ಪಿತೃಪಕ್ಷ ಇತ್ತು, ಮನೆ ಕಟ್ಟಿಸಿಕೊಡೋಕೆ ಆಗ್ಲಿಲ್ಲ- ಡಿಸಿಎಂ ಮುಂದೆ ಪುಂಗಿದ ಅಧಿಕಾರಿ

Public TV
1 Min Read
TMK copy 1

ತುಮಕೂರು: ವಸತಿ ಯೋಜನೆಯ ಮನೆಗಳ ನಿರ್ಮಾಣಕ್ಕೆ ಪಿತೃಪಕ್ಷ ಅಡ್ಡಿಯಾಗಿದೆ ಅಂತ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರು ಹೇಳಿರುವುದು ಹಾಸ್ಯಾಸ್ಪದವಾಗಿತ್ತು.

vlcsnap 2018 10 13 10h45m24s251
ಮಧುಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮೋಹನಕುಮಾರ್ ಅವರು ಶುಕ್ರವಾರ ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಹೇಳಿಕೆ ನಿಡಿದ್ದರು, ಅಧಿಕಾರಿಯ ಹೇಳಿಕೆಯಿಂದ ಡಿಸಿಎಂ ಪರಮೇಶ್ವರ್ ಅವರು ಕೆಂಡಾಮಂಡಲರಾಗಿದ್ದಾರೆ.

vlcsnap 2018 10 13 10h54m38s172

ವಿವಿಧ ವಸತಿ ಯೋಜನೆಯಡಿ 35,410 ಮನೆಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು. ಆದ್ರೆ ಇಲ್ಲಿಯವರೆಗೂ 3118 ಮನೆಯಷ್ಟನ್ನೇ ನಿರ್ಮಿಸಲಾಗಿದೆ. 12240 ಮನೆಗಳು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಡಿಸಿಎಂ ಜಿ.ಪರಮೇಶ್ವರ್ ಅವರು ಮನೆ ನಿರ್ಮಾಣ ವಿಳಂಬಕ್ಕೆ ಕಾರಣ ಕೇಳಿದ್ದಾರೆ. ಡಿಸಿಎಂ ಪ್ರಶ್ನೆಗೆ ಪಿತೃಪಕ್ಷ ಅಂತ ಅಧಿಕಾರಿ ಉತ್ತರ ಕೊಟ್ಟಿದ್ದಾರೆ. ಅಧಿಕಾರಿ ಮಾತು ಕೇಳಿ ಸಭೆ ನಗೆ ಗಡಲಿನಲ್ಲಿ ತೇಲಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

vlcsnap 2018 10 13 10h54m46s250

Share This Article
Leave a Comment

Leave a Reply

Your email address will not be published. Required fields are marked *