ಮಹಾಮಳೆಯಿಂದ ಲೋಕೋಪಯೋಗಿ ಇಲಾಖೆಗೆ 430.89 ಕೋಟಿ ನಷ್ಟ- ಎಲ್ಲೆಲ್ಲಿ ಎಷ್ಟು?

Public TV
1 Min Read
REVANNA PWD

ಬೆಂಗಳೂರು: ಮಹಾಮಳೆಗೆ ರಾಜ್ಯದಲ್ಲಿ ಭಾರೀ ನಷ್ಟವಾಗಿದ್ದು, ದಕ್ಷಿಣ ವಲಯ, ಉತ್ತರ ವಲಯ ಹಾಗೂ ಈಶಾನ್ಯ ವಲಯಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಒಟ್ಟು 430.89 ಕೋಟಿ ರೂ. ನಷ್ಟವಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಎಲ್ಲೆಲ್ಲಿ ಎಷ್ಟು ನಷ್ಟ?
ದಕ್ಷಿಣ ವಲಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುಗಳಲ್ಲಿ ಒಟ್ಟು 365.95 ಕೋಟಿ ರೂ. ನಷ್ಟವಾಗಿದೆ. ಉತ್ತರ ವಲಯದ ಬೆಳಗಾವಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ ಉತ್ತರ ಕನ್ನಡ ಜಿಲ್ಲೆಗಳಲ್ಲಿ 60.83 ಕೋಟಿ ರೂ., ಈಶಾನ್ಯ ವಲಯದ ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ, 5.10 ಕೋಟಿ ರೂ. ಹಾನಿಯಾಗಿದೆ ಎಂದು ಸಚಿವರು ಅಂಕಿ-ಅಂಶಗಳ ಮೂಲಕ ವಿವರಿಸಿದರು.

ರಾಜ್ಯದಲ್ಲಿ ಒಟ್ಟು 538 ಸೇತುವೆಗಳು ನಾಶವಾಗಿದ್ದು, 78.49 ಕೋಟಿ ರೂ. ಹಾನಿಹಾಗಿದೆ. ಇನ್ನು ಕಟ್ಟಡ 34 ಕಟ್ಟಗಳು ಹಾನಿಯಾಗಿದ್ದು, ಇದರಿಂದ 5.48 ಕೋಟಿ ರೂ. ನಷ್ಟವಾಗಿದೆ. ಜೊತೆಗೆ 110 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾಗೂ 1550.48 ಕಿ.ಮೀ. ರಾಜ್ಯ ಹೆದ್ದಾರಿ ಹಾಳಾಗಿದೆ ಎಂದರು.

REVANNA PWD 1

ಮಳೆ ನಿಲ್ಲುವವರೆಗೂ ದುರಸ್ತಿ ಕಾರ್ಯ ಪ್ರಾರಂಭಿಸುವುದು ಕಷ್ಟ. ಈಗಾಗಲೇ 25 ಜೆಸಿಬಿಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಆದರೆ ಗುಡ್ಡ ಕುಸಿತ ಹೆಚ್ಚಾಗುತ್ತಿದೆ. ಸಕಲೇಶಪುರದ ಬಳಿ ಅರ್ಧಗುಡ್ಡ ರಸ್ತೆಗೆ ಬಿದ್ದಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು 60 ಕೋಟಿ ರೂ. ಬೇಕಾಗುತ್ತದೆ. ಇದರಿಂದ ಮಣ್ಣು ತೆರವು ಕಾರ್ಯ ಬಿಟ್ಟು ಪರ್ಯಾಯ ಮಾರ್ಗ ನಿರ್ಮಿಸುವ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಶಿರಾಡಿ ಘಾಟ್ ರಸ್ತೆ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆಗೆ ಮಾತನಾಡಿರುವೆ. ಒಟ್ಟು 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಲುವೆ ಹಾಗೂ ರಸ್ತೆ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಕುರಿತು ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುವಂತೆ ಹಾಸನ ಹಾಗೂ ಮಂಗಳೂರು ಸಂಸದರಿಗೆ ನಾನು ಮನವಿ ಮಾಡಲಿರುವೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *