ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಉಪನ್ಯಾಸಕರೆದುರೇ ವಿದ್ಯಾರ್ಥಿಗಳ ಮಾರಾಮಾರಿ

Public TV
0 Min Read
ckm college

ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಉಪನ್ಯಾಸಕರ ಎದುರೇ ಹೊಡೆದಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

ಕೊಪ್ಪಾ ಡಿಗ್ರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ವಿದ್ಯಾರ್ಥಿಗಳ ಮಾರಾಮಾರಿ ನಡೆದಿದೆ. ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.

ckm 3 1

ಉಪನ್ಯಾಸಕರ ಎದುರೇ ವಿದ್ಯಾರ್ಥಿಗಳ ಹೊಡೆದಾಟ ನಡೆದಿದ್ದು, ಬಿಡಿಸಲು ಹೋದ ಕೆಲ ಉಪನ್ಯಾಸಕರಿಗೂ ಧರ್ಮದೇಟು ಬಿದ್ದಿದೆ. ವಿದ್ಯಾರ್ಥಿಗಳು ಹೊಡೆದಾಡುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

ckm 1 1

ckm 2 1

Share This Article
Leave a Comment

Leave a Reply

Your email address will not be published. Required fields are marked *