ಹುಟ್ಟುಹಬ್ಬ ಆಚರಿಸಲು ಬಂದ ನಾಲ್ವರೂ ಅಪಘಾತಕ್ಕೀಡಾದ್ರು!

Public TV
0 Min Read
BDR copy

ಬೀದರ್: ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮಂಗಲಗಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.

ಸಚಿನ್ ಹಣಮಂತ, ಅರುಣ್ ಕುಮಾರ್ ಕಾಶಿನಾಥ, ಗುರುನಾಥ ವಿಠಲ, ರಘುವೀರ ಭೀಮಶ್ಯಾ ಮೃತಪಟ್ಟವರಾಗಿದ್ದು, ಎಲ್ಲರೂ 18-19 ವರ್ಷದ ಯುವಕರಾಗಿದ್ದಾರೆ ಎನ್ನಲಾಗಿದೆ.

BDR ACCIDENT AV 13

ತಡ ರಾತ್ರಿ ರಸ್ತೆಯಲ್ಲಿ ಸಚಿನ್ ಹುಟ್ಟುಹಬ್ಬ ಆಚರಿಸಲು ಹೆದ್ದಾರಿ ಪಕ್ಕ ಬಂದಿದ್ದಾರೆ. ಈ ವೇಳೆ ವೇಗವಾಗಿ ಬಂದ ವಾಹನ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹುಟ್ಟುಹಬ್ಬ ಆಚರಿಸಲು ಬಂದವರು ಹೆಣವಾದರು.

ಈ ಕುರಿತು ಮನ್ನಾಖೇಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *