ಶಿಥಿಲಾವಸ್ಥೆಯಲ್ಲಿದ್ದ ಟ್ಯಾಂಕ್ ಕುಸಿದು ಓರ್ವನ ದುರ್ಮರಣ

Public TV
1 Min Read
MDK TANK DEATH AV 5.jpeg

ಮಡಿಕೇರಿ: ಹಳೇ ಓವರ್ ಹೆಡ್ ಟ್ಯಾಂಕ್ ಅನ್ನು ನೆಲಸಮಗೊಳಿಸುತ್ತಿದ್ದ ಸಂದರ್ಭ ಕಾರ್ಮಿಕರೊಬ್ಬರು ಅದರ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಿರಿಯಪಟ್ಟಣ ತಾಲೂಕು ತೆಲಗಿನಕುಪ್ಪೆ ಬೋರೆ ಎಂಬಲ್ಲಿ ನಡೆದಿದೆ.

ಬೈಲುಕುಪ್ಪೆಯ ಹಳೆಯೂರು ಗ್ರಾಮದ ಸರ್ದಾರ್ (50) ಮೃತಪಟ್ಟ ದುರ್ದೈವಿ. ತೆಲಗಿನಕುಪ್ಪೆ ಬೋರೆಯಲ್ಲಿ ಹಳೇಯ ಓವರ್ ಹೆಡ್ ಟ್ಯಾಂಕನ್ನು, ಸರ್ದಾರ್ ಸೇರಿದಂತೆ ಐವರು ನೆಲಸಮಗೊಳಿಸುತ್ತಿದ್ದರು. ಈ ವೇಳೆ ಏಕಾಏಕಿ ಟ್ಯಾಂಕರ್ ಸರ್ದಾರ್ ಅವರ ಮೇಲೆಯೇ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಸರ್ದಾರ್ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಇನ್ನುಳಿದ ನಾಲ್ಕು ಮಂದಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

vlcsnap 2018 12 11 06h55m06s18

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಜೆಸಿಬಿ ಸಹಾಯದಿಂದ ಮೃತದೇಹವನ್ನು ಟ್ಯಾಂಕರ್ ಅಡಿಯಿಂದ ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *