ದೇವಸ್ಥಾನದ 2 ಹುಂಡಿ ಬೀಗ ಒಡೆದು ಲಕ್ಷಾಂತರ ಹಣ ಕಳವು

Public TV
1 Min Read
CKB HUNDI KALLATANA

ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ಧ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಶ್ರೀ ಬೋಗನಂದೀಶ್ವರ ದೇಗುಲಕ್ಕೆ ನುಗ್ಗಿರುವ ಕಳ್ಳರು 2 ಹುಂಡಿಯ ಬೀಗ ಒಡೆದು ಹಣ ಕಳವು ಮಾಡಿದ್ದಾರೆ.

ದೇವಾಲಯದ ಕಲ್ಯಾಣಿ ಕಡೆಯ ಬಾಗಿಲಿನಿಂದ ಒಳನುಗ್ಗಿರುವ ಕಳ್ಳರು, ಪ್ರಾಂಗಣದಲ್ಲಿನ ಹುಂಡಿಗೆ ಮುದ್ರೆ ಹಾಕಲಾಗಿದ್ದ ಬೀಗವನ್ನ ಒಡೆದು ಹಣ ದೋಚಿದ್ದಾರೆ. ಹೀಗಾಗಿ ಹುಂಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳ್ಳರ ಪಾಲಾಗಿದ್ದು, ಭದ್ರತಾ ಸಿಬ್ಬಂದಿ ಇದ್ದರೂ ಕಳ್ಳತನ ನಡೆದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

vlcsnap 2018 09 29 16h26m06s916

ದೇವಾಲಯಕ್ಕೆ ಶ್ವಾನದಳ ಬೆರಳಚ್ಚು ತಜ್ಞರ ತಂಡದೊಂದಿಗೆ ಆಗಮಿಸಿದ್ದ ನಂದಿಗಿರಿಧಾಮ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿಂದೆ ಬೋಗನಂದೀಶ್ವರಲಾಯದ ಅರುಚಲೇಶ್ವರ ದೇವರ ಶಿಖರದ ಮೇಲಿನ ಪಂಚ ಲೋಹದ ಕಳಸ ಕೂಡ ಕಳವು ಆಗಿತ್ತು. 2013 ರಲ್ಲಿ ನಂದಿ ಬೆಟ್ಟದ ಮೇಲಿನ ಯೋಗ ನಂದೀಶ್ವರ ದೇವಾಲಯದಲ್ಲೂ ಹುಂಡಿ ಕಳವು ಆಗಿತ್ತು. ಪದೇ ಪದೇ ಕಳ್ಳತನ ಪ್ರಕರಣ ಕಂಡುಬಂದರೂ ಆಡಳಿತ ಮಂಡಳಿ ಸುಮ್ಮನಿರುವುದರಿಂದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *