ಬೆಂಗಳೂರು: ಚುನಾವಣೆ ಬಂದಿದ್ದೇ ಬಂದಿದ್ದು, ರಾಜ್ಯದಲ್ಲಿ ಚುನಾವಣಾ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ನಾಯಕ ಗೆಲ್ಲಲಿ ಅಂತಾ ದೇವರ ಮೊರೆ ಹೋಗ್ತಿದ್ದಾರೆ.
ಬನಶಂಕರಿ ದೇಗುಲದ ಹುಂಡಿ ಎಲೆಕ್ಷನ್ ಕೃಪೆಯಿಂದ ತುಂಬಿ ತುಳುಕಿದ್ದು ಮಗದೊಂದು ದಾಖಲೆಯ ಮೊತ್ತ ಹುಂಡಿಯಲ್ಲಿ ಸಂಗ್ರಹವಾಗಿದೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಹುಂಡಿ ತೆರೆದಾಗ 20 ಲಕ್ಷ ದಿಂದ 22 ಲಕ್ಷದಷ್ಟು ದುಡ್ಡು ಸಂಗ್ರಹವಾಗುತ್ತಿತ್ತು. ಒಂದೇ ತಿಂಗಳಿಗೆ ಎಂಟು ಲಕ್ಷ ಆದಾಯ ಹೆಚ್ಚಾಗಿದೆ.
ಈ ಬಾರಿ ಬರೋಬ್ಬರಿ 30 ಲಕ್ಷದಷ್ಟು ಹಣ ಸಂಗ್ರಹವಾಗಿದ್ದು ಮುಜರಾಯಿ ಇಲಾಖೆಯವರು ಫುಲ್ ಖುಷ್ ಆಗಿದ್ದಾರೆ. ಸಚಿವ ರಾಮಲಿಂಗರೆಡ್ಡಿ ಮಗಳು ಸೌಮ್ಯ ರೆಡ್ಡಿ ಸೇರಿದಂತೆ ಜಯನಗರ, ಬಿಟಿಎಂ ಲೇಔಟ್ ಹಾಗೂ ಬೆಂಗಳೂರು ವಿಧಾನಸಭಾ ಕ್ಷೇತ್ರದ ಬಹುತೇಕ ಅಭ್ಯರ್ಥಿಗಳು, ಕಾರ್ಯಕರ್ತರು ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವರಿಗೆ ಪೂಜೆ ಮಾಡಿಸಿದ್ದರು.