Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅನುಮಾನಸ್ಪದವಾಗಿ ಮಗಳು ಸಾವು- 1 ಲಕ್ಷ ಪಡೆದು ಮರಣೋತ್ತರ ವರದಿ ಕೊಟ್ಟ ಪೊಲೀಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ಅನುಮಾನಸ್ಪದವಾಗಿ ಮಗಳು ಸಾವು- 1 ಲಕ್ಷ ಪಡೆದು ಮರಣೋತ್ತರ ವರದಿ ಕೊಟ್ಟ ಪೊಲೀಸ್

Chikkaballapur

ಅನುಮಾನಸ್ಪದವಾಗಿ ಮಗಳು ಸಾವು- 1 ಲಕ್ಷ ಪಡೆದು ಮರಣೋತ್ತರ ವರದಿ ಕೊಟ್ಟ ಪೊಲೀಸ್

Public TV
Last updated: February 2, 2019 9:39 am
Public TV
Share
2 Min Read
CKB STUDENT
SHARE

– ಎಫ್‍ಎಸ್‍ಎಲ್ ವರದಿಗಾಗಿ 1 ವರ್ಷದಿಂದ ಪೋಷಕರು ಅಲೆದಾಟ

ಚಿಕ್ಕಬಳ್ಳಾಪುರ: ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಮಗಳ ಸಾವಿನ ಸತ್ಯ ತಿಳಿಸಿ, ಮಗಳ ಸಾವಿನ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್) ವರದಿಯಾದರೂ ಕೊಡಿ ಅಂತ ಪ್ರತಿದಿನ ತಾಯಿ ಪೊಲೀಸ್ ಠಾಣೆಗೆ ಬಂದು ಅಂಗಲಾಚಿದರೂ ಪೊಲೀಸರು ಸ್ಪಂದಿಸಿಲ್ಲವಂತೆ. ಎಫ್‍ಎಸ್‍ಎಲ್ ವರದಿ ಕೊಡುತ್ತೀನಿ ಎಂದ ಪೊಲೀಸಪ್ಪ ಒಂದು ಲಕ್ಷ ರೂಪಾಯಿ ಪಡೆದು ಮರಣೋತ್ತರ ಪರೀಕ್ಷೆ ವರದಿ ಕೊಟ್ಟಿದ್ದಾನೆ ಅಂತ ತಾಯಿಯೊಬ್ಬರು ಪೊಲೀಸ್ ಠಾಣೆಯೊಳಗೆ ರಂಪಾಟ ಮಾಡಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ckb

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೆಸಲಪಲ್ಲಿ ಗ್ರಾಮದ ನಿವಾಸಿ ರಾಧಾ ಪೊಲೀಸ್ ಠಾಣೆಯೊಳಗೆ ರಂಪಾಟ ಮಾಡಿದ ಮಹಿಳೆ. ಇವರ ಮಗಳು ಸರಿತಾ ಚಿಕ್ಕಬಳ್ಳಾಪುರ ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ಬಿಜಿಎಸ್ ವಸತಿ ನಿಲಯದಲ್ಲೇ 2017 ರ ಸೆಪ್ಟೆಂಬರ್ 9 ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಹೀಗಾಗಿ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ ಅಂತ ಸರಿತಾ ತಂದೆ ಶ್ರೀನಿವಾಸ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ 2018ರ ಏಪ್ರಿಲ್ ನಲ್ಲೇ ಎಫ್‍ಎಸ್‍ಎಲ್ ರಿಪೋರ್ಟ್ ಲಭಿಸಿದ್ದು, ಎಫ್‍ಎಸ್‍ಎಲ್ ವರದಿ ಪ್ರಕಾರ ಸರಿತಾ ಆರ್ಗಾನ್ ಫಾಸ್ಪರಸ್ ಕ್ರೀಮಿನಾಶಕ ಸೇವಿಸಿ ಸಾವನ್ನಪ್ಪಿರುವುದು ಧೃಡವಾಗಿದೆ.

vlcsnap 2019 02 02 09h31m52s908

ಮಗಳ ಸಾವಿನ ಸತ್ಯ ತಿಳಿಸಿ ಅಂತ ಅಂದಿನಿಂದ ಇಂದಿನವರೆಗೂ ಅಲೆದರೂ ಪೊಲೀಸರು ಸತ್ಯ ಮಾತ್ರ ತಿಳಿಸುತ್ತಿಲ್ಲ. ಆದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೇದೆ ರಂಗನಾಥ್ ಹಾಗೂ ಪಿಎಸ್‍ಐ ವೆಂಕಟೇಶ್ ಎಫ್‍ಎಸ್‍ಎಲ್ ವರದಿ ಕೊಡುತ್ತೀವಿ ಅಂತ ಒಂದು ಲಕ್ಷ ರೂಪಾಯಿ ಲಂಚ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷಾ ವರದಿ ಕೊಟ್ಟಿದ್ದಾರೆ ಅಂತ ಮೃತ ಸರಿತಾ ತಾಯಿ ರಾಧಾ ಗಂಭೀರ ಆರೋಪ ಮಾಡಿದ್ದಾರೆ.

ಎಫ್‍ಎಸ್‍ಎಲ್ ವರದಿ ಸಿಗುತ್ತೆ ಅಂತ ಪೊಲೀಸರಿಗೆ ಒಂದು ಲಕ್ಷ ಕೊಟ್ಟು ಸರಿತಾ ತಂದೆ ತಾಯಿಗೆ ಪೊಲೀಸರು ಕೊಟ್ಟ ವರದಿ ಎಫ್‍ಎಸ್‍ಎಲ್ ಅಲ್ಲ ಅದು ಮರಣೋತ್ತರ ಪರೀಕ್ಷೆ ಮಾತ್ರ ಅಂತ ಗೊತ್ತಾದ ಕೂಡಲೇ ಪೋಷಕರು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕರ್ತವ್ಯನಿರತನಾಗಿದ್ದ ಪಿಎಸ್‍ಐ ವೆಂಕಟೇಶ್ ವಿರುದ್ಧ ಮುಗಿಬಿದ್ದು ನಡುರಸ್ತೆಯ್ಲಲೇ ಹಾದಿ ಬೀದಿ ರಂಪಾಟ ಮಾಡಿದ್ದಾರೆ. ಇದಲ್ಲದೇ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯೊಳಗೆ ನುಗ್ಗಿ ಪಿಎಸ್‍ಐ ವೆಂಕಟೇಶ್ ಹಾಗೂ ಪೇದೆ ರಂಗನಾಥ್ ವಿರುದ್ಧ ಕೆಂಡಕಾರಿದ್ದಾರೆ.

cbk

ಪೋಷಕರ ಆರೋಪ:
ಆದಿಚುಂಚನಗಿರಿ ಶಾಖಾಮಠದ ಬಿಜಿಎಸ್ ವಸತಿ ನಿಲಯದಲ್ಲೇ ವಿದ್ಯಾರ್ಥಿ ಸರಿತಾ ಸಾವನ್ನಪ್ಪಿರುವುದರಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತೆ ಅನ್ನೋ ಉದ್ದೇಶದಿಂದ ಸಂಸ್ಥೆಯವರು ಪ್ರಕರಣದ ಮಾಹಿತಿಯನ್ನ ಬಹಿರಂಗಪಡಿದಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ನಮಗೆ ಕದ್ದು ಮುಚ್ಚಿ ಎಫ್‍ಎಸ್‍ಎಲ್ ವರದಿ ಕೊಡುತ್ತೀನಿ ಅಂತ ಅಪೂರ್ಣವಾದ ಮರಣೋತ್ತರ ವರದಿ ಕೊಟ್ಟು ಲಕ್ಷ ಕೊಳ್ಳೆ ಹೊಡೆದಿದ್ದಾರೆ ಅನ್ನೋದು ಪೋಷಕರ ಗಂಭೀರ ಆರೋಪವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಮಹಿಳೆ ಮಾಡಿದ ಆರೋಪ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

TAGGED:chikkaballapurdeathFSL ReportpolicePublic TVಎಫ್‍ಎಸ್‍ಎಲ್ ವರದಿಚಿಕ್ಕಬಳ್ಳಾಪುರಪಬ್ಲಿಕ್ ಟಿವಿಪೊಲೀಸ್ಸಾವು
Share This Article
Facebook Whatsapp Whatsapp Telegram

Cinema news

I Want Nayanthara AIADMK MPs Dig At MK Stalins Initiative Sparks Row
ನನಗೆ ನಯನತಾರ ಬೇಕು, ಕನಸು ಈಡೇರಿಸುವಿರಾ – ಎಐಎಡಿಎಂಕೆ ಸಂಸದನ ಪ್ರಶ್ನೆ
Cinema Latest National South cinema Top Stories
darshan 1
ದರ್ಶನ್ ಒಳಸಂದರ್ಶನಕ್ಕೆ ಕೋರ್ಟ್ ಅಸ್ತು – ಅಂತಿಮ ನಿರ್ಧಾರ ಜೈಲು ಅಧೀಕ್ಷಕರಿಗೆ ಬಿಟ್ಟದ್ದು ಎಂದ ನ್ಯಾಯಾಲಯ
Bengaluru City Cinema Court Districts Karnataka Latest Top Stories
Nora Fatehi
ʻಸರ್ಸೆ ಸರ್ಸೆ ಸೆರಗ ಸರ್ಸೆʼ ಹಾಡಿನ ವಿವಾದ – ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ
Bollywood Cinema Latest Sandalwood Top Stories
Salman Khan
ಸಲ್ಮಾನ್ ಖಾನ್ ಅಭಿನಯದ `ಬ್ಯಾಟಲ್ ಆಫ್ ಗಲ್ವಾನ್’ ಈಗ `ಮಾತೃಭೂಮಿ’
Bollywood Cinema Latest Top Stories

You Might Also Like

sslc exam madhu bangarappa
Bengaluru City

ಇಂದಿನಿಂದ SSLC ಪರೀಕ್ಷೆ 1 ಪ್ರಾರಂಭ – ವಿದ್ಯಾರ್ಥಿಗಳಿಗೆ ಶುಭಕೋರಿದ ಸಚಿವ ಮಧುಬಂಗಾರಪ್ಪ

Public TV
By Public TV
11 minutes ago
Bevu bella
Latest

ಯುಗಾದಿ ಸ್ಪೆಷಲ್‌ – ಬೇವು, ಬೆಲ್ಲ ಮಾಡುವ ವಿಧಾನ

Public TV
By Public TV
29 minutes ago
GT Devegowda
Districts

ಜೆಡಿಎಸ್‌ನಲ್ಲಿ ಇದ್ದೀನಿ, ಮುಂದೆಯೂ ಇರ್ತೀನಿ – ಕ್ಷೇತ್ರದಲ್ಲಿ ಭಾವನಾತ್ಮಕ ದಾಳ ಪ್ರಯೋಗಿಸಿದ ಜಿಟಿಡಿ

Public TV
By Public TV
1 hour ago
robbery gang
Bengaluru City

ಬೆಂಗಳೂರು| ಬೈಕ್‌ ಅಡ್ಡಗಟ್ಟಿ ದರೋಡೆ ಮಾಡಿದ್ದ ಗ್ಯಾಂಗ್‌ ಬಂಧನ

Public TV
By Public TV
1 hour ago
Private Bus
Bengaluru City

ಯುಗಾದಿಗೆ ಊರಿಗೆ ಹೊರಟವರಿಗೆ ಶಾಕ್ – ದರ ಹೆಚ್ಚಿಸಿದ ಖಾಸಗಿ ಬಸ್‌ಗಳು, ಎಲ್ಲಿಗೆ ಎಷ್ಟು?

Public TV
By Public TV
2 hours ago
Iran Strait of Hormuz
Latest

ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?