ತುಮಕೂರು ಪಾಲಿಕೆಯಿಂದ ಕೋಟಿಗಟ್ಟಲೆ ವೇತನ ಬಾಕಿ-‘ಸ್ವಚ್ಛ’ ನೌಕರರಿಗೆ ಕೊಟ್ಟಿಲ್ಲ ಸಂಬಳ

Public TV
1 Min Read
tmk corporation

ತುಮಕೂರು: ಇತ್ತೀಚೆಗೆ ಬೆಂಗಳೂರಲ್ಲಿ ವೇತನ ಸಿಗದ ಕಾರಣಕ್ಕೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದರು. ತುಮಕೂರು ಪಾಲಿಕೆಯ ಪೌರ ಕಾರ್ಮಿಕರಿಗೆ 4 ತಿಂಗಳಿಂದ ವೇತನ ಕೊಟ್ಟಿಲ್ಲ. ನಗರ ಸ್ವಚ್ಛತೆಗಾಗಿ ಪೌರ ಕಾರ್ಮಿಕರಿಂದ ದುಡಿಸಿಕೊಳ್ಳುವ ಪಾಲಿಕೆ ಇವರಿಗೆ ಸಂಬಳ ನೀಡುವ ವಿಚಾರದಲ್ಲಿ ಮಾತ್ರ ಕಣ್ಮುಚ್ಚಿ ಕುಳಿತಿದೆ. ಅಷ್ಟಕ್ಕೂ ಪಾಲಿಕೆ ಪೌರ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಸಂಬಳದ ಮೊತ್ತ ಕೇಳಿದರೆ ನಿಮಗೆ ಶಾಕ್ ಆಗೋದು ಖಂಡಿತ.

ಬೆಂಗಳೂರಿನ ಜಸ್ಕೋ ಕಂಪೆನಿ ಬಿಬಿಎಂಪಿಯಿಂದ ಸುಮಾರು 600 ನೌಕರರನ್ನು ಗುತ್ತಿಗೆ ಪಡೆದುಕೊಂಡಿದೆ. ಇವರಿಗೆ ಕಳೆದ 4 ತಿಂಗಳಿಂದ ಬರೋಬ್ಬರಿ 5 ಕೋಟಿ 40 ಲಕ್ಷ ರೂಪಾಯಿ ವೇತನ ಬಾಕಿ ಉಳಿಸಿಕೊಂಡಿದೆ. ಗುತ್ತಿಗೆ ಕಂಪೆನಿಗೆ ಪಾಲಿಕೆ ಅನುದಾನ ಇಲ್ಲ ಎಂಬ ನೆಪ ಹೇಳಿ ಹಣ ಬಿಡುಗಡೆ ಮಾಡದ ಕಾರಣ ಪೌರ ನೌಕರರಿಗೆ ಸಂಬಳ ಆಗಿಲ್ಲ.

TMK Corporation 1

ಈ ಮಧ್ಯೆ ಸರ್ಕಾರ ಕಳೆದ 2 ತಿಂಗಳ ಹಿಂದೆ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದೆ. ಇದರನ್ವಯ ಒಟ್ಟು 600 ಜನರಲ್ಲಿ ಸುಮಾರು 500ಕ್ಕೂ ನೌಕರರು ನೇರ ನೇಮಕಾತಿಗೊಂಡವರು. ನೇರ ನೇಮಕಾತಿ ಆಗದ ಆಟೋ ಚಾಲಕರು ಹಾಗೂ ಆಟೋ ಸಹಾಯಕರನ್ನು ಗುತ್ತಿಗೆ ಕಂಪೆನಿಯೇ ಮುಂದುವರೆಸಿತ್ತು.

ಒಟ್ಟಿನಲ್ಲಿ ಪಾಲಿಕೆ ಮತ್ತು ಗುತ್ತಿಗೆ ಕಂಪೆನಿಯ ನಡುವಿನ ಹಗ್ಗಜಗ್ಗಾಟದಲ್ಲಿ ಪೌರ ಕಾರ್ಮಿಕರ ಬದುಕು ನರಕ ಸದೃಶವಾಗಿದೆ. ಕೋಟಿ ಕೋಟಿ ರೂಪಾಯಿ ಲೆಕ್ಕದಲ್ಲಿ ದುಂದುವೆಚ್ಚ ಮಾಡುವ ಪಾಲಿಕೆ ಪೌರಕಾರ್ಮಿಕರ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ತೋರುತ್ತಿರೋದು ದುರಾದೃಷ್ಟವೇ ಸರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TMK Corporation 2

Share This Article
Leave a Comment

Leave a Reply

Your email address will not be published. Required fields are marked *