ಅನಂತ್ ಕುಮಾರ್ ದತ್ತು ಪಡೆದ ಗ್ರಾಮದಲ್ಲಿ ನೀರವ ಮೌನ

Public TV
1 Min Read
ragihalli ananth kumar 2

ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾಗಿದ್ದಾಗ ಅನಂತ್ ಕುಮಾರ್ ದತ್ತು ಪಡೆದಿದ್ದ ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ.

ಸಂಸದರ ಆದರ್ಶ ಗ್ರಾಮ ಎಂಬ ಯೋಜನೆಯ ಅಡಿಯಲ್ಲಿ ಅನಂತ್ ಕುಮಾರ್ ಸಹ ಬನ್ನೇರುಘಟ್ಟ ಸಮೀಪ ರಾಗಿ ಹಳ್ಳಿ ಎಂಬ ಗ್ರಾಮ ದತ್ತು ಪಡೆದಿದ್ದರು. ದತ್ತು ಪಡೆದ ಬಳಿಕ ಊರಿನ ಅಭಿವೃದ್ಧಿಗೆ ಕಾಂಕ್ರಿಟ್ ರಸ್ತೆಗಳು, ಫುಟ್ ಪಾತ್, ಸಸಿಗಳು, ಅದಮ್ಯ ಚೇತನದಿಂದ ಮಧ್ಯಾಹ್ನ ಬಿಸಿ ಊಟ, ನೀರಿನ ಟ್ಯಾಂಕ್ ಹಾಗೂ ಮಹಿಳೆಯರು ಸ್ವಉದ್ಯೋಗ ಹೊಂದಲು ಸಹಕಾರಿಯಾದ ಚಪಾತಿ ತಯಾರಿಕಾ ಘಟಕವನ್ನು ತೆರೆದಿದ್ದರು.

https://twitter.com/KPGanesh/status/1061920530004144129

ಗ್ರಾಮದ ಅಭಿವೃದ್ಧಿಗೆ ಅನಂತ್ ಕುಮಾರ್ ಹಲವು ಯೋಜನೆಗಳನ್ನು ತಂದಿದ್ದರು, ಗಿಡಗಳನ್ನು ಬೆಳೆಸಿದ್ದರು. ಎಲ್ಲವೂ ಇಂದು ಅನಂತಕುಮಾರ್ ಆಗಲಿಕೆಯನ್ನು ನೆನಪಿಸುತ್ತಿದೆ ಎಂದು ಗ್ರಾಮಸ್ಥರು ನೆನದಿದ್ದಾರೆ.

ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ನಿನ್ನೆ ಅವರ ಬಸವನಗುಡಿ ನಿವಾಸದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ, ರಾಜ್ಯ ನಾಯಕರು ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು. ಇಂದು ಬೆಳಗ್ಗೆ ಬಿಜೆಪಿ ಕಚೇರಿ ಇರಿಸಿದ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ragihalli ananth kumar

https://twitter.com/KPGanesh/status/1061920948188864513

https://twitter.com/siddnow/status/1003519223090462720

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *