Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

Public TV
Last updated: January 21, 2019 2:55 pm
Public TV
Share
11 Min Read
sri 4
SHARE

ನಡೆದಾಡುವ ದೇವರು, ಕಾಯಕ ಯೋಗಿ ಸಿದ್ದಗಂಗಾ ಡಾ. ಶ್ರೀ ಶ್ರೀಗಳು ಇಂದು ನಿಧನರಾಗಿದ್ದಾರೆ. ಆದರೆ ಅವರ ಕೆಲಸ, ಅವರ ಪ್ರವಚನಗಳು ಈಗಲೂ ನಮ್ಮ ಕಣ್ಣ ಮುಂದಿದೆ. ಹೀಗಾಗಿ ಶ್ರೀಗಳ 111 ಸಾಧನೆ, ವೈಶಿಷ್ಟ್ಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

1) ಶತಾಯುಷಿ ಸಿದ್ದಗಂಗಾ ಶ್ರೀಗಳು ಹುಟ್ಟಿದ್ದು 1908 ರ ಏಪ್ರಿಲ್ 1 ರಂದು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ. ಹೊನ್ನಪ್ಪ, ಗಂಗಮ್ಮ ದಂಪತಿ ಪುತ್ರರತ್ನರಾಗಿ ಹುಟ್ಟಿ ಈಗ ಇಡೀ ಜಗವೇ ಮೆಚ್ಚುವ ಶಾಂತಿದೂತರಾಗಿದ್ದಾರೆ.

2) 1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆ.

3) 1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ.

4) 1930 : ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀ ಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾದ ಶಿವಣ್ಣ.

5) 1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ. ಗುರುಗಳ ಪೂರ್ವಾನುಗ್ರಹ ಹಾಗೂ ಶಿವಕುಮಾರ ಸ್ವಾಮಿಗಳೆಂದು ನೂತನ ನಾಮಧೇಯ.

6) 1937 : 1917ರಲ್ಲಿ ಪ್ರಾರಂಭವಾದ ಸಂಸ್ಕೃತ ಪಾಠ ಶಾಲೆಯನ್ನು ಕಾಲೇಜಾಗಿ ಪರಿವರ್ತಿಸಿದರು.

7) 1941: ಜ.11ರಂದು ಶ್ರೀ ಉದ್ಧಾನಶಿವಯೋಗಿ ಸ್ವಾಮೀಜಿ ಲಿಂಗೈಕ್ಯರಾದ ನಂತರ ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

8) 1944 : ತುಮಕೂರು ನಗರದಲ್ಲಿ ಸಿದ್ದಗಂಗಾ ಪ್ರೌಢ ಶಾಲೆ ಆರಂಭ.

9) 1949: ಜೂ.18ರಂದು ಶ್ರೀಸಿದ್ದಲಿಂಗೇಶ್ವರರ ಸಂಸ್ಕೃತ ಮತ್ತು ವೇದಪಾಠ ಶಾಲೆ ರಜತಮಹೋತ್ಸವ.

10) 1950: ಧರ್ಮಸ್ಥಳದ ಶ್ರೀಮಂಜಯ್ಯ ಹೆಗ್ಗಡೆಯವರಿಂದ ಮಹಾ ನಡಾವಳಿ ಉತ್ಸವದಲ್ಲಿ ಗೌರವ ಸ್ವೀಕಾರ.

11) 1951: ಶ್ರೀಗಳಿಂದ ಪ್ರಭುಲಿಂಗ ಲೀಲೆ ಪ್ರವಚನ – ಪ್ರಭುಲಿಂಗ ಲೀಲೆಯ ತತ್ವಸಾರಾಂಶಗಳನ್ನು ಪ್ರಚಾರ ಪಡಿಸಿದ ಮೊದಲ ಹೆಜ್ಜೆ.

12) 1954 : ಶ್ರೀಕ್ಷೇತ್ರದ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ.

170331kpn72 copy 1

13) 1955 : ಶ್ರೀ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಪ್ರೌಢಶಾಲೆ ಸ್ಥಾಪನೆ.

14) 1956 : ಸಿದ್ದಗಂಗಾ ಉಪಧ್ಯಾಯ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪನೆ.

15) 1956 : ಶ್ರೀಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡ ನಿರ್ಮಾಣ.

16) 1960 : ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.

17) 1962 : ಧರ್ಮಸ್ಥಳದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಇಡೀ ವಿಶ್ವವೇ ಮೆಚ್ಚುವಂತೆ ಪ್ರವಚನ ನೀಡಿದ್ದ ಶ್ರೀಗಳು.

18) 1962 : ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆ.

19) 1963 : ಜಾತ್ರೆಯಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ.

20) 1963 : ತುಮಕೂರಿನಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭ.

21) 1963 : 44ನೇ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಶ್ರೀಮಠದಲ್ಲಿ ನಡೆದಿದ್ದು, ಶ್ರೀಗಳು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ರಂ.ಶ್ರೀ ಮುಗಳಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.

22) 1965 : ಶ್ರೀಮಠದಲ್ಲಿ ಕನ್ನಡ ಪಂಡಿತ ತರಗತಿ ಸ್ಥಾಪನೆ.

23) 1965: ಸಿದ್ದಗಂಗಾ ತ್ರೈಮಾಸಿಕ ಪತ್ರಿಕೆ ಆರಂಭ.

24) 1965: ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ.

25) 1966 : ತುಮಕೂರಿನಲ್ಲಿ ಸಿದ್ದಗಂಗಾ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು ಸ್ಥಾಪನೆ.

26) 1967 : ಸಂಜೆ ಕಾಲೇಜು ಸ್ಥಾಪನೆ – ಬೆಳಗ್ಗೆ ಕೆಲಸ ಮಾಡಿ, ಸಂಜೆ ಓದು. ಆಸ್ತಕ ವಿದ್ಯಾರ್ಥಿ ಅನುಕೂಲವಾಗುವ ರೀತಿಯಲ್ಲಿ ಸ್ಥಾಪನೆ.

27) 1968 : ಬಸವ ಕಲ್ಯಾಣದಲ್ಲಿ ನಡೆದ ಬಸವೇಶ್ವರರ ಅಷ್ಟ ಶತಮಾನೋತ್ಸವದ ಅಧ್ಯಕ್ಷತೆ, ಬಸವಣ್ಣರ ಮಹಾತತ್ವ ಸಾರಿದ ಶ್ರೀಗಳು – ದೇಶದ ಮೂಲೆ ಮೂಲೆಯಿಂದ ಆಗಮಿಸಿದ್ದ ಭಕ್ತರು.

150401kpn59

28) 1969 : ಮುಂಬೈನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಅಧಿವೇಶನದ ಅಧ್ಯಕ್ಷತೆ.

29) 1969 : ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಮಾವೇಶದಲ್ಲಿ ನೇತೃತ್ವ, ಹಿಂದೂಧರ್ಮದ ಜಾಗೃತಿಯಲ್ಲಿ ಭಾಗಿ.

30) 1970 : ಡಿ.27 ಬೆಂಗಳೂರಿನಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ.

31) 1972 : ಮೇ.26 ಶ್ರೀಮಠದ ಪೀಠಾಧಿಕಾರ ಸ್ವೀಕಾರದ ರಜತ ಮಹೋತ್ಸವ. ಮುದ್ರಣಾಲಯ ಪ್ರಾರಂಭ

32) 1972 : ಮೇ.28 ಉಚಿತ ವಿದ್ಯಾರ್ಥಿ ನಿಲಯ ಮತ್ತು ಸಂಸ್ಕೃತ ಕಾಲೇಜಿನ ಸುವರ್ಣ ಮಹೋತ್ಸವ.

33) 1974 : ಅಖಿಲ ಭಾರತ ವೀರಶೈವ ಮಠಾಧೀಪತಿಗಳ ಸಂಘದ ಅಧ್ಯಕ್ಷತೆ.

34) 1977 : ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರಗಳ ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿಗಳ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ.

25) 1978 : ಗ್ರಾಮಾಂತರ ಬಸವಜಯಂತಿ ಯೋಜನೆ ಆರಂಭ.

36) 1982: ಏ.24ರಂದು ರಾಷ್ಟ್ರಪತಿ ನೀಲಂ ಸಜೀವರೆಡ್ಡಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಸ್.ಗುಂಡೂರಾವ್ ಅವರಿಂದ ಸುವರ್ಣಮಹೋತ್ಸವ ನೆನಪಿಗಾಗಿ ಗೌರವ ಗ್ರಂಥ `ಸಿದ್ಧಗಂಗಾಶ್ರೀ’ ಬಿಡುಗಡೆ.

37) 1982 : ಶ್ರೀಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ.

38) 1982 : ಪೀಠಾರೋಹಣ ಸುವರ್ಣ ಮಹೋತ್ಸವ ಸಮಾರಂಭ

39) 1984 : ನೆಲಮಂಗಲದಲ್ಲಿ ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ.

40) 1984 : ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ಸ್ಥಾಪನೆ.

41) 1987: ಏ.20 ಹುಬ್ಬಳ್ಳಿ 3 ಸಾವಿರ ಮಠದ ಜಗದ್ಗುರು ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿ ರಜತ ಮಹೋತ್ಸವದ ಅಧ್ಯಕ್ಷತೆ.

42) 1988 : ಮಾ.30 ಉತ್ತರಾಧಿಕಾರಿಯಾಗಿ ಕಿರಿಯ ಶ್ರೀ ಸಿದ್ಧಲಿಂಗಸ್ವಾಮೀಜಿ ನೇಮಕ.

sri 3

43) 1992 : ಫೆ.16 ಶ್ರೀಗಳ ವಜ್ರ ಮಹೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ ಡಾ.ಶಂಕರ್ದಯಾಳ್ ಶರ್ಮ ಅವರಿಂದ ಸಿದ್ದಗಂಗಾ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಶಂಕುಸ್ಥಾಪನೆ.

44) 1995 : ಫೆ.2 ಸಿದ್ದಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.

45) 1995 : ತಮಿಳುನಾಡು ಧರ್ಮಪುರಿ ಜಿಲ್ಲೆ ಡೆಂಕಟಣ ಕೋಟೆ ತಾಲೂಕು ಮೊಳ್ಳಳ್ಳಿ ಗ್ರಾಮದಲ್ಲಿ ವಿಶ್ವ ಬಸವ ಜಯಂತಿ ಕಾರ್ಯಕ್ರಮದ ನೇತೃತ್ವ.

46) 1996 : ಕರ್ನಾಟಕ ಫ್ರೌಢಶಿಕ್ಷಣ ಮಂಡಳಿಯ 1995ನೇ ವರ್ಷದ ಘಟಿಕೋತ್ಸವದಲ್ಲಿ ಅನುಗ್ರಹ ಭಾಷಣ.

47) 1997 : ಮಾ.22 ಶ್ರೀಗಳ ವಜ್ರಮಹೋತ್ಸವ ಬೃಹತ್ ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ ಹಾಗೂ ದಾಸೋಹ ಸಿರಿ ಗ್ರಂಥ ಸಮರ್ಪಣೆ.

48) 1997 : ತಮಿಳುನಾಡಿನ ಸೇಲಂನಲ್ಲಿ ನಡೆದ ವೀರಶೈವ ಸಮಾಜದ ಸಮ್ಮೇಳನದ ಅಧ್ಯಕ್ಷತೆ.

49) 2000 : ಜ.30ರಂದು ಪ್ರಧಾನಿ ವಾಜಪೇಯಿ ಅವರಿಂದ ಸಂಸ್ಕೃತ ಕಾಲೇಜು, ಅಮೃತ ಮಹೋತ್ಸವ ಉದ್ಘಾಟನೆ. ಅಂಧ ಮಕ್ಕಳಿಗೆ ನೂತನ ಶಾಲಾ ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ.

50) 2005 : ಶ್ರೀಗಳ 98ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಭಾಗಿ.

51) 2005 : ಪೀಠಾರೋಹಣ(ಅಮೃತ ಮಹೋತ್ಸವ) ಸಮಾರಂಭ ಗೃಹಸಚಿವ ಶಿವರಾಜ್ ಪಾಟೀಲ್, ಸಿಎಂ ಧರಂಸಿಂಗ್ ಭಾಗಿ.

52) 2006 : ಏ.7 ಶ್ರೀಗಳ ಗುರುವಂದನಾ ಕಾರ್ಯಕ್ರಮ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ರಾಜ್ಯಪಾಲ ಚತುರ್ವೇದಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧ್ಯಕ್ಷರು ಭಾಗವಹಿಸಿದ್ದರು.

53) 2007 : ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ. ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ

54) 2009 : ಕೃಷಿ ಸಮಾವೇಶ ಹಾಗೂ ಮಹಿಳಾ ಸಮಾವೇಶ

55) 2009 : ಶ್ರೀಗಳ ಶತಮಾನೋತ್ಸವ ಗುರುವಂದನಾ ಕಾರ್ಯಕ್ರವಕ್ಕೆ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಆಗಮಿಸಿದ್ದರು.

56) 2010 : ಶ್ರೀಗಳಿಗೆ ಬಸವಶ್ರೀ ಪುರಸ್ಕಾರದ ಗೌರವ.

57) 2011 : ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಶ್ರೀಮಠದ ಅಧ್ಯಕ್ಷ ಪದವಿಯ ವರ್ಗಾವಣೆ

58) 2012 : ಗುರುವಂದನಾ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭಾಗಿ.

59) 2013 : ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.

sri 5

60) 2013 : ಗುರು ಪಟ್ಟ ಏರಿದ 80 ವರ್ಷದ ಅಮೃತ ಮಹೋತ್ಸವ ಆಚರಣೆ.

61) 2014 : ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ.

62) 2015 : ಜುಲೈನಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ

63) 2017 : ಕರ್ನಾಟಕ ಸರ್ಕಾರದ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ

64) 2017: ಸಿದ್ದಗಂಗಾ ಆಸ್ಪತ್ರೆ ಆರಂಭ

65) ಜಾತ್ಯಾತೀತ ಸಂಪ್ರದಾಯವನ್ನು ಕಾರ್ಯರೂಪಕ್ಕೆ ತಂದಿರುವ ಖ್ಯಾತಿ ಮಠಕ್ಕಿದೆ.

66) ಶರಣ ಶ್ರೀ ಬಸವೇಶ್ವರರ ಹಾಗೂ ಇತರ ಶರಣರ ತತ್ವಾದರ್ಶಗಳನ್ನು ಕಾರ್ಯರೂಪಕ್ಕೆ ತಂದಿರುತ್ತದೆ.

67) ದಿನಂಪ್ರತಿ 10 ಸಾವಿರ ವಿದ್ಯಾರ್ಥಿಗಳಿಗೆ ಮತ್ತು 3, 5 ಸಾವಿರ ಭಕ್ತಾಧಿಗಳಿಗೆ ಅನ್ನದಾಸೋಹ.

68) ಇದುವರೆಗೆ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವಿಧ ದಾಸೋಹದ ಅನುಕೂಲ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

69) ರಾಜ್ಯಾದ್ಯಂತ 125 ವಿವಿಧ ಶಿಕ್ಷಣ ಸಂಸ್ಥೆಗಳು, ಸಂಸ್ಕೃತ ಕಾಲೇಜು ಹಾಗೂ ಸಂಸ್ಕೃತ ಪಾಠ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

70) ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಶ್ರೀಗಳು ದಿನಂಪ್ರತಿ 18 ಗಂಟೆ ಪೂಜೆ, ಜಪ, ಭಕ್ತರಿಗೆ ದರ್ಶನ ನೀಡುತ್ತಿದ್ದರು.

71) 82 ವರ್ಷಗಳಿಂದ ಶ್ರೀ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡು ಬಂದಿದ್ದ ಶ್ರೀಗಳ ರಜತ, ಸುವರ್ಣ, ವಜ್ರ, ಪ್ಲಾಟಿನಂ, ಮತ್ತು ಶತಮಾನೋತ್ಸವ ಸಮಾರಂಭಗಳು ಶ್ರೀ ಕ್ಷೇತ್ರದಲ್ಲಿ ಅಚ್ಚಳಿಯದಂತೆ ವಿಜ್ರಂಭಣೆಯಿಂದ ನಡೆದಿತ್ತು.

72) 1905 ರಿಂದ ಸಿದ್ದಲಿಂಗೇಶ್ವರ ಜಾತ್ರೆ ಮತ್ತು ದಿನಗಳ ಪರಿಷೆ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ.

73) ಸಾಮಾಜಿಕ ಕ್ರಾಂತಿಕಾರರಾದ ಜಗಜ್ಯೋತಿ ಬಸವೇಶ್ವರ ನಾಟಕ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಪ್ರದರ್ಶನ ಕಂಡಿದೆ.

74) 50 ವರ್ಷಗಳಿಂದ ಶ್ರೀ ಸಿದ್ದಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಪ್ರತಿವರ್ಷವೂ ನಡೆಸಿಕೊಂಡು ಬರಲಾಗುತ್ತಿದೆ.

75) ಶ್ರೀ ಕ್ಷೇತ್ರದ ವಿದ್ಯಾರ್ಥಿಗಳು ದಿನನಿತ್ಯ ಸಾಮೂಹಿಕ ಪ್ರಾರ್ಥನೆಯಲ್ಲಿ ತಪ್ಪದೇ ಶೃದ್ಧೆಯಿಂದ ಪಾಲ್ಗೊಳ್ಳುತ್ತಿದ್ದಾರೆ.

76) ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಸ್ವತಂತ್ರವಾಗಿ ನಡೆಯುತ್ತಿದ್ದ ಶ್ರೀಗಳು ಕನ್ನಡಕವಿಲ್ಲದೆ ಓದುತ್ತಿದ್ದರು.

77) 1982 ಕುಣಿಗಲ್ ನಲ್ಲಿ ಕರ್ನಾಟಕ ನವಚೈತನ್ಯ ಎಂಬ ಅಂಧ ಮಕ್ಕಳ ಶಾಲೆಯನ್ನು ಶ್ರೀಗಳು ತೆರೆದಿದ್ದರು.

sri 6

78) 1941ರಲ್ಲಿ ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದಾಗ ಮಠದಲ್ಲಿ ಕೇವಲ 300 ರೂಪಾಯಿ, 16 ಎಕರೆ ಖುಷ್ಕಿ ಜಮೀನು ಮಾತ್ರವಿತ್ತು, ಆದರೆ ಇಂದು ಮಠದ ಸಾರ್ವಜನಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಲ್ಲಿ ಶ್ರೀಗಳ ಶ್ರಮ ಅನನ್ಯ.

79) ಯಂತ್ರಧಾರಣ ಮಂಚದಲ್ಲಿ ಕುಳಿತು ಭಕ್ತಾದಿಗಳಿಗೆ ಹಾಗೂ ಮಕ್ಕಳಿಗೆ ಯಂತ್ರ ಧಾರಣೆ ಮಾಡುವ ಪರಿಪಾಠ ಇಂದು ಕೂಡ ಚಾಚುತಪ್ಪದೇ ನಡೆದುಕೊಂಡು ಬಂದಿದೆ. ಮಕ್ಕಳ ಎಷ್ಟೋ ಕಾಯಿಲೆಗಳಿಗೆ ಪರಿಹಾರ ಸಿಕ್ಕಿದೆ.

80) ಮಠದ ಆವರಣದಲ್ಲಿ ಬೃಹತ್ ಕಲ್ಯಾಣಿಯನ್ನು ಶ್ರೀಗಳು ನಿರ್ಮಿಸಿದ್ದಾರೆ. ಶ್ರೀಗಳ ಪಾದಸ್ಪರ್ಶದಿಂದ ಈ ಕಲ್ಯಾಣಿ ಬತ್ತಿಲ್ಲ ಎಂದು ಭಕ್ತರು ಹೇಳುತ್ತಾರೆ.

81) ಶ್ರೀಗಳು ನಿರ್ಮಿಸಿರುವ ಕಲ್ಯಾಣಿಯಲ್ಲಿ ಸಿದ್ದಲಿಂಗೇಶ್ವರ ದೇವರ ತೆಪೋತ್ಸವ ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ. ಇಲ್ಲಿಯವರೆಗೂ ಖುದ್ದು ಸಿದ್ದಗಂಗಾ ಶ್ರೀಗಳು ಚಾಲನೆ ನೀಡುತ್ತಿದ್ದರು.

82) ಏಕಾಕಾಲದಲ್ಲಿ 5 ಸಾವಿರ ಜನರಿಗೆ ಊಟ ತಯಾರಿಸುವ ಬೃಹತ್ ಅಡುಗೆ ಮನೆ ಮಠದಲ್ಲಿದೆ.

83) ಹತ್ತು ಸಾವಿರ ಜನರು ಕುಳಿತು ಏಕಾಕಾಲದಲ್ಲೇ ಪ್ರಾರ್ಥನೆ ಮಾಡಲು ಸ್ಥಳಾವಕಾಶವಿರುವ ದೊಡ್ಡದಾದ ಪ್ರಾರ್ಥನಾ ಮಂದಿರ ನಿರ್ಮಾಣಗೊಂಡಿದೆ.

84) ಶ್ರೀದರ್ಶನ ಮ್ಯೂಸಿಯಂ ಸ್ಥಾಪನೆ – ಸಿದ್ದಗಂಗಾ ಶ್ರೀಗಳ ಪರಿಕರ ಹಾಗೂ ಜೀವನ ಚರಿತ್ರೆಗೆ ಸೇರಿದ ವಸ್ತುಗಳ ಸಂಗ್ರಹಾಲಯ ನಿರ್ಮಾಣ.

85) ವಿವಿಧ ಜಾತಿಯ ಪುಷ್ಪಗಳ ಗಿಡಗಳಿರುವ ಬಿಲ್ವವನ ನಿರ್ಮಾಣವಾಗಿತ್ತು. ಸಿದ್ದಗಂಗಾ ಶ್ರೀಗಳ ಇಷ್ಟಲಿಂಗ ಪೂಜೆಗೆ ಇಲ್ಲಿಂದಲೇ ಹೂಗಳ ಸರಬರಾಜು ಆಗುತಿತ್ತು.

86) ಇಷ್ಟಲಿಂಗ ಸೃಷ್ಟಿ ಹಾಗೂ ಭಿನ್ನಗೊಂಡ ಇಷ್ಟಲಿಂಗಗಳ ಯಥಾವತ್ತು ರೂಪ ಕೊಡುವ ಸಿದ್ದಲಿಂಗೇಶ್ವರ ಛದ್ರರಸ ಕೇಂದ್ರ ಸ್ಥಾಪನೆ. ರಾಜ್ಯದ ಮೊದಲ ಇಷ್ಟಲಿಂಗ ನಿರ್ಮಾಣ ಕೇಂದ್ರ.

87) ಪ್ರತಿ ವರ್ಷ ಜಾನುವಾರು ಜಾತ್ರೆಯಲ್ಲಿ ವಿಶೇಷ ಗೋವುಗಳಿಗೆ ಬಹುಮಾನ ಘೋಷಣೆ ಪರಿಪಾಠ. ಗರಿಷ್ಟ 5 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ.

88) ಕುದುರೆ ಸವಾರಿಯಲ್ಲಿ ಶ್ರೀಗಳು ನೈಪುಣ್ಯತೆ ಹೊಂದಿದ್ದರು. ಆರಂಭದ ದಿನಗಳಲ್ಲಿ ಕುದುರೆ ಸವಾರಿ ಮಾಡಿ ಭಕ್ತರ ಮನೆಗೆ ಭೇಟಿ ನೀಡುತ್ತಿದ್ದರು.

89) ಎಂದು ಬತ್ತದ ಸಿಹಿ ನೀರಿನ ಬಾವಿ ಮಠದಲ್ಲಿದೆ. ಈ ಬಾವಿಯಿಂದಲೇ ಶ್ರೀಗಳ ಸ್ನಾನಕ್ಕೆ ಪೂಜೆಗೆ ನೀರು ರವಾನೆ, ಇಂದಿಗೂ ಸ್ವಚ್ಛತೆ ಹಾಗೂ ಪೂಜ್ಯಭಾವದಿಂದ ಬಾವಿ ಸಂರಕ್ಷಣೆ ಮಾಡಲಾಗಿದೆ.

90) ಆರೋಗ್ಯವೇ ಭಾಗ್ಯ ಎಂದ ಶ್ರೀಗಳು ಪ್ರತಿನಿತ್ಯ ಬೇವಿನ ಕಷಾಯ ಸೇವಿಸುತ್ತಿದ್ದರು. ಈ ಮೂಲಕ ಆಯುರ್ವೇದದ ಮಹಿಮೆ ಸಾರಿದ್ದರು.

91) ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆ ತಪ್ಪದೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ಇಷ್ಟಲಿಂಗ ಪೂಜೆಯನ್ನು ತಪ್ಪಸ್ಸಿನಂತೆ ಮಾಡಿಕೊಂಡು ಬರುತ್ತಿದ್ದರು.

92) ಇತಿ ಮಿತಿ ಆಹಾರ ಸೇವನೆ ಮೂಲಕ ಸ್ವಸ್ಥ ಆರೋಗ್ಯ ಶ್ರೀಗಳು ಕಾಪಾಡಿಕೊಂಡಿದ್ದರು.

93) ನೂರಾರು ವಾಣಿಗಳ ಮೂಲಕ ಭಕ್ತರಿಗೆ ಜೀವನದ ಪಾಠ ಹೇಳಿದ್ದರು ಶಿವಕುಮಾರಸ್ವಾಮೀಜಿ.

94) ಪ್ರತಿನಿತ್ಯ ಚಾಚೂತಪ್ಪದೆ ಬರಿಗಣ್ಣಿನಿಂದ ದಿನಪತ್ರಿಕೆ ಓದುತ್ತಿದ್ದರು. ಪ್ರಾಪಂಚಿಕ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳುವ ಹಸಿವನ್ನು ಸಿದ್ದಗಂಗಾ ಶ್ರೀಗಳು ಹೊಂದಿದ್ದರು.

95) ಸಿದ್ದಗಂಗಾ ಶ್ರೀಗಳು ಉತ್ತಮ ಬರಹಗಾರರು ಹೌದು. ಶ್ರೀಗಳ ಪ್ರವಚನಗಳನ್ನು ಶ್ರೀವಾಣಿ ಎಂದು ಸಾಹಿತ್ಯ ರೂಪದಲ್ಲಿ ಮುದ್ರಿಸಲಾಗಿದ್ದು ದಾರಿ ದೀಪವಾಗಿದೆ.

96) ಬೇರೆ ಬೇರೆ ಕಾರ್ಯಕ್ರಮಕ್ಕೆ, ಸಂಸ್ಥೆಗಳಿಗೆ ತೆರಳಿದಾಗ ನೀಡಿ ಆಶೀರ್ವಾಚನ `ಸಂದೇಶ ಸಂಚಯ’ದ ಹೆಸರಿನಲ್ಲಿ ಮುದ್ರಿತವಾಗಿದೆ.

97) ಶ್ರೀ ಮಠದಲ್ಲಿ ಓದಿದವರು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ರಾಷ್ಟ್ರಕಮಿ ಜಿಎಸ್ ಶಿವರುದ್ರಪ್ಪ, ವಿಶ್ರಾಂತ ಕುಲಪತಿ ಡಾ.ಬಿ ತಿಮ್ಮೇಗೌಡ, ಡಾ. ಮಲ್ಲೆಪುರ ವೆಂಕಟೇಶ್ ಈ ಹಿಂದೆ ಶ್ರೀ ಮಠದಲ್ಲಿ ಓದಿದ್ದರು.

98) ಸಿದ್ದಲಿಂಗೇಶ್ವರ ದೇವಸ್ಥಾನವನ್ನು ಶ್ರೀಗಳು ಜೀರ್ಣೋದ್ಧಾರ ಮಾಡಿದ್ದರು. ಮಠಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ದೇವಸ್ಥಾನದ ಮಾರ್ಗಕ್ಕೆ ಶ್ರೀಗಳು ವ್ಯವಸ್ಥೆ ಮಾಡಿದ್ದರು.

99) ಮದುವೆಗಳು ಸರಳವಾಗಿ ನಡೆಯಬೇಕು ಎನ್ನುವುದನ್ನು ಭಕ್ತಾದಿಗಳಿಗೆ ಮೇಲಿಂದ ಮೇಲೆ ಶ್ರೀಗಳು ಪ್ರವಚನ ಮಾಡುತ್ತಿದ್ದರು.

siddaganga APJ 3

100) ದುಡಿಮೆ ಸತ್ಯ ಶುದ್ಧವಾಗಿರಬೇಕು ಎನ್ನುವ ವಿಚಾರವನ್ನು ಶ್ರೀಗಳು ಪದೇಪದೇ ತಮ್ಮ ಮಾತಿನಲ್ಲಿ ಹೇಳುತ್ತಿದ್ದರು.

101) ಸೇವೆ ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನಾಗಿಡುವ ಸಂಜೀವಿನಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದರು.

102) ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾಗ, ಜನನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು ಎನ್ನುವ ಕಿವಿಮಾತನ್ನು ಹೇಳುತ್ತಿದ್ದರು.

