ಮದುವೆಯಾದ 6 ದಿನಕ್ಕೆ ಪತ್ನಿಗೆ ಮತ್ತೊಂದು ಮದುವೆ ಮಾಡಿಸಿದ ಪತಿ!

Public TV
2 Min Read
Marriage

ಭುವನೇಶ್ವರ್: ಮದುವೆಯಾದ ಆರೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರೇಮಿ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಸಿ, ಕಳುಹಿಸಿಕೊಟ್ಟ ಘಟನೆ ಒಡಿಶಾದ ರೂರ್ಕೆಲಾದ ಸುಂದರ್ ಗಡ್ ಜಿಲ್ಲೆಯ ಬಡ್‍ಗಾವ್ ಬ್ಲಾಕ್‍ನ ಪವಾರಾ ಗ್ರಾಮದಲ್ಲಿ ನಡೆದಿದೆ.

ವಾಸುದೇವದ ಟಪ್ಪು(28) ಜಾರ್ಸುಗುಡಾದ ದೇವಿನಿ ಗ್ರಾಮದ 24ರ ಯುವತಿ ಜೊತೆ ಮಾರ್ಚ್ 4ರಂದು ಮದುವೆಯಾಗಿದ್ದರು. ವಾಸುದೇವ್ ರೈತರ ಸಮುದಾಯಕ್ಕೆ ಸೇರಿದ್ದರಿಂದ ರೈತರ ಸಂಪ್ರದಾಯದಂತೆ ಈ ಮದುವೆ ನಡೆದಿತ್ತು.

ಭಾನುವಾರದಂದು ವಾಸುದೇವ್ ಮನೆಗೆ 3 ಯುವಕರು ಬಂದಿದ್ದರು. ಮೂವರಲ್ಲಿ ಒಬ್ಬ ತಾನು ವಧುವಿನ ಸೋದರ ಸಂಬಂಧಿ ಎಂದು ಹೇಳಿಕೊಂಡಿದ್ದನು. ಇದನ್ನು ನಂಬಿದ್ದ ವಾಸುದೇವ್ ಮೂವರಿಗೂ ಅತಿಥಿ ಸತ್ಕಾರವನ್ನು ಮಾಡಿದ್ದರು. ನಂತರ ಮೂವರು ಯುವಕರಲ್ಲಿ ಇಬ್ಬರು ಊರು ಸುತ್ತಲು ಎಂದು ಹೊರ ಹೋಗಿದ್ದರು. ಆಗ ಸೋದರ ಸಂಬಂಧಿ ಎಂದು ಹೇಳಿಕೊಂಡಿದ್ದ ಯುವಕ ವಾಸುದೇವ್‍ನ ಪತ್ನಿ ಜೊತೆ ಆಕೆಯ ಮನೆಯಲ್ಲಿಯೇ ಇದ್ದನು ಎಂದು ಹೇಳಲಾಗಿದೆ.

Marriage 3

ವಧು ಜೊತೆಗಿದ್ದ ಯುವಕನನ್ನು ನೋಡಿದ ಸ್ಥಳೀಯರು ಆತನನ್ನು ಥಳಿಸಿದ್ದರು. ಆಗ ಯುವತಿ ಅವರನ್ನು ತಡೆದು, ಈತ ನನ್ನ ಸೋದರ ಸಂಬಂಧಿ ಅಲ್ಲ. ಈತ ನನ್ನ ಪ್ರೇಮಿ ಎಂದು ತಿಳಿಸಿದ್ದಳು. ನಾವಿಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದೇವೆ. ಆದರೆ ನನ್ನ ಕುಟುಂಬದವರು ನಮ್ಮ ಪ್ರೀತಿಯನ್ನು ನಿರಾಕರಿಸಿದ್ದರು. ಮೂರು ಮಕ್ಕಳಲ್ಲಿ ನಾನು ಕೊನೆಯವಳು. ನನ್ನ ಪೋಷಕರು ಬದುಕಿಲ್ಲದ ಕಾರಣ ನನ್ನ ಸಂಬಂಧಿಕರು ಬಲವಂತವಾಗಿ ಮದುವೆ ಮಾಡಿಸಿದ್ದರಿಂದ ಈ ಮದುವೆಯನ್ನು ಒಪ್ಪಿದ್ದೆ ಎಂದು ತಿಳಿಸಿದ್ದಾಳೆ.

MARRIAGE 1

ಈ ಮಾತನ್ನು ಕೇಳಿ ವಾಸುದೇವ್ ತನ್ನ ಪತ್ನಿಗೆ, ನೀನು ಇಷ್ಟಪಡುವ ವ್ಯಕ್ತಿಯ ಜೊತೆ ಮದುವೆಯಾಗು ಎಂದು ತಿಳಿಸಿದ್ದರು. ನಂತರ ವಾಸುದೇವ್ ವಧುವಿನ ಸಹೋದರ ಹಾಗೂ ಸಹೋದರಿಯ ಜೊತೆ ಮಾತನಾಡಿದ್ದರು. ನಂತರ ವಧುವಿನ ಪ್ರಿಯಕರನ ಪೋಷಕರಿಗೆ ವಾಸುದೇವ್ ನಡೆದ ಎಲ್ಲ ವಿಷಯವನ್ನು ತಿಳಿಸಿದ್ದರು. ನಂತರ ಶನಿವಾರದಂದು ವಾಸುದೇವ್ ತನ್ನ ಪತ್ನಿಯ ಮದುವೆಯನ್ನು ಪ್ರಿಯಕರನ ಜೊತೆ ಅದ್ಧೂರಿಯಾಗಿ ನಡೆಸಿ ನಂತರ ಆಕೆಯನ್ನು ಆತನ ಜೊತೆ ಕಳುಹಿಸಿಕೊಟ್ಟಿದ್ದಾರೆ.

marriage 1

ನಾನು ಮದುವೆ ಮಾಡದೇ ಇದ್ದಿದ್ದರೆ ಮೂವರ ಜೀವನ ಹಾಳಾಗುತ್ತಿತ್ತು. ಆದರೆ ಈಗ ಎಲ್ಲರೂ ಖುಷಿಯಾಗಿದ್ದಾರೆ. ವಾಸುದೇವ್ ಅವರ ಈ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಜೀವನಪರ್ಯಂತ ವಾಸುದೇವ್ ಉಪಕಾರವನ್ನು ಮರೆಯುವುದಿಲ್ಲ ಎಂದು ವಧು ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ ಗ್ರಾಮದ ಹಿರಿಯರು ಪ್ರತಿಕ್ರಿಯಿಸಿ, ವಾಸುದೇವ್ ಈ ನಿರ್ಧಾರ ಕೇಳಿ ಈ ಮಾರ್ಗ ಬಿಟ್ಟು ಬೇರೆ ಯಾವುದೇ ಮಾರ್ಗ ಇರಲಿಲ್ಲ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *