Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಚುನಾವಣಾ ಸಮಯದಲ್ಲೇ ಮೋದಿಗೆ ಶಾಕ್ ಕೊಟ್ಟ ಟ್ರಂಪ್!

Public TV
Last updated: March 5, 2019 3:50 pm
Public TV
Share
3 Min Read
trump modi 2
SHARE

ವಾಷಿಂಗ್ಟನ್: ಇನ್ನು ಮುಂದೆ ಆದ್ಯತೆಯ ಮೇರೆಗೆ ವಹಿವಾಟು ನಡೆಸುತ್ತೇವೆ ಎಂದು ಹೇಳುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಆರಂಭಿಸಿ, ಚುನಾವಣಾ ಸಮಯದಲ್ಲೇ ಪ್ರಧಾನಿ ಮೋದಿಗೆ ಶಾಕ್ ಕೊಟ್ಟಿದ್ದಾರೆ.

ಪ್ರಾಶಸ್ತ್ಯಗಳ ಸಾಮಾನ್ಯ ವ್ಯವಸ್ಥೆ (ಜಿಎಸ್‍ಪಿ) ಅಡಿಯಲ್ಲಿ ಭಾರತದಿಂದ ಆಮದಾಗುವ ವಸ್ತುಗಳಿಗೆ ಅಮೆರಿಕ ತೆರಿಗೆಯಿಂದ ವಿನಾಯಿತಿ ನೀಡಿತ್ತು. ಈಗ ಭಾರತ ಮತ್ತು ಟರ್ಕಿ ದೇಶಕ್ಕೆ ನೀಡಿದ್ದ ಶೂನ್ಯ ವ್ಯಾಪಾರ ವಿನಾಯಿತಿಯನ್ನು ನಿಲ್ಲಿಸುತ್ತೇವೆ ಎಂದು ಟ್ರಂಪ್ ಗುಡುಗಿದ್ದಾರೆ.

Cargo Freight Ship

 

ಕಡಿಮೆ ತೆರಿಗೆ ಮತ್ತು ಮಾರುಕಟ್ಟೆ ಸ್ನೇಹಿ ಪರಿಸರವನ್ನು ಅಮೆರಿಕದ ಕಂಪನಿಗಳಿಗೆ ನೀಡುತ್ತೇವೆ ಎಂದು ಭಾರತ ಭರವಸೆ ನೀಡಿತ್ತು. ಆದರೆ ಈ ಭರವಸೆಯನ್ನು ಭಾರತ ಈಡೇರಿಸುತ್ತಿಲ್ಲ. ನಮ್ಮಿಂದ ಸಾಕಷ್ಟು ಲಾಭ ಮಾಡುಕೊಳ್ಳುತ್ತಿದೆಯಾದರೂ ನಮ್ಮ ಕಂಪನಿಯ ಉತ್ಪನ್ನಗಳಿಗೆ ಭಾರೀ ತೆರಿಗೆಯನ್ನು ವಿಧಿಸುತ್ತಿದೆ. ಅಷ್ಟೇ ಅಲ್ಲದೇ ಸುಲಭ ವ್ಯವಹಾರ ಮಾಡಲು ಪೂರಕ ವಾತಾವರಣವನ್ನು ನಿರ್ಮಿಸುತ್ತಿಲ್ಲ ಎಂದು ಎಂದು ಟ್ರಂಪ್ ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಪತ್ರ ಮುಖೇನ ಮಾತನಾಡಿದ್ದಾರೆ.

ತನ್ನಿಂದ ಪೂರಕ ವಾಣಿಜ್ಯ ವಹಿವಾಟು ಬಯಸುವ ರಾಷ್ಟ್ರಗಳಿಂದ ಆಮದಾಗುವ ವಸ್ತುಗಳಿಗೆ ಅಮೆರಿಕ ತೆರಿಗೆ ವಿನಾಯಿತಿಯನ್ನು ನೀಡಿದೆ. ಭಾರತದ ಅಟೋ ಬಿಡಿ ಭಾಗಗಳು, ಕೈಗಾರಿಕಾ ಸಲಕರಣೆಗಳು, ಟೆಕ್ಸ್ ಟೈಲ್ ಸಾಮಾಗ್ರಿಗಳು ಸೇರಿದಂತೆ ಸುಮಾರು 2 ಸಾವಿರ ವಸ್ತುಗಳಿಗೆ ಅಮೆರಿಕ ತೆರಿಗೆ ವಿನಾಯಿತಿಯನ್ನು ನೀಡಿದೆ.

D03o 72U0AAALJK

 

ಪೂರಕ ವಾಣಿಜ್ಯ ವಹಿವಾಟು ಬಯಸುವ ರಾಷ್ಟ್ರಗಳು ತನ್ನ ದೇಶದ ಉತ್ಪನ್ನಗಳಿಗೆ ತೆರಿಗೆ ರಹಿತ, ವಿನಾಯಿತಿ ಮತ್ತು ಕೆಲ ಕ್ಷೇತ್ರಗಳಲ್ಲಿ ತೆರಿಗೆ ರಿಯಾಯಿತಿ ನೀಡಬೇಕು ಎಂದು ಅಮೆರಿಕ ಷರತ್ತು ವಿಧಿಸಿದೆ. ಆದರೆ ಭಾರತ ಮತ್ತು ಟರ್ಕಿ ವಿಚಾರದಲ್ಲಿ ಇದು ಸಾಧ್ಯವಾಗಿಲ್ಲ. ಅಮೆರಿಕ ಕಾಂಗ್ರೆಸ್ ಮಾನದಂಡಗಳನ್ನು ತಲುಪಲು ಈ ದೇಶಗಳು ವಿಫಲವಾಗಿದೆ ಎಂದು ಟ್ರಂಪ್ ದೂರಿದ್ದಾರೆ.

ಅಮೆರಿಕದಿಂದ ಜಿಎಸ್‍ಪಿ ಅಡಿಯಲ್ಲಿ ಅತಿ ಹೆಚ್ಚು ಲಾಭವನ್ನು ಭಾರತ ಪಡೆದುಕೊಳ್ಳುತ್ತಿದೆ. ಜನವರಿಯಲ್ಲಿ ಪ್ರಕಟವಾದ ಅಮರಿಕದ ಕಾಂಗ್ರೆಸ್ ರಿಸರ್ಚ್ ಸರ್ವಿಸ್ ವರದಿಯ ಪ್ರಕಾರ 2017 ರಲ್ಲಿ ಭಾರತ 5.7 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. ಜಿಎಸ್‍ಪಿ ಅಡಿಯಲ್ಲಿ ಅತಿ ಹೆಚ್ಚು ರಫ್ತು ಪಡೆಯುವ ರಾಷ್ಟ್ರಗಳ ಪೈಕಿ ಟರ್ಕಿ ಐದನೇಯ ಸ್ಥಾನದಲ್ಲಿದ್ದು, 2017 ರಲ್ಲಿ ಒಟ್ಟು 1.7 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ.

flipkart walmart

ಭಾರತದ ಮೇಲೆ ಸಿಟ್ಟು ಯಾಕೆ?
ಫ್ಲಿಪ್ ಕಾರ್ಟ್ ಕಂಪನಿಯನ್ನು ಅಮರಿಕದ ವಾಲ್‍ಮಾರ್ಟ್ ಖರೀದಿಸಿದ ಬಳಿಕ ಕೇಂದ್ರ ಸರ್ಕಾರ ಈ ಕಾಮರ್ಸ್ ವಹಿವಾಟಿನಲ್ಲಿ ಕೆಲ ನಿಯಮಗಳನ್ನು ಬಿಗಿಗೊಳಿಸಿದೆ. ಇದರಿಂದ ವಾಲ್‍ಮಾರ್ಟ್ ಗೆ ಭಾರೀ ಹೊಡೆತ ಬಿದ್ದಿದೆ. ಭಾರತದಲ್ಲಿ ಈ ಬೆಳವಣಿಗೆಯಾದ ಕೂಡಲೇ ಅಮೆರಿಕ ಭಾರತದ ಜಿಎಸ್‍ಪಿ ಬಗ್ಗೆ ಮಾತನಾಡಲು ಆರಂಭಿಸಿತು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾದ ಮೂಲಕ ರುಪೇ ಕಾರ್ಡನ್ನು ಭಾರತದಾದ್ಯಂತ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತನಗೆ ಭಾರೀ ನಷ್ಟವಾಗುತ್ತಿದೆ ಎಂದು ಮಾಸ್ಟರ್ ಕಾರ್ಡ್ ಅಮೆರಿಕ ಸರ್ಕಾರಕ್ಕೆ ದೂರು ನೀಡಿತ್ತು. ಈ ಎಲ್ಲ ಕಾರಣಗಳನ್ನು ಮುಂದಿಟ್ಟು ಟ್ರಂಪ್ ಈಗ ವ್ಯಾಪಾರ ಸಮರ ಆರಂಭಿಸಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಮಾಸ್ಟರ್ ಕಾರ್ಡ್ ದೂರು ನೀಡಿದ್ದು ಯಾಕೆ? ಮಾರುಕಟ್ಟೆಯಲ್ಲಿ ಹೊಡೆತ ಬಿದ್ದಿದ್ದು ಹೇಗೆ?

ಯಾರಿಗೆ ಹೊಡೆತ ಬೀಳುತ್ತೆ?
ಒಂದು ವೇಳೆ ಅಮೆರಿಕ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿದರೆ ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಪೆಟ್ಟು ಬೀಳಲಿದೆ. ಅದರಲ್ಲೂ ಮುಖ್ಯವಾಗಿ ಕೈಮಗ್ಗ ಮತ್ತು ಕೃಷಿ ಉತ್ಪನ್ನಗಳ ಮೇಲೆ ಹೆಚ್ಚು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

mastercard social e1551777728214

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:donald trumpindiakannada newsnarendra modiTradeWarಚುನಾವಣೆಡೊನಾಲ್ಡ್ ಟ್ರಂಪ್ನರೇಂದ್ರ ಮೋದಿ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Dhanush Mrunal Thakur
ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?
Cinema Latest Top Stories
Allu Arjun Sneha Reddy
ಶೂಟಿಂಗ್‌ಗಾಗಿ ಮುಂಬೈಗೆ ಹಾರಿದ ಐಕಾನ್ ಸ್ಟಾರ್
Cinema Latest Top Stories
chiranjeevi 6
ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ
Cinema Latest South cinema
Santosh balaraj 2
ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ನಟ ಸಂತೋಷ್ ಬಾಲರಾಜ್ ಅಂತ್ಯಕ್ರಿಯೆ
Bengaluru Rural Cinema Latest Sandalwood
Actress Ramya case koppal man into custody
ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಕೊಪ್ಪಳ ಮೂಲದ ಓರ್ವ ವಶಕ್ಕೆ
Cinema Districts Karnataka Koppal Latest Top Stories

You Might Also Like

Madhuri Elephant
Latest

ಮಾಧುರಿ ಆನೆಯನ್ನು ಮಠಕ್ಕೆ, ಸರ್ಕಾರಿ ಮೃಗಾಲಯಕ್ಕೆ ಸ್ಥಳಾಂತರಿಸಿ – ಜೈನ ಸಮುದಾಯ ಒತ್ತಾಯ

Public TV
By Public TV
8 minutes ago
AshwiniVaishnaw
Latest

ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ

Public TV
By Public TV
12 minutes ago
Mangaluru Blast Case The Shariq cooker bomb capable of blowing up the bus FSL Investigation report 1
Bengaluru City

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿಯ ಬ್ಯಾಂಕ್ ಖಾತೆ ಸೀಜ್

Public TV
By Public TV
35 minutes ago
Dharmasthala mass burial case assault
Dakshina Kannada

ಧರ್ಮಸ್ಥಳ ಕೇಸ್; 2 ಗುಂಪುಗಳ ನಡುವೆ ಮಾರಾಮಾರಿ – ವರದಿಗೆ ಹೋದ ಖಾಸಗಿ ವಾಹಿನಿ ವರದಿಗಾರ, ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ

Public TV
By Public TV
42 minutes ago
D K Shivakumar
Bengaluru City

ನ.1ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ಚುನಾವಣೆಗೆ ಪೂರ್ವಸಿದ್ಧತೆ: ಡಿಕೆಶಿ

Public TV
By Public TV
1 hour ago
youtubers beaten up Chaos erupted in Dharmasthala devotees outraged 2
Dakshina Kannada

ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ – ಸಿಡಿದ ಧರ್ಮಸ್ಥಳದ ಭಕ್ತರು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?