Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ರಂಗಭೂಮಿ ಪ್ರತಿಭೆಗಳು ಪೋಣಿಸಿದ ‘ಸೂಜಿದಾರ’ದಲ್ಲಿ ಹರಿಪ್ರಿಯಾ!

Public TV
Last updated: March 26, 2018 5:08 pm
Public TV
Share
2 Min Read
SOOJIDARA 2
SHARE

ಬೆಂಗಳೂರು: ನೀರ್ ದೋಸೆ ಸಿನಿಮಾದಲ್ಲಿ ಮೈಚಳಿ ಬಿಟ್ಟು ನಟಿಸಿದ್ದ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಿ, ಇನ್ನೇನು ತೆರೆಗೆ ಬರಲು ಅಣಿಯಾಗಿರುವ ಸಿನಿಮಾ `ಸೂಜಿದಾರ’!

ಹೆಸರು ಕೇಳಿ `ಇದೂ ಕೂಡಾ ಡಬಲ್ ಮೀನಿಂಗ್ ಸಿನಿಮಾನಾ?’ ಅಂತಾ ಪಡ್ಡೆಗಳ ಹುಬ್ಬು ನೆಟ್ಟಗಾಗಬಹುದು. ಆದರೆ ಈ ಚಿತ್ರ ಇವತ್ತಿನ ಕಾಲಘಟ್ಟದಲ್ಲಿ ಏನೇನೂ ಅಲ್ಲದ ಹೆಣ್ಣುಮಗಳೊಬ್ಬಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಗುರುತಿಸಿಕೊಳ್ಳಬೇಕು ಅನ್ನೋ ಕಥೆ ಇದರಲ್ಲಿದೆಯಂತೆ.

ಈವರೆಗೆ ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಮೌನೇಶ್ ಬಡಿಗೇರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆಗಾರರಾಗಿಯೂ ಗುರುತಿಸಿಕೊಂಡಿರೋ ಮೌನೇಶ್ ಬಡಿಗೇರ್ ಇಂದ್ರಕುಮಾರ್ ಅವರ ಸಣ್ಣ ಕಥೆಯೊಂದನ್ನಿಟ್ಟುಕೊಂಡು ಸೂಜಿದಾರ ಚಿತ್ರವನ್ನು ರೂಪಿಸಿದ್ದಾರೆ. ಸರಿಸುಮಾರು ಎರಡು ವರ್ಷಗಳ ಹಿಂದೆ ಇಂದ್ರಕುಮಾರ್ ಅವರ ಈ ಕಥೆಯನ್ನು ಓದಿ ಅವರಿಗೆ ಕೂಡಲೇ ಫೋನಾಯಿಸಿದ್ದ ಮೌನೇಶ್ ಈ ಕಥೆಯನ್ನು ಸಿನಿಮಾ ಮಾಡೋದಾಗಿ ಹೇಳಿಕೊಂಡಿದ್ದರಂತೆ. ಅದೀಗ ಕೈಗೂಡಿ ತೆರೆಗೆ ಬರುವ ಸನ್ನಾಹದಲ್ಲಿದೆ. ಅಭಿಜಿತ್ ಕೋಟೆಗಾರ್ ಉಡುಪಿ ಮತ್ತು ಸಚ್ಚೀಂದ್ರ ನಾಯಕ್ ಬೆಳ್ತಂಗಡಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

SOOJIDARA 4

ಯಶ್ ಶೆಟ್ಟಿ ಎನ್ನುವ ಹೊಸ ಹುಡುಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ ಕುಮಾರ್, ಚೈತ್ರಾ ಹರೀಶ್, ನಾಗರಾಜ್ ಪತ್ತಾರ್ ಮುಂತಾದವರು ನಟಿಸಿದ್ದಾರೆ. ಅಶೋಕ್ ರಾಮನ್ ಛಾಯಾಗ್ರಹಣವಿರುವ ಈ ಚಿತ್ರ ಇದೀಗ ಡಬ್ಬಿಂಗ್ ಹಂತದಲ್ಲಿದೆ. ಇನ್ನು ಪ್ರಧಾನ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಮತ್ತು ಸಾಹಿತ್ಯದ ಹಿನ್ನೆಲೆ ಇರುವವರು ಚಿತ್ರವೊಂದನ್ನು ಮಾಡಲು ಮುಂದಾಗ ಸಹಜವಾಗಿಯೇ ಕುತೂಹಲವಿರುತ್ತದೆ. ಅಂಥಾದ್ದೇ ಒಂದು ಕ್ಯೂರಿಯಾಸಿಟಿಗೆ ಕಾರಣವಾಗಿರೋ `ಸೂಜಿದಾರ’ ಚಿತ್ರವೀಗ ಮುಕ್ತಾಯದ ಹಂತ ತಲುಪಿಕೊಂಡಿದೆ. ಎಡಿಟಿಂಗ್, ಸಾಂಗ್ ರೀರೆಕಾರ್ಡಿಂಗ್ ಗಳನ್ನೆಲ್ಲ ಹಂತ ಹಂತವಾಗಿ ಮುಗಿಸಿಕೊಳ್ಳುತ್ತಿರೋ ಚಿತ್ರತಂಡ ಪ್ರಚಾರದ ಅಖಾಡಕ್ಕಿಳಿಯಲು ತಯಾರಿ ನಡೆಸಿಕೊಳ್ಳುತ್ತಿದೆ. ಈ ಚಿತ್ರದಲ್ಲಿ ಹೊಸ ಬಗೆಯ ಐದು ಹಾಡುಗಳಿವೆಯಂತೆ. ಇದಕ್ಕೆ ಭಿನ್ನಷಡ್ಜ ಸಂಗೀತ ನೀಡಿದ್ದಾರೆ. ಈ ಹಾಡುಗಳು ಮತ್ತು ಟ್ರೈಲರ್ ಅನ್ನು ಇಷ್ಟರಲ್ಲೇ ಚಿತ್ರ ತಂಡ ಲೋಕಾರ್ಪಣೆ ಮಾಡಲಿದೆ. ಇದುವರೆಗೂ ಹಲವಾರು ಚಿತ್ರಗಳ ಚಿತ್ರಕಥೆ, ನಟ ನಟಿಯರನ್ನು ತಯಾರು ಮಾಡುವಂಥಾ ಕೆಲಸ ಕಾರ್ಯಗಳ ಮೂಲಕ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದ ಮೌನೇಶ್ ಬಡಿಗೇರ್ ಚೊಚ್ಚಲ ಪ್ರಯತ್ನದಲ್ಲಿಯೇ ಒಂದೊಳ್ಳೆ ಕಥೆನ್ನು ಆರಿಸಿಕೊಂಡು ಚೆಂದದ ಚಿತ್ರ ಮಾಡಿದ ಸಮಾಧಾನದಲ್ಲಿದ್ದಾರೆ.

SOOJIDARA 1

ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ ಮೌನೇಶ್ ಬಡಿಗೇರ್ ನಿರ್ದೇಶನದ ಸೂಜಿದಾರ ಪ್ರೇಕ್ಷಕರ ವಲಯದಲ್ಲೊಂದು ಚರ್ಚೆ ಹುಟ್ಟು ಹಾಕಿದೆ. ಮೊದಲ ನೋಟದಲ್ಲಿಯೇ ಹರಿಪ್ರಿಯಾ ಉತ್ತರ ಕರ್ನಾಟಕ ಶೈಲಿಯಲ್ಲಿ ಪಾರಂಪರಿಕ ಉಡುಗೆಯಲ್ಲಿ ಸೆಳೆದಿದ್ದಾರೆ. ಸೂಜಿದಾರ ಚಿತ್ರದ ಪೋಸ್ಟರ್ ಗಳೇ ಸಿನಿಮಾದ ಕುರಿತಾಗಿ ಕ್ಯೂರಿಯಾಸಿಟಿ ಹುಟ್ಟುಹಾಕುವಂತಿದೆ. ರಂಗಭೂಮಿ ಪ್ರತಿಭೆಗಳು ಏನೇ ಮಾಡಿದರೂ ಅದು ಹೊಸತಾಗೇ ಇರುತ್ತದೆ ಮತ್ತು ಸದಭಿರುಚಿಯಿಂದ ಕೂಡಿರುತ್ತದೆ. ಈ ತನಕ ಅದು ಸಾಬೀತಾಗುತ್ತಲೇ ಬಂದಿದೆ. ಸೂಜಿದಾರ ಕೂಡಾ ಅದೇ ಹಾದಿಯನ್ನು ಮುಂದುವರೆಸೋದರಲ್ಲಿ ಡೌಟಿಲ್ಲ…!

SOOJIDARA 3

TAGGED:Achyut KumarChaitra HarishcinemaHariprriyaMaunesh BadigareNagaraj PattarsandalwoodSoojidaraSuchendra Prasadಅಚ್ಯುತ ಕುಮಾರ್ಚೈತ್ರಾ ಹರೀಶ್ನಾಗರಾಜ್ ಪತ್ತಾರ್ಮೌನೇಶ್ ಬಡಿಗೇರ್ಸುಚೇಂದ್ರ ಪ್ರಸಾದ್ಸೂಜಿದಾರಹರಿಪ್ರಿಯಾ
Share This Article
Facebook Whatsapp Whatsapp Telegram

You Might Also Like

Heavy Rain
Belgaum

ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

Public TV
By Public TV
44 seconds ago
Temba Bavuma 2
Cricket

ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

Public TV
By Public TV
5 minutes ago
Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
22 minutes ago
WTC SA 3
Cricket

ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

Public TV
By Public TV
27 minutes ago
Chikkodi Crime
Belgaum

ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

Public TV
By Public TV
30 minutes ago
Untitled 1 copy
Latest

11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

Public TV
By Public TV
58 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?