ಎಲ್ಲದಕ್ಕೂ ವ್ಯಂಗ್ಯ, ಟೀಕೆ ಸರಿಯಲ್ಲ- ಬಳಸುವ ಭಾಷೆ ಬಗ್ಗೆ ಎಚ್ಚರ ಇರಲಿ: ಎ.ಎಚ್.ವಿಶ್ವನಾಥ್

Public TV
2 Min Read
eshwarappa vishwanath

-ನಾಟಿ ಮಾಡ್ದೆ, ಬಿಜೆಪಿ ಅವ್ರಂತೆ ಸದನದಲ್ಲಿ ಬ್ಲೂ ಫಿಲ್ಮ್ ನೋಡುಕೆ ಆಗುತ್ತಾ?

ಮೈಸೂರು/ಚಿಕ್ಕಮಗಳೂರು: ಎಲ್ಲದಕ್ಕೂ ವ್ಯಂಗ್ಯ ಟೀಕೆ ಮಾಡೋದು ಸರಿಯಲ್ಲ. ತಾವು ಬಳಸುವ ಭಾಷೆ ಬಗ್ಗೆ ಎಚ್ಚರ ಇರಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಎಚ್.ವಿಶ್ವನಾಥ್ ಅವರು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷರು, ಸಿಎಂ ನಾಟಿ ಮಾಡೋದರಲ್ಲಿ ತಪ್ಪೇನಿಲ್ಲ. ಬಿಜೆಪಿ ಅವರಿಗೆ ರೈತರ ಕೂಗು ಅರ್ಥ ಆಗಲ್ಲ. ಮೋದಿಯವರಿಗೆ ಕೇವಲ ಅಂಬಾನಿ ಅಂತಹ ದೊಡ್ಡ ವ್ಯಕ್ತಿಗಳ ಮಾತ್ರ ಕಾಣುತ್ತಾರೆ. ಇಂದು ನಾಟಿ ವಿಷಯವಾಗಿ ಬಿಜೆಪಿ ಕುಮಾರಸ್ವಾಮಿಯವರನ್ನ ವ್ಯಂಗ್ಯ ಮಾಡುತ್ತಿಲ್ಲ. ನಾಡಿನ ರೈತರನ್ನು ನೀವು ವ್ಯಂಗ್ಯ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

VISHWA

ತಮಿಳುನಾಡಿನಲ್ಲಿ ಚಿಕ್ಕ ರಾಜಕಾರಣಿಯಿಂದ ಹಿಡಿದು ಎಲ್ಲ ದೊಡ್ಡ ನಾಯಕರೆಲ್ಲರು ಭಾಷಾಭಿಮಾನ ಹೊಂದಿದ್ದಾರೆ. ಅಲ್ಲಿಯ ಯಾವ ನಾಯಕರು ಭಾಷೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಆದರೆ ಇವತ್ತು ಕನ್ನಡ ನಾಡಿನಲ್ಲಿ ರಾಜಕೀಯ ಪಕ್ಷದ ನಾಯಕರು ನಮ್ಮ ಭಾಷೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಟೀಕೆ ಮಾಡುವಾಗ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ರೀತಿಯಾಗಿ ಮಾತನಾಡೋದು ಯಾರಿಗೂ ಶೋಭೆಯನ್ನು ತರುವುದಿಲ್ಲ. ಹಾಗಾಗಿ ಮಾನ್ಯ ಈಶ್ವರಪ್ಪವರು ಮಾತನಾಡುವಾಗ ಪದ ಪ್ರಯೋಗದ ಎಚ್ಚರಿಕೆ ಇಂದಿರಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು.

ಸಿಎಂ ರೈತನ ಮಗ: ಕುಮಾರಸ್ವಾಮಿ ಅವರು ರೈತನ ಮಗ, ಗದ್ದೆಯಲ್ಲಿ ನಾಟಿ ಮಾಡದೇ ಕ್ಲಬ್ ನಲ್ಲಿ ಡ್ಯಾನ್ಸ್ ಮಾಡೋದಕ್ಕೆ ಆಗತ್ತಾ? ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮೇಗೌಡ ಹೇಳಿದ್ದಾರೆ.

ರೈತರೊಂದಿಗೆ ನಾಟಿ ಮಾಡದೇ, ಬಿಜೆಪಿ ಅವರಂತೆ ಸದನದಲ್ಲಿ ಕುಳಿತು ಬ್ಲೂ ಫಿಲ್ಮ್ ನೋಡುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ ಧರ್ಮೇಗೌಡರು, ನಮ್ಮ ಬಗ್ಗೆ ಪ್ರತಿನಿತ್ಯ ಮಾತನಾಡದಿದ್ರೆ ಅವರಿಗೆ ಸಮಾಧಾನ ಆಗಲ್ಲ. ನಾವು ಕೂತು ನಿಂತ್ರು ಅವರು ಮಾತನಾಡುವುದನ್ನು ನಿಲ್ಲುಸುತ್ತಿಲ್ಲ. ನಮ್ಮ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಮೈಗೆ ಹತ್ತಲ್ಲ ಅನ್ನಿಸುತ್ತದೆ ಎಂದು ಕಿಡಿಕಾರಿದರು.

DHARMEGOWDA

ನಾಟಿ ಕಾರ್ಯ ಕೇವಲ ಶೋ: ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಿರುವುದು ಹಾಸ್ಯಸ್ಪದ ಸಂಗತಿಯಾಗಿದೆ. ಎಚ್ ಡಿಕೆ ಭತ್ತ ನಾಟಿ ಕಾರ್ಯ ಕೇವಲ ಶೋ ಆಗಿದೆ. ಒಂದೆಡೆ ರೈತರ ವಿಚಾರದಲ್ಲಿ ಶೋ ಮಾಡುತ್ತಿರುವ ಮುಖ್ಯಮಂತ್ರಿಗಳು ರೈತರ ಸಂಕಷ್ಠಗಳಿಗೆ ಸ್ಪಂದಿಸಲೇಬೇಕೆಂದು ಹೇಳುತ್ತಾರೆ. ಇನ್ನೊಂದೆಡೆ ಸಾಲ ಮನ್ನಾ ವಿಚಾರದಲ್ಲಿ ದುಡ್ಡಿನ ಗಿಡಿ ನೆಟ್ಟಿಲ್ಲ ಅಂತಾರೆ. ಒಟ್ಟಿನಲ್ಲಿ ಸಿಎಂ ಅವರು ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಳ್ಳಾರಿಯಲ್ಲಿ ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *