ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ!

Public TV
0 Min Read
death

ವಿಜಯಪುರ: ರೈತರೊಬ್ಬರು ಸಾಲದ ಬಾಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬಸವನಬಾಗೇವಾಡಿ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.

60 ವರ್ಷ ವಯಸ್ಸಿನ ಬಸಪ್ಪ ಚಂದ್ರಪ್ಪ ಮುದಕವಿ ಆತ್ಮಹತ್ಯೆ ಮಾಡಿಕೊಂಡ ರೈತ. ಇವರು 3.50 ಎಕರೆ ಜಮೀನನ್ನು ಹೊಂದಿದ್ದು, ಬಿತ್ತನೆ ಮಾಡಲು 1 ಲಕ್ಷ ಸಾಲ ಪಡೆದಿದ್ದರು. ಬಾವಿ ಕೊರೆಸಲು ತೆಲಗಿ ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಸಾಲ ಮಾಡಿದ್ದರು. ಸಾಲವನ್ನು ತೀರಿಸಲಾಗದ ಹಿನ್ನೆಲೆಯಲ್ಲಿ ತಾನೇ ಕೊರೆಸಿದ್ದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *