ಕತ್ತಲಾದ್ರೂ ಮನೆಗೆ ಕಳುಹಿಸದ ಅಧಿಕಾರಿಗಳು – ಮಡಿಕೇರಿಯಲ್ಲಿ ಲೇಡಿ ಹೋಮ್‍ಗಾರ್ಡ್ಸ್ ಕಣ್ಣೀರು

Public TV
1 Min Read
MDK copy

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಿರಾಶ್ರಿತರ ಜೊತೆ ಮಹಿಳಾ ಪೊಲೀಸರು ಕೂಡ ಪರಿತಾಪ ಪಡುವಂತಾಗಿದೆ. ರಾತ್ರಿಯಾದ್ರೂ ಮನೆಗೆ ಕಳುಹಿಸದಕ್ಕೆ ಮಹಿಳಾ ಹೋಂಗಾರ್ಡ್ ಗಳು ಕಣ್ಣೀರಿಟ್ಟಿದ್ದಾರೆ.

ವಾಲ್ಮೀಕಿ ಭವನದ ಮುಖ್ಯ ರಸ್ತೆಯಲ್ಲಿ ಬಂದೋಬಸ್ತ್ ಗೆಂದು ನಿಯೋಜಿಸಿದ್ದ ಗೃಹ ರಕ್ಷಕದಳದ ಮಹಿಳಾ ಸಿಬ್ಬಂದಿಯನ್ನು ಕತ್ತಲೆಯಲ್ಲಿ ರಾತ್ರಿ 8 ಗಂಟೆಯಾದ್ರೂ ರಿಲೀವ್ ಮಾಡದೇ ಕರ್ತವ್ಯ ಮುಂದುವರಿಸಿ ಅಂತ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದ್ದಾರೆ. ರಾತ್ರಿ ವೇಳೆ ಕರ್ತವ್ಯ ನಿಭಾಯಿಸುತ್ತಿದ್ದೇವೆ ಕನಿಷ್ಠ ಇಲಾಖೆಯಿಂದ ಟಾರ್ಚ್ ಕೂಡ ನೀಡಿಲ್ಲ ಅಂತ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

vlcsnap 2018 09 07 07h25m55s121

ಸ್ಥಳಕ್ಕೆ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಭೇಟಿ ನೀಡಿ ಮಹಿಳಾ ಸಿಬ್ಬಂದಿ ಆಲಿಸಿ ಸಂಬಂಧಪಟ್ಟವರೊಂದಿಗೆ ಮಾತನಾಡ್ತೀನಿ ಅಂತ ಭರವಸೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

vlcsnap 2018 09 07 07h26m34s249 e1536285662391

Share This Article
Leave a Comment

Leave a Reply

Your email address will not be published. Required fields are marked *