Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕುತೂಹಲ ಕೆರಳಿಸುವ ‘ಮನರೂಪ’ ಮೋಷನ್ ಪೋಸ್ಟರ್ ಬಿಡುಗಡೆ

Public TV
Last updated: March 29, 2019 3:39 pm
Public TV
Share
5 Min Read
MANAROOPA A
SHARE

– ಒಂದು ದುರ್ಗಮ ಕಾನನ ರಸ್ತೆಯ ಮನದ ಮುಗಿಲಿನ ಕಥನ
– ಕರಡಿ ಗುಹೆಯ ನಿಗೂಢತೆಗೆ ಪಶ್ಚಿಮ ಘಟ್ಟದ ಹಸಿರು ಸಿರಿಯ ಕನ್ನಡಿ

ಬೆಂಗಳೂರು: ದಶಕದ ನಂತರ ಭೇಟಿ ಮಾಡುವ ಐದು ಜನ ಗೆಳೆಯರು. ಪಶ್ಚಿಮ ಘಟ್ಟದ ಕತ್ತಲೆಯ ರಾತ್ರಿಯಲ್ಲಿ ನಿಗೂಢವಾಗಿರುವ ಕರಡಿಗುಹೆಯ ಅನ್ವೇಷಣೆಗೆ ಹೊರಟಿದ್ದಾರೆ. ಪ್ರಯಾಣದಲ್ಲಿ ಅವರು ತಮ್ಮ ಗುರಿಯತ್ತ ಸಾಗಿದಂತೆಲ್ಲ ಹಲವು ಅಡೆತಡೆಗಳು ಆಶ್ಚರ್ಯದ ರೂಪದಲ್ಲಿ ಎದುರಾಗುತ್ತವೆ. ಮನರೂಪ ಸಿನಿಮಾದ ಮೋಷನ್ ಪೋಸ್ಟರ್ (ವೀಡಿಯೋ ತುಣುಕು) ಹಲವು ಕುತೂಹಲಗಳನ್ನು ಹಾಗೇ ಉಳಿಸಿಕೊಂಡು, ನೋಡುಗರ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.

ಮನರೂಪ – ಎಪಿಸೋಡ್ ನೆವರ್ ಎಂಡ್ಸ್ ಎಂಬ ಹೊಸ ತಂಡದ ಸಿನಿಮಾ ತನ್ನ ಪೋಸ್ಟರ್ ಮೂಲಕವೇ ಗಮನ ಸೆಳೆದಿತ್ತು. ಈಗ ಬಿಡುಗಡೆಗೊಂಡಿರುವ ಮೋಷನ್ ಪೋಸ್ಟರ್ ಕೇವಲ ಕುತೂಹಲ ಕೆರಳಿಸುವುದು ಮಾತ್ರವಲ್ಲ, ನೋಡುಗರ ಮನದಲ್ಲಿ ಈ ಸಿನಿಮಾದಲ್ಲಿ ಇರುವ ರೋಚಕತೆಯ ಸುತ್ತ ಹತ್ತಾರು ಪ್ರಶ್ನೆಗಳನ್ನು ಮೂಡಿಸುತ್ತಾ ಹೋಗುತ್ತದೆ. ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಹಿನ್ನೆಲೆಯ ಮನರೂಪ ಸಿನಿಮಾ ಕಾಡಿನಲ್ಲಿ ನಡೆಯುವ ಕತೆ. ಇದು ಕಾಡಿನಲ್ಲಿ ನಡೆಯುವ ಕಥನ ಎಂಬುದನ್ನು ನಿರೂಪಿಸಲು ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ.

Manaroopa Dilip Kumar Aryan and Anusha Rao

ಮೋಷನ್ ಪೋಸ್ಟರಲ್ಲಿ ಏನಿದೆ?
ಕತ್ತಲೆಯ ರಾತ್ರಿ, ಒಂಟಿ ರಸ್ತೆಯಲ್ಲ್ಲಿ ಸಾಗುವ ಕಾರಿನಲ್ಲಿ ಸಂಭಾಷಣೆಯೊಂದಿಗೆ ಮೋಷನ್ ಪೋಸ್ಟರ್ ಆರಂಭವಾಗುತ್ತದೆ. ಅದರಲ್ಲಿ ಪುರುಷ ಪಾತ್ರವೊಂದು ‘ನಾನು ಕಾಡಿನ ಹಾದಿಯಲ್ಲಿ ಕಾರಿನಲ್ಲಿ ಚಲಿಸುತ್ತಿರುವಾಗ ಮನಸ್ಸು ಸೂರೆಹೋಗುತ್ತಿರುತ್ತದೆ’ ಎಂದರೆ, ಅದಕ್ಕೆ ಪ್ರತಿಯಾಗಿ ಹೆಣ್ಣಿನ ಧ್ವನಿಯೊಂದು ನಿರಾಸಕ್ತವಾಗಿ ‘ಇನ್ನೆಷ್ಟು ದೂರ ಬೇಕು ಅಲ್ಲಿಗೆ ತಲುಪಲು’ ಎಂದು ಕೇಳುತ್ತದೆ. ಅದಕ್ಕೆ ಉತ್ತರವಾಗಿ ಗಂಡು ಧ್ವನಿ ‘ಹೇ…! ನಾವು ಕರಡಿಗುಹೆ ಸಿಗುವವರೆಗೂ ಹೀಗೆ ಸಾಗುತ್ತಲೇ ಇರೋಣ’ ಎಂದು ನಗುತ್ತಾ ಹೇಳುತ್ತದೆ. ಅಲ್ಲದೆ, ಅದೇ ಧ್ವನಿ ‘ಶಶಾಂಕ, ಈ ರೋಚಕತೆ ಹೇಗಿದೆ’ ಎಂದು ಕೇಳುತ್ತದೆ. ಆಗ ಅಲ್ಲಿರುವುದು ಕೇವಲ ಎರಡು ಪಾತ್ರಗಳಲ್ಲ ಮೂರು ಎಂಬುದು ಗಮನಕ್ಕೆ ಬರುತ್ತದೆ. ಶಶಾಂಕ ಉತ್ತರ ರೂಪದಲ್ಲಿ ‘ಇದು ಎಂಥ ರೋಚಕತೆ? ನನಗೆ ನಾವು ನರಕಕ್ಕೆ ಹೋಗುತ್ತಿದ್ದೇವೆ ಅನಿಸ್ತಾ ಇದೆ’ ಎನ್ನುತ್ತಾನೆ. ಅದಕುತ್ತರವಾಗಿ ಇನ್ನೊಂದು ಹೆಣ್ಣು ಧ್ವನಿ, ‘ಶಟ್ ಅಪ್, ಶಶಾಂಕ. ಎಷ್ಟೋ ದಿನದ ನಂತರ ಭೇಟಿಯಾಗುತ್ತದ್ದೇವೆ. ಸುಮ್ಮನೆ ಈ ಕ್ಷಣಗಳನ್ನು ಅನುಭವಿಸೋಣ’ ಎನ್ನುತ್ತದೆ. ಇದರಿಂದ ಉತ್ತೇಜಿತನಾದ ಗೌರವ್ ‘ಸರಿ ಹೇಳಿದೆ ಪೂರ್ಣ, ಹೇ ಶರವಣ, ನೀನು ನಿದ್ದೆ ಮಾಡ್ತಿದ್ದಿಯೋ ಹೇಗೆ’ ಎಂದಾಗ ಶರವಣ ತಾನೂ ಏನಾದರೂ ಹೇಳಬೇಕು ಎನಿಸಿ ‘ಗೌರವ್, ಕಾರನ್ನು ಜಾಗ್ರತೆಯಿಂದ ಓಡಿಸು ಮಾರಾಯಾ. ಇನ್ನು ಹೋಗಿ ಕರಡಿಗೆ ಡಿಕ್ಕಿ ಹೊಡೆಯಬೇಡ’ ಎನ್ನುತ್ತಾನೆ. ಈ ಸಂಭಾಷಣೆಯಲ್ಲಿರುವುದು ಐದು ಜನ ಸ್ನೇಹಿತರು. ತುಂಬಾ ಸಮಯದ ನಂತರ ಅವರು ಭೇಟಿಯಾಗುತ್ತಿದ್ದಾರೆ, ಅವರೆಲ್ಲರೂ ಲಾಂಗ್ ಡ್ರೈವ್ ಹೋಗಲು ಬಯಸುತ್ತಿದ್ದಾರೆ ಜೊತೆಗೆ ಪಶ್ಚಿಮ ಘಟ್ಟದಲ್ಲಿರುವ ಕರಡಿಗುಹೆಯನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ ಅನ್ನುವ ಅಂಶ ಪ್ರಾರಂಭದ ಹಂತದಲ್ಲಿ ತಿಳಿಯುತ್ತದೆ.

MANAROOPA b

ಆದರೆ ಈ ಸ್ನೇಹಿತರ ಗುಂಪು ಮುಂದೆ ಚಲಿಸಿದಂತೆ, ಇದ್ದಕ್ಕಿದ್ದಂತೆ ಒಂದು ಅಸ್ಪಷ್ಟ ಧ್ವನಿ ಕೇಳುತ್ತದೆ. ಕಾರು ಗಕ್ಕನೆ ಒಂದು ಮರದಡಿಯಲ್ಲಿ ನಿಲ್ಲುತ್ತದೆ. ಈ ಕ್ಷಣದಲ್ಲಿ ಮೋಷನ್ ಪೋಸ್ಟರ್ ಇನ್ನೊಮ್ಮೆ ಜೀವಂತವಾಗುತ್ತದೆ. ಜೊತೆಗೆ ಅದರ ಮೇಲೆ ಗುಮ್ಮಾ 1 ಎಂಬ ಅಕ್ಷರಗಳು ಮೂಡುತ್ತವೆ. ಕಾರು ನಿಂತಿದ್ದೇಕೆ? ಯಾರು ಈ ಗುಮ್ಮ 1? ಕಗ್ಗತ್ತಲ ರಾತ್ರಿ ಮುಂದೆ ಹೇಗೆ ಮುಂದುವರಿಯುತ್ತದೆ? ಎಂಬ ಪ್ರಶ್ನೆಗಳನ್ನು ಮೂಡಿಸಿ ಮೋಷನ್ ಪೋಸ್ಟರ್ ಕೊನೆಯಾಗುತ್ತದೆ. ಜೊತೆಗೆ ಶರವಣ ಅವರ ಹಿನ್ನಲೆ ಸಂಗೀತ ಇನ್ನಷ್ಟು ನಿಗೂಢತೆಯೊಂದಿಗೆ ಸಾಗುತ್ತದೆ. ಇದು ಏನೆಲ್ಲಾ ನಿಗೂಢತೆಯನ್ನು ತನ್ನೊಳಗೆ ಅಡಗಿಸಿಕೊಂಡಿದೆ? ಈ ಸಿನಿಮಾವನ್ನು ಉಸಿರನ್ನು ಬಿಗಿ ಹಿಡಿದುಕೊಂಡು ನೋಡಬೇಕು ಎಂಬುದು ಚಿತ್ರ ತಂಡದ ಅಭಿಪ್ರಾಯ.

ಅಭಿನಯ ವಿಷಯಕ್ಕೆ ಬಂದರೆ, ದಿಲೀಪ್ ಕುಮಾರ ಈ ಚಿತ್ರದ ಮೂಲಕ ಹೊಸ ಪರಿಚಯ. ದಿಲೀಪ್ ತಮ್ಮ ಪ್ರಬುದ್ಧ ಅಭಿನಯವನ್ನು ಈ ಚಲನಚಿತ್ರದಲ್ಲಿ ಶ್ರುತ ಪಡಿಸಿದ್ದಾರೆ. ಕನ್ನಡ ಕಿರುತೆರೆಯ ಪರಿಚಿತ ಮುಖ ಅನುಷಾ ರಾವ್ ಹಾಗೂ ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಿಶಾ ಬಿ. ಆರ್ ಮತ್ತು ಆರ್ಯನ್, ಶಿವ ಪ್ರಸಾದ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮೋಘ್ ಸಿದ್ದಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕವೇ ಆವರಿಸಿಕೊಳ್ಳಲಿದ್ದಾರೆ. ಮತ್ತು ಇವರೆಲ್ಲರದೂ ಸದಾ ಕಾಡುವಂತಹ ಪಾತ್ರಗಳಾಗಿವೆ. ಸೂರಿ ಹಾಗೂ ಲೋಕಿ ಅವರ ಸಂಕಲನ ಈ ಚಿತ್ರದ ಇನ್ನೊಂದು ಹೈಲೈಟ್ಸ್. ಛಾಯಾಗ್ರಾಹಕ ಗೋವಿಂದರಾಜ್ ಕಾಡಿನ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದ್ದಾರೆ. ಶರವಣ ಸಂಗೀತ ಮನಸಿನ ರೂಪಗಳನ್ನು ಕೆರಳಿಸುವಂತಿದೆ ಹಾಗೂ ಸೌಂಡ್ ಡಿಸೈನರ್ ನಾಗರಾಜ್ ಹುಲಿವಾನ್ ಅವರು ಶಿರಸಿ ಮತ್ತು ಸಿದ್ಧಾಪುರ ಕಾಡು ಮೇಡನ್ನು ಅಲೆದು ಫ್ರೆಶ್ ಅನಿಸುವ ಶಬ್ಧವನ್ನು ಸಂಗ್ರಹಿಸಿದ್ದಾರೆ. ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಒಟ್ಟಾರೆ 2019ರಲ್ಲಿ ಯುವ ಮನಸನ್ನು ಮನರೂಪ ತಟ್ಟಲಿದೆ ಎಂಬುದು ಚಿತ್ರತಂಡದ ವಿಶ್ವಾಸ.

Manaroopa Nisha B R Actress

ಮನರೂಪದ ನಿರ್ದೇಶಕ ಕಿರಣ ಹೆಗಡೆ ಪ್ರಕಾರ, ‘ವಿಭಿನ್ನತೆಯಿಂದ ಕೂಡಿದ ಸಿನಿಮಾ ಮೋಷನ್ ಪೋಸ್ಟರನ್ನು ಬಿಡುಗಡೆ ಮಾಡಬೇಕೆಂಬ ನಮ್ಮ ಹಂಬಲ ಮತ್ತು ಪ್ರಯತ್ನದ ಫಲ ಈ ಪೋಸ್ಟರ್. ಕಲಾವಿದ ನವೀನ್ ರೇವಣ್ ಮತ್ತು ಪಿಕ್ಸೆಲ್ ಫ್ರೇಮ್ ನ ಮಹೇಶ್ ಅವರು ಈ ಮೋಷನ್ ಪೋಸ್ಟರ್ ಮಾಡಿಕೊಟ್ಟಿದ್ದಾರೆ. ಸಿನಿಮಾದ ರೋಚಕತೆ ಮತ್ತು ಕುತೂಹಲಕಾರಿ ಅಂಶಗಳನ್ನು ಸಾರಬೇಕು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ನಮ್ಮ ಮೊದಲ ಸಿನಿಮಾ ಪೋಸ್ಟರ್‍ನಲ್ಲಿ ನಾವು ನಮ್ಮ ಚಿತ್ರಕಥೆಯ ವಸ್ತು ಏನೆಂಬುದನ್ನು ತಿಳಿಸಿದ್ದೆವು. ಈಗ ಬಿಡುಗಡೆಗೊಳಿಸಿದ ಮೋಷನ್ ಪೋಸ್ಟರ್ ಐದು ಜನ ಸ್ನೇಹಿತರು ಕರಡಿಗುಹೆಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದನ್ನು ನೇರವಾಗಿ ಹೇಳುತ್ತದೆ ಮತ್ತು ಆ ಐದೂ ಜನ ಸ್ನೇಹಿತರ ಸ್ವಭಾವ ಹೇಗೆ ಎಂಬುದನ್ನೂ ಸಂಕ್ಷಿಪ್ತವಾಗಿ ಸೂಚಿಸುತ್ತದೆ. ಇದರ ಜೊತೆಗೆ ಕಾಡಿನ ಮಧ್ಯದಲ್ಲಿ ನಿಲ್ಲುವ ಕಾರು ಚಿತ್ರಕಥೆಯ ಬಗ್ಗೆ ಇನ್ನೊಂದು ಸುಳಿವನ್ನೂ ನೀಡುತ್ತದೆ. ಮೋಷನ್ ಪೋಸ್ಟರ್ ಮೇಲೆ ‘ಬಲಿಪಶುಗಳು ಸಿಕ್ಕಿಬಿದ್ದರು’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಇದನ್ನು ಯಾರು ಮಾಡಿದರು ಎಂಬುದು ಪ್ರಶ್ನೆ. ಪ್ರೇಕ್ಷಕರು ಇಂತಹ ಕುತೂಹಲ ಹುಟ್ಟಿಸುವ ಸಂಗತಿಗಳನ್ನು ಮೆಚ್ಚುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ತಿಳಿಸಿದರು.

ಚಿತ್ರದ ಛಾಯಾಚಿತ್ರಗ್ರಾಹಕ ಗೋವಿಂದರಾಜ್, ಈ ಚಿತ್ರ ಛಾಯಾಗ್ರಹಣ ತಂಡಕ್ಕೆ ನಾನಾ ಹೊಸ ರೀತಿಯ ಸವಾಲುಗಳನ್ನು ಒಡ್ಡಿತು. ಕ್ಯಾಮರಾ ಹಾಗೂ ಇನ್ನಿತರ ಛಾಯಾಗ್ರಹಣದ ಸಲಕರಣೆಗಳೊಂದಿಗೆ ನಾವು ಹಲವಾರು ಮೈಲಿಗಳಷ್ಟು ದೂರ ನಡೆಯಬೇಕಾಯಿತು. ಏಕೆಂದರೆ ನಮಗೆ ಬೇಕಾದ ಅತಿ ಸೂಕ್ತ ದೃಶ್ಯಗಳಿಗಾಗಿ ಈ ಪ್ರಯಾಸ ಪಡಲೇಬೇಕಿತ್ತು. ಈ ಪ್ರಯಾಸವನ್ನು ನಮ್ಮ ಇಡೀ ತಂಡ ಖುಷಿಖುಷಿಯಾಗಿಯೇ ಕಳೆಯಿತು. ಪಶ್ಚಿಮ ಘಟ್ಟದ ದಟ್ಟ ಕಾನನ ಹಾಗೂ ಕಠಿಣ ಭೌಗೋಳಿಕ ಸ್ಥಿತಿಯ ನಡುವೆ ಛಾಯಾಗ್ರಹಣ ಅತ್ಯಂತ ಸವಾಲಿನ ಕೆಲಸ ಎನ್ನುತ್ತಾರೆ.

ಹೊಸ ಬಗೆಯ ಕಥಾನಕ: 1981 ಹಾಗೂ 1996 ನಡುವೆ ಜನಿಸಿದ, 2019ರ ವೇಳೆಗೆ 23 ಹಾಗೂ 38 ವರ್ಷ ವಯೋಮಾನದ ಮಿಲೆನಿಯಲ್ಸ್ ಜನಾಂಗದ ವ್ಯಕ್ತಿತ್ವವನ್ನು ಹಿಡಿದುಕೊಳ್ಳುವ ಚಿತ್ರ ಮನರೂಪ. ಈ ಪ್ರಯತ್ನ ನಮ್ಮ ಚಿತ್ರರಂಗಕ್ಕೆ ತೀರಾ ಹೊಸದು. ಈ ಜನಾಂಗದ ಬಹುಮುಖ್ಯ ಮನಸ್ಥಿತಿಯೆಂದರೆ ಸ್ವಾರ್ಥ, ಅತಿಯಾಗಿ ತಮ್ಮನ್ನು ತಾವೇ ಪ್ರೀತಿಸುವುದು, ತನ್ನನ್ನೇ ಗಮನಿಸಬೇಕು ಎಂಬ ಅಭಿಲಾಷೆ ಹಾಗೂ ಎಲ್ಲೂ ನಿಲ್ಲದೇ ಯಾವುದೋ ಒಂದು ಅಪರೂಪದ ಸಂಗತಿಯನ್ನು ಅರಸಿಕೊಂಡು ತಿರುಗಾಡುವುದು. ನಿರ್ದೇಶಕ ಕಿರಣ್ ಹೆಗಡೆ ಪ್ರಕಾರ ಈ ಮನೋಸ್ಥಿಯನ್ನು, ಅದರ ಮೂಲ ಪ್ರೇರಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಸಿನಿಮಾ ಜನರಿಗೆ ತಲುಪಿಸಲಿದೆ. ಈ ಚಿತ್ರದ ಚಿತ್ರೀಕರಣವನ್ನು ಉತ್ತರ ಕನ್ನಡದ ಪಶ್ಚಿಮ ಘಟ್ಟ ಶ್ರೇಣಿಯ ಸುಂದರ ತಾಣಗಳಾದ ಶಿರಸಿ, ಸಿದ್ದಾಪುರದಲ್ಲಿ ಮಾಡಲಾಗಿದೆ. ಮನರೂಪ ಪ್ರಯಾಣ, ಹೊಸ ಸ್ಥಳಗಳ ಅನ್ವೇಷಣೆ, ಹಳೆ ಸ್ನೇಹದ ನೆನಪನ್ನು ಮರುಕಳಿಸುವುದು, ಮನಸ್ಸಿನ ಒಳಗಿನ ಕತ್ತಲು, ಸ್ವ-ಮೋಹ, ಸಂಬಂಧಗಳು, ಪ್ರೇಮದ ಪಾವಿತ್ರ್ಯತೆ ಹೀಗೆ ನಾನಾ ಅಂಶಗಳನ್ನು ಒಳಗೊಂಡ ಚಿತ್ರ. ಎಲ್ಲಾ ಅಂದುಕೊಂಡಂತೆ ಆದರೆ ಜೂನ್‍ನಲ್ಲಿ ಮುಂಗಾರಿನ ಮುಸಲಧಾರೆಯ ಜತೆಗೆ ಈ ಚಿತ್ರವೂ ಬಿಡುಗಡೆಯಾಗಲಿದೆ.

TAGGED:Kannada movieKiran hegdeManaroopaಕಿರಣ್ ಹೆಗಡೆಮನರೂಪಮೋಷನ್ ಪೋಸ್ಟರ್
Share This Article
Facebook Whatsapp Whatsapp Telegram

Cinema Updates

virat kohli sumalatha ambareesh
ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ
1 hour ago
madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
1 day ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
2 days ago
shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
2 days ago

You Might Also Like

Siddaramaiah 4
Districts

ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

Public TV
By Public TV
25 minutes ago
congress flag
Bengaluru City

ಪರಿಷತ್‌ಗೆ ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಬ್ರೇಕ್‌!

Public TV
By Public TV
1 hour ago
Hindu activist suhas shetty brutally murdered in Bajpe Mangaluru 1
Dakshina Kannada

ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ NIA ಹೆಗಲಿಗೆ

Public TV
By Public TV
2 hours ago
Prahlad Joshi 1
Dharwad

ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ, ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? – ಜೋಶಿ ಕಿಡಿ

Public TV
By Public TV
2 hours ago
BMTC bus crushes man to death Hebbala Bengaluru
Bengaluru City

ಬಿಎಂಟಿಸಿ ಬಸ್ಸು ಡಿಕ್ಕಿ- ದ್ವಿಚಕ್ರ ವಾಹನ ಸವಾರ ಸಾವು

Public TV
By Public TV
2 hours ago
chitradurga groom assaulted
Chitradurga

ವರದಕ್ಷಿಣೆ ದುರಾಸೆಗೆ 2ನೇ ಮದುವೆಗೆ ರೆಡಿಯಾಗಿದ್ದ ವ್ಯಕ್ತಿಗೆ ಪತ್ನಿಯಿಂದ ಚಪ್ಪಲಿ ಏಟು

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?