ಕೆಪಿಎಸ್‍ಸಿ ಆಯುಕ್ತರ ಹುದ್ದೆಗೆ ಪ್ರಭಾವಿಗಳ ಮಧ್ಯೆ ಫೈಟ್..!

Public TV
1 Min Read
KPSC

ಬೆಂಗಳೂರು: ಮೈತ್ರಿ ಸರ್ಕಾರದ ಬುಡದಲ್ಲೀಗ ಕೆಪಿಎಸ್‍ಸಿ ಆಯುಕ್ತರ ಹುದ್ದೆಗಾಗಿ ಪ್ರಭಾವಿಗಳ ಮಧ್ಯೆ ಟಫ್ ಫೈಟ್ ಆರಂಭವಾಗಿದೆ.

ಶ್ಯಾಂ ಭಟ್‍ರಿಂದ ತೆರವಾಗಿರುವ ಕೆಪಿಎಸ್‍ಸಿ ಆಯುಕ್ತರ ಸ್ಥಾನವನ್ನು ತಮ್ಮ ಆಪ್ತರಿಗೆ ಕೊಡಲು ನಾಯಕರ ಮಧ್ಯೆ ಸದ್ದಿಲ್ಲದ ಸಮರ ಶುರುವಾಗಿದೆ. ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಕೆಪಿಎಸ್‍ಸಿ ಆಯುಕ್ತರ ಹುದ್ದೆ ಫೈಟ್‍ಗೆ ಮಹೂರ್ತ ಇಡಲಾಗಿದೆ.

DEEKESHI HDK
ಡಾ.ಲಕ್ಷ್ಮಿ ಅಶ್ವಿನ್ ಗೌಡರಿಗೆ ಕೆಪಿಎಸ್‍ಸಿ ಆಯುಕ್ತರ ಹುದ್ದೆ ಕೊಡಲು ಸಿಎಂ ಪ್ರಯತ್ನ ಮಾಡುತ್ತಿದ್ದಾರೆ. ಡಿಕೆಶಿ ಕೂಡ ತಮ್ಮ ಆಪ್ತ ವಿನಯ್ ಸಂಬಂಧಿ ರಘುನಂದನ್ ರಾಜಣ್ಣಗೆ ಈ ಹುದ್ದೆ ಕೊಡಿಸಲು ಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಆಯುಕ್ತ ಸ್ಥಾನ ಕೊಡೋದಕ್ಕೆ ಸಿಎಂ ಟೊಂಕ ಕಟ್ಟಿ ನಿಂತಿದ್ಯಾಕೆ ಅನ್ನೋದು ಇದೀಗ ಪ್ರಶ್ನೆಯಾಗಿದೆ.

ASHWINI GOWDA

ಐಆರ್‍ಎಸ್ ಹುದ್ದೆಗೆ 2018 ಫೆಬ್ರವರಿಯಲ್ಲಿ ರಾಜೀನಾಮೆ ಕೊಟ್ಟು ಲಕ್ಷ್ಮಿ ರಾಜಕೀಯ ಅಖಾಡಕ್ಕೆ ಧುಮುಕಿದ್ದರು. ಆದ್ರೆ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ವಿಧಾನಸಭೆ, ಮಂಡ್ಯ ಲೋಕಸಭಾ ಚುನಾವಣೆಗೆ ಟಿಕೆಟ್ ಮಿಸ್ ಆಗಿತ್ತು. ಇದೆಲ್ಲವೂ ನಿಖಿಲ್ ಕುಮಾರ್ ಸ್ವಾಮಿಗಾಗಿ ಸಿಎಂ ಕಸರತ್ತು ಮಾಡುತ್ತಿದ್ದಾರೆ. ಮಗನ ರಾಜಕೀಯ ನೆಲೆಗಾಗಿ “ಲಕ್ಷ್ಮಿ”ಗೆ ಬೇರಡೆ ಶಾಶ್ವತ ನೆಲೆ ಕೊಟ್ರಾ ಸಿಎಂ ಅಥವಾ ನಾಗಮಂಗಲದ ರಾಜಕೀಯ ದಾರಿ ಮಗನಿಗಾಗಿ ಸುಲಭವಾಗಿ ಮಾಡಲು ಸಿಎಂ ಪ್ಲಾನ್ ಮಾಡಿದ್ರಾ ಅನ್ನೋ ಚರ್ಚೆಗಳು ಈಗ ಎದ್ದಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *