ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲ: ಕೈ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ

Public TV
1 Min Read
LINGAPPA collage

ರಾಮನಗರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವುದು ವಿಧಾನಸಭೆಯಲ್ಲಿ ಮಾತ್ರ ಬೇರೆಲ್ಲೂ ಇಲ್ಲ. ಈ ರಾಜ್ಯ ಸರ್ಕಾರವೇನೂ ನಮ್ಮದಾ? ಇದು ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲಾ ಎಂದು ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಹೇಳಿಕೆ ನೀಡಿದ್ದಾರೆ.

ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ವಿಚಾರವಾಗಿ ರಾಮನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂಎಲ್‍ಸಿ ಸಿ.ಎಂ ಲಿಂಗಪ್ಪ ಮಾಧ್ಯಮದವರ ಜೊತೆ ಮಾತನಾಡುತ್ತಾ ಯಾರು ತೈಲ ಬೆಲೆಯನ್ನ ಹೆಚ್ಚಳ ಮಾಡಿದ್ದಾರೋ ಅವರ ವಿರುದ್ಧ ನಮ್ಮ ಹೋರಾಟ. ತೈಲದ ಬೆಲೆ ಏರಿಕೆಯನ್ನು ಕೇಂದ್ರವೇ ಹಾಕಲಿ, ರಾಜ್ಯವೇ ಹಾಕಲಿ ಯಾರೇ ಹಾಕಿದ್ದರು ತಪ್ಪೇ ಎಂದರು.

vlcsnap 2018 09 10 13h51m25s754

ರಾಜ್ಯದಲ್ಲಿರುವುದು ನಮ್ಮ ಸರ್ಕಾರನಾ ಯಾರು ಹೇಳಿದ್ದು ನಮ್ಮ ಸರ್ಕಾರ ಅಂತಾ? ಸಮ್ಮಿಶ್ರ ಸರ್ಕಾರ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ವಿಧಾನಸಭೆಯಲ್ಲಿ ಮತ್ತು ಕಾಂಗ್ರೆಸ್ ಎಂಎಲ್‍ಎಗಳು ಹಾಗೂ ಜೆಡಿಎಸ್ ಎಂಎಲ್‍ಎಗಳ ಮಧ್ಯೆ ಸಮ್ಮಿಶ್ರವಿದೆ. ಬೇರೆಲ್ಲಿದೆ ಯಾವ ತಾಲ್ಲೂಕಿನಲ್ಲಿದೆ ಕೇಳಲೇಬೇಡಿ. ಈ ರಾಜ್ಯ ಸರ್ಕಾರ ನಮ್ಮದು ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರಿಲ್ಲ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *