ ಮಂಡ್ಯ, ಶರಣ್ ಅಭಿನಯದ ರಾಜ ರಾಜೇಂದ್ರ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸಿಂಗ ಅವರ ಏಳನೇ ಚಿತ್ರ. ಈ ಚಿತ್ರ ಬಿಡುಗಡೆಯ ಹಾದಿಯಲ್ಲಿರುವಾಗಲೇ ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರವನ್ನೂ ಮೆಹ್ತಾ ಆರಂಭಿಸಿದ್ದಾರೆ. ಅದಾಗಲೇ ಧೃವ ಸರ್ಜಾರ ಚಿತ್ರವೊಂದನ್ನು ನಿರ್ಮಾಣ ಮಾಡಲು ತಯಾರಿಯನ್ನೂ ಆರಂಭಿಸಿದ್ದಾರೆ.

Uday K Mehta 6

ಹೀಗೆ ಸಾಗಿ ಬಂದಿರುವ ಉದಯ್ ಮೆಹ್ತಾ ಈಗ ಕನ್ನಡದ ಸ್ಟಾರ್ ನಿರ್ಮಾಪಕರಾಗಿ ಹೊರ ಹೊಮ್ಮಿದ್ದಾರೆ. ಅವರೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆಂದರೆ ಗಾಂಧಿನಗರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅದಕ್ಕೆ ಕಾರಣ ಕಥೆಯನ್ನು ಆರಿಸಿಕೊಳ್ಳೋದರಲ್ಲಿ ಅವರಿಗಿರುವ ಜಾಣ್ಮೆ. ಸಿಂಗ ಕಥೆಯನ್ನೂ ಕೂಡಾ ಅವರು ಅದೇ ಮಾನದಂಡಗಳನ್ನು ಪ್ರಯೋಗಿಸಿ ಆರಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಗೆಲುವು ಕಾಣೋದರೊಂದಿಗೆ ತಮ್ಮ ಸಿನಿಮಾ ಬದುಕಿನ ಮಹತ್ವದ ಚಿತ್ರವಾಗಿ ದಾಖಲಾಗುತ್ತದೆ ಎಂಬ ಭರವಸೆ ಉದಯ್ ಮೆಹ್ತಾ ಅವರಲ್ಲಿದೆ. ಈಗ ಪ್ರೇಕ್ಷಕರ ವಲಯದಲ್ಲಿ ಸಿಂಗ ಪಸರಿಸಿರೋ ಕ್ರೇಜ್ ಮೆಹ್ತಾರ ನಂಬಿಕೆಗೆ ಮತ್ತಷ್ಟು ಇಂಬು ಕೊಡುವಂತಿದೆ.

TAGGED:cinemaKannada Cinema ProducersandalwoodSinngaUday Mehtaಉದಯ್ ಮೆಹ್ತಾಕನ್ನಡ ಚಿತ್ರ ನಿರ್ಮಾಪಕಸಿಂಗಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

S 400 missile system
Latest

ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

Public TV
By Public TV
11 minutes ago
visl worker dies after falling iron billet 8 lakh compensation before funeral job guarantee letter for wife
Districts

ಕಬ್ಬಿಣದ ಬಿಲ್ಲೆಟ್ ಬಿದ್ದು VISL ಕಾರ್ಮಿಕ ಸಾವು – ಅಂತ್ಯಸಂಸ್ಕಾರಕ್ಕೂ ಮುನ್ನವೇ 8 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಭರವಸೆ

Public TV
By Public TV
30 minutes ago
Weather
Bengaluru City

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ – ರಾಜ್ಯದಲ್ಲಿ ಏ.30ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Public TV
By Public TV
46 minutes ago
Nitin Gadkari
Latest

ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಭವಿಷ್ಯವಿಲ್ಲ: ನಿತಿನ್ ಗಡ್ಕರಿ

Public TV
By Public TV
53 minutes ago
Vaibhav Sooryavanshi 4
Cricket

ನನ್ನ ಜೊತೆ ಸೆಲ್ಫಿ ಬೇಕಾ? ಹಾಗಾದ್ರೆ 100 ರೂಪಾಯಿ ಕೊಡಿ – ಪುಟಾಣಿಗಳ ಜೊತೆ ವೈಭವ್ ಸೂರ್ಯವಂಶಿ ತುಂಟಾಟ!

Public TV
By Public TV
2 hours ago
k.h.muniyappa delhi
Latest

ದೆಹಲಿಗೆ ಸಚಿವರ ದಂಡು – ಮುಖ್ಯಮಂತ್ರಿ ಗೊಂದಲ ಇತ್ಯರ್ಥಪಡಿಸಲು ಸಚಿವರ ಒತ್ತಡ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?