ಸಿದ್ದರಾಮಯ್ಯರ ನಡೆ ಆಶ್ಚರ್ಯ ತಂದಿದೆ: ಹೆಚ್.ವಿಶ್ವನಾಥ್

Public TV
1 Min Read
SIDDU VISHWANATH

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನವರೇ ರೆಸಾರ್ಟ್ ರಾಜಕೀಯದ ಮುಂದಾಳತ್ವ ವಹಿಸಿರೋದರ ಬಗ್ಗೆ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರಾದ ಹೆಚ್ ವಿಶ್ವನಾಥ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅನುಭವಿ ರಾಜಕಾರಣಿ, ಅವರು ಸಿಎಂ ಆಗೋವಾಗಲೂ ರೆಸಾರ್ಟ್ ರಾಜಕೀಯ ಮಾಡಿಲ್ಲ. ಬೇರೆಯವರನ್ನ ಸಿಎಂ ಮಾಡುವುದಕ್ಕೂ ರೆಸಾರ್ಟ್ ರಾಜಕೀಯ ಮಾಡಿಲ್ಲ. ಆದ್ರೆ ಈಗ ಅವರೇ ಬಸ್ ನಲ್ಲಿ ಮುಂದಾಳತ್ವ ವಹಿಸಿಕೊಂಡು ಹೋಗ್ತಾ ಇರೋದು ನಮಗೆ ಆಶ್ಚರ್ಯ ತಂದಿದೆ. ರೆಸಾರ್ಟ್ ರಾಜಕೀಯ ಸೂಕ್ತ ಅಲ್ಲ ಎಂಬುವುದು ಗೊತ್ತಿದ್ದರೂ ಕಳೆದ 10 ವರ್ಷದಿಂದ ಬೇಕು ಬೇಡ್ವೋ ಮಾಡುತ್ತಾ ಬಂದಿದ್ದೇವೆ. ರೆಸಾರ್ಟ್ ರಾಜಕಾರಣದಿಂದ ಯಾರಿಗೂ ಪ್ರಯೋಜನವಿಲ್ಲ ಅಂತ ತಿಳಿಸಿದರು.

congress bang

ರೆಸಾರ್ಟ್ ಗೆ ಕರೆದುಕೊಂಡು ಹೋಗೋದ್ರಿಂದ ಯಾರ ಮನಸ್ಸನ್ನು ಕಟ್ಟಿಹಾಕೋಕಾಗಲ್ಲ. ಹೋಗಬೇಕು ಅನ್ನೋ ಶಾಸಕರು ಹೋಗೆ ಹೋಗ್ತಾರೆ. ರೆಸಾರ್ಟ್ ನಲ್ಲಿ ಕಟ್ಟಿ ಹಾಕೋದ್ರಿಂದ ಅವರನ್ನು ತಡೆಯೋಕೆ ಸಾಧ್ಯವಿಲ್ಲ ಅಂತಾ ನೇರವಾಗಿ ಕಾಂಗ್ರೆಸ್ ರೆಸಾರ್ಟ್ ರಾಜಕೀಯ ನಿರ್ಧಾರಕ್ಕೆ ಟಾಂಗ್ ಕೊಟ್ರು. ಇನ್ನು ಜೆಡಿಎಸ್ ನ ಯಾವ ಶಾಸಕರು ರೆಸಾರ್ಟ್ ಗೆ ಹೋಗಲ್ಲ. ನಮಗೆ ಅದರ ಅವಶ್ಯಕತೆ, ಅನಿವಾರ್ಯತೆ ಇಲ್ಲ ಅಂತಾ ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *