ಗಣಿನಾಡಿನ ಚಿತ್ರಮಂದಿರದಲ್ಲಿ `ಅಯೋಗ್ಯ’ ಚಿತ್ರ ವೀಕ್ಷಿಸಿದ ನಿನಾಸಂ ಸತೀಶ್

Public TV
1 Min Read
BLY AYOGYA copy

ಬಳ್ಳಾರಿ: ಗಣಿನಾಡು ಬಳ್ಳಾರಿಗೆ ಅಯೋಗ್ಯ ಚಿತ್ರತಂಡ ಭೇಟಿ ನೀಡಿದ್ದು, ಅಲ್ಲಿನ ಉಮಾ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಣೆ ಮಾಡಿದೆ.

ಅಯೋಗ್ಯ ಚಿತ್ರ ವೀಕ್ಷಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿನಾಸಂ ಸತೀಶ್ ಅವರು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಡೆಯಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಗೆಲವು ನನ್ನ ಗೆಲುವಲ್ಲ, ಅಭಿಮಾನಿಗಳ ಗೆಲುವಾಗಿದೆ. ಈ ಭಾಗದಲ್ಲಿ ಕನ್ನಡ ಸಿನಿಮಾಗಳಿಗೆ ಅತಿ ಹೆಚ್ಚು ಪ್ರೋತ್ಸಾಹ ದೊರಕುತ್ತಿದೆ. ಅದು ನನ್ನ ಸಿನಿಮಾವನ್ನು ಇಷ್ಟು ಬೆಂಬಲಿಸಿರುವುದು ನನ್ನ ಹಾಗೂ ನಮ್ಮ ಚಿತ್ರತಂಡದ ಪುಣ್ಯ ಎಂದು ಹೇಳಬಹುದು ಎಂದು ಹೇಳಿದ್ದಾರೆ.

byl 2

ನಾವು ಪ್ರಮುಖವಾಗಿ ಬಯಲು ಮುಕ್ತ ಶೌಚಾಲಯದ ದೃಷ್ಠಿಕೋನದಯಡಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಯಲು ಶೌಚಾಲಯ ಇನ್ನೂ ಸಹ ಇದೆ. ಬಯಲು ಶೌಚಾಲಯಕ್ಕೆ ಹೋದಾಗ ಹಾವು ಕಚ್ಚಿ ಸತ್ತವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ರೇಪ್ ಅಟೆಮ್ಟ್ ಕೂಡ ಹೆಚ್ಚು ನಡೆಯುತ್ತಿವೆ. ಈ ಎಲ್ಲಾ ಅವಾಂತರಗಳಿಂದ ತಪ್ಪಿಸುವ ಉದ್ದೇಶವೇ ನಮ್ಮ ಚಿತ್ರದ ಮೂಲ ಮಂತ್ರವಾಗಿದೆ. ಬಳ್ಳಾರಿ ಜನರಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಮತ್ತೆ ನಾನು ಬಳ್ಳಾರಿಗೆ ಬರುವೆ ಎಂದು ಹೇಳಿದ್ದಾರೆ.

byl

ಈ ವೇಳೆ ಅಭಿಮಾನಿಗಳು ನಿನಾಸಂ ಸತೀಶ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಈ ಚಿತ್ರದಲ್ಲಿ ನಿನಾಸಂ ಸತೀಶ್ ಅವರಿಗೆ ನಟಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *