ಸಿದ್ದರಾಮಯ್ಯ, ಕೆಂಪಯ್ಯ ಆಪ್ತ ಅಧಿಕಾರಿ ಎತ್ತಂಗಡಿ

Public TV
0 Min Read
HDK SIDDU

ಬೆಂಗಳೂರು: ಮುಖ್ಯಮಂತ್ರಿ ಭದ್ರತಾ ಅಧಿಕಾರಿ ಎಸ್.ಪಿ ಆಗಿ ಎಂ.ಯೋಗೇಶ್ ನೇಮಕವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಅಧಿಕಾರಿಯನ್ನು ಎಚ್.ಡಿ.ಕುಮಾರಸ್ವಾಮಿ ವರ್ಗಾವಣೆ ಮಾಡಿದ್ದಾರೆ.

ಸ್ಥಳ ನಿಗದಿ ಮಾಡದೇ ಸಿದ್ದರಾಮಯ್ಯನವರಿಗೆ ಭದ್ರತಾ ಅಧಿಕಾರಿಯಾಗಿದ್ದ ರಾಮಕೃಷ್ಣ ಪ್ರಸಾದ್ ಅವರನ್ನು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಮಾಜಿ ಸಿಎಂ ಆಪ್ತ ಅಧಿಕಾರಿಯನ್ನು ಎಚ್.ಡಿ.ಕುಮಾರಸ್ವಾಮಿ ದೂರ ಇಟ್ಟಿದ್ದಾರೆ.

ರಾಮಕೃಷ್ಣ ಪ್ರಸಾದ್ ಅವರು ಗೃಹ ಇಲಾಖೆ ಸಲಹೆಗಾರರಾಗಿದ್ದ ಕೆಂಪಯ್ಯ ಆಪ್ತರಾಗಿದ್ದರು. ಸಿಎಂ ನೂತನ ಭದ್ರತಾ ಅಧಿಕಾರಿಯಾಗಿ ನೇಮಕವಾಗಿರುವ ಎಂ.ಯೋಗೇಶ್ ಬೆಂಗಳೂರು ಪಶ್ಚಿಮ ವಿಭಾಗದ ಸಿಎಆರ್‍ನ ಡಿಸಿಪಿ ಆಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *