ಭುವನೇಶ್ವರ್: ಫೋಟೋ ತೆಗೆಸಿಕೊಳ್ಳುವಾಗ ಯುವಕನೊಬ್ಬ ಕಾಲು ಜಾರಿ ಜಲಪಾತಕ್ಕೆ ಬಿದ್ದ ಘಟನೆ ಒಡಿಶಾದ ಕೋರಾಪುತ್ನ ಗಲಿಗಬಾದರ್ ಜಲಪಾತದಲ್ಲಿ ನಡೆದಿದೆ.
ಸುಬ್ರತ್ ನಾಗ್(24) ಜಲಪಾತದಲ್ಲಿ ಬಿದ್ದು ಗಾಯಗೊಂಡ ಯುವಕ. ಸುಬ್ರತ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಜಲಪಾತಕ್ಕೆ ಹೋಗಿದ್ದನು. ಆಗ ತನ್ನ ಸ್ನೇಹಿತನಿಗೆ ಹೇಳಿ ಅಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಈ ಘಟನೆ ನಡೆದಿದೆ.
ಜಲಪಾತದ ನೀರು ಸಾಮಾನ್ಯವಾಗಿ ಹರಿಯುತ್ತಿದ್ದು, ಸುಬ್ರತ್ ಅಲ್ಲಿ ಫೋಟೋ ತೆಗೆಸಿಕೊಳ್ಳಲೆಂದು ಹೋಗಿದ್ದನು. ಆದರೆ ಫೋಟೋಗೆ ಪೋಸ್ ಕೊಡಬೇಕಾದರೆ ಸುಬ್ರತ್ ಕಾಲು ಜಾರಿ ಕೆಳಗೆ ಬಿದಿದ್ದಾನೆ.
ಸುಬ್ರತ್ ನಾಗ್ನನ್ನು ಪೋಟಂಗಿ ಕಮ್ಯೂನಿಟಿ ಹೆಲ್ತ್ ಕೇರ್ ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅಲ್ಲಿಂದ ಕೋರಾಪುತ್ ಆಸ್ಪತ್ರೆಯಲ್ಲಿ ಸುಬ್ರತ್ನನ್ನು ದಾಖಲಿಸಿದ್ದರು. ಸದ್ಯ ಸುಬ್ರತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ.