ಕರ್ನಾಟಕ ಸಿಎಂ ಪ್ರತಿನಿತ್ಯ ಅಳ್ತಾರೆ: ಸುಷ್ಮಾ ಸ್ವರಾಜ್

Public TV
1 Min Read
sushma swaraj

ಹುಬ್ಬಳ್ಳಿ: ಬಹುಮತದ ಸರ್ಕಾರವಿದ್ದರೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಬಹುಮತದ ಸರ್ಕಾರ ಇಲ್ಲದಿದ್ದರೆ ಏನಾಗುತ್ತೆ ಅಂತಾ ರಾಜ್ಯದ ಮೈತ್ರಿ ಸರ್ಕಾರ ನೋಡಿದರೆ ಗೊತ್ತಾಗುತ್ತೆ. 37 ಶಾಸಕರು ಹೊಂದಿದ್ದವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ. ಆದರೆ ಪ್ರತಿ ದಿನ ಸಿಎಂ ಕುರ್ಚಿ ಎಳೆದಾಡುತ್ತಾರೆ. ಪರಿಣಾಮ ಇಲ್ಲಿನ ಮುಖ್ಯಮಂತ್ರಿಗಳು ಪ್ರತಿದಿನ ಅಳುತ್ತಾರೆ, ದೂರುತ್ತಾರೆ. ಆ ಬಳಿಕ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಅವರನ್ನೇ ಅಪ್ಪಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವ್ಯಂಗ್ಯ ಮಾಡಿದರು.

CM HDK

ನಗರದಲ್ಲಿ ನಡೆದ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಜ್ ಯಾತ್ರೆಗೆ ಪ್ರತಿವರ್ಷ ತೆರಳುತ್ತಿದ್ದ ಮುಸ್ಲಿಮರ ಸಂಖ್ಯೆಯನ್ನು ಐವತ್ತು ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರು ಪುರುಷರ ಜೊತೆಗೆ ಹಜ್‍ಗೆ ತೆರಳಬೇಕು ಎನ್ನುವ ನಿರ್ಬಂಧವನ್ನು ಸಡಿಲಿಸಲಾಗಿದೆ. ಈ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಮೋದಿಯವರ ಸರ್ಕಾರ ಕೆಲಸ ಮಾಡಿದೆ. ಪೂರ್ಣ ಬಹುಮತದ ಕಾರಣ ಮೋದಿ ಸರ್ಕಾರ ಇಷ್ಟೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.

ಆಡಳಿತ ಪಕ್ಷ ಸ್ಥಿರವಾಗಿ ಇಲ್ಲದಿದ್ದರೆ ಏನೆಲ್ಲಾ ಆಗಲಿದೆ ಎಂಬುವುದಕ್ಕೆ ರಾಜ್ಯ ಮೈತ್ರಿ ಸರ್ಕಾರವನ್ನು ನೋಡಿದ್ದು, ದೇಶದ ಸುರಕ್ಷರತೆಗೆ, ಸುಸ್ಥಿರತೆ ಹಾಗೂ ಅಭಿವೃದ್ಧಿಗೆ ಮತ ನೀಡಿ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮನವಿ ಮಾಡಿದ್ದಾರೆ.

ದೇಶದ ಸುರಕ್ಷತೆಗೆ, ಸುಸ್ಥಿರತೆಗೆ, ಅಭಿವೃದ್ಧಿಗೆ ಈ ಬಾರಿ ಮತಹಾಕಿ. ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಸದ್ಯ ಸುರಕ್ಷಿತವಾಗಿದೆ. ಎಲ್ಲರೂ ಕಮಲದ ಗುರುತಿಗೆ ಮತಹಾಕಿ ಪೇಡೆ ತಿನ್ನಿರಿ ಎಂದು ಕರೆ ನೀಡಿದರು.

sushma swaraj 1

Share This Article
Leave a Comment

Leave a Reply

Your email address will not be published. Required fields are marked *