103) ಸಿದ್ದಗಂಗಾ ಶ್ರೀಗಳ ಸಾಧನೆ ಗಮನಿಸಿದ ಸರ್ಕಾರ ಶ್ರೀಗಳ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮವಾಗಿ ನಿರ್ಮಾಣ ಮಾಡಿದೆ.

104) 2014ರಲ್ಲಿ ಸಿದ್ದಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಶ್ರೀಗಳ ಸಾಧನೆಯನ್ನು ಕೊಂಡಾಡಿದ್ದರು.

105) ಸಿದ್ದಗಂಗಾ ಶ್ರೀಗಳಿಗೆ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಎಂದರೆ ಅಭಿಮಾನ ಹೆಚ್ಚು, ಅಬ್ದುಲ್ ಕಲಾಂ ಬಗ್ಗೆ ಶ್ರೀಗಳು ಆಗಾಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

106) ಜಾನುವಾರುಗಳ ಮೇಲೆ ಶ್ರೀಗಳಿಗೆ ವಿಶೇಷವಾದ ಮಮತೆ. ಮಠದಲ್ಲಿ ಸಾವಿರಾರು ಜಾನುವಾರುಗಳಿದ್ದು, ಇವುಗಳು ನೀಡುವ ಹಾಲನ್ನು ಮಠದ ಮಕ್ಕಳಿಗೆ ಬಳಕೆ ಮಾಡಲಾಗುತ್ತದೆ.

107) ತಮಿಳುನಾಡಿನಲ್ಲಿ ಚಂಡಮಾರುತದಿಂದ ನಿರಾಶ್ರಿತರಿಗೆ ಮಠದಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದರು.

108) ಪ್ರತಿ ಚುನಾವಣೆ ಬಂದಾಗಲೂ ತಪ್ಪದೇ ಮತದಾನ ಮಾಡುತ್ತಿದ್ದರು.

109) ಖಾದಿಗೆ ಹೆಚ್ಚಿನ ಒತ್ತು ನೀಡಿದ್ದ ಶ್ರೀಗಳು ಮಠದ ಆವರಣದಲ್ಲಿ ಖಾದಿ ಬಟ್ಟೆಗಳ ಅಂಗಡಿ ಸ್ಥಾಪನೆ ಮಾಡಿದ್ದಾರೆ.

110) ವಿಶಿಷ್ಟವಾಗಿ ಗೋ ಸಗಣಿಯಿಂದ ವಿಭೂತಿ ತಯಾರಿಸುವ ಕೇಂದ್ರವನ್ನು ಶ್ರೀಗಳು ಪ್ರಾರಂಭಿಸಿದ್ದರು.

111) ಪ್ರತಿನಿತ್ಯ ಯೋಗ, ಧ್ಯಾನದ ದಿನಚರಿ, ಸರಳ ಜೀವನ, ಸೇವೆ ಮೂಲಕ ಸಮಾಜಕ್ಕೆ ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಿದ್ದಗಂಗಾ ಶ್ರೀಗಳು ಸಾರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:Public TVShri Sivakumar Swamijisiddaganga muttಪಬ್ಲಿಕ್ ಟಿವಿಶ್ರೀ ಶಿವಕುಮಾರ ಸ್ವಾಮೀಜಿಸಿದ್ದಗಂಗಾ ಮಠ
Share This Article
Facebook Whatsapp Whatsapp Telegram

You Might Also Like

TIGER
Chamarajanagar

ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿ- 9 ದಿನಕ್ಕೆ ಜಿಲ್ಲೆಯಲ್ಲಿ 2ನೇ ಸಾವು

Public TV
By Public TV
4 minutes ago
Ramagara Murder
Court

ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವು ಪ್ರಕರಣ – ಪತಿಗೆ ಜೀವಾವಧಿ ಶಿಕ್ಷೆ

Public TV
By Public TV
1 hour ago
Dinesh Gundu Rao 2
Bengaluru City

ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ 5 ಲಕ್ಷ ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ

Public TV
By Public TV
1 hour ago
Eshwar Khandre
Bengaluru City

ಅನುಭವ ಮಂಟಪಕ್ಕೆ 742 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಸಂಪುಟ ಅನುಮೋದನೆ

Public TV
By Public TV
2 hours ago
Rukmini Vasanth
Cinema

ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

Public TV
By Public TV
2 hours ago
Bagalkote district selected in the country to provide online postal service facility on a trial basis 2
Bagalkot

ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?