ಅಂಧನಾದ್ರೂ ಸ್ವಾಭಿಮಾನದ ಜೀವನ ನಡೆಸುತ್ತಿರೋ ಯುವಕನ ನೇತ್ರ ಚಿಕಿತ್ಸೆಗೆ ಬೇಕಿದೆ ಸಹಾಯ

Public TV
1 Min Read
KWR BELAKU 3

ಬಾಗಲಕೋಟೆ: ಅಂಧನಾದ್ರೂ ಸ್ವಾಭಿಮಾನ ಜೀವನ ನಡೆಸುತ್ತಿರುವ ಜಿಲ್ಲೆಯ ಬೀಳಗಿ ತಾಲೂಕಿನ ಕದಾಂಪುರ ಗ್ರಾಮದ ಬಸವರಾಜ್ ನೇತ್ರ ಚಿಕಿತ್ಸೆಗೆ ಸಹಾಯ ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಬಸವರಾಜ್ ಹುಟ್ಟು ಅಂಧರೇನಲ್ಲ, 15 ವರ್ಷಗಳ ಹಿಂದೆ ನರ ದೌರ್ಬಲ್ಯಕ್ಕೆ ತುತ್ತಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಕಣ್ಣುಗಳು ಹೋದರೂ ಧೃತಿಗೆಡದ ಬಸವರಾಜ್ ಗ್ರಾಮದಿಂದ ಗ್ರಾಮಗಳಿಗೆ ತಿರುಗಿ ಪುಸ್ತಕ, ಪೆನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ.

KWR BELAKU 4

ಬಡ ಕುಟುಂಬದಲ್ಲಿ ಹುಟ್ಟಿರುವ ಬಸವರಾಜ್ ತಂದೆ-ತಾಯಿಯ ನಾಲ್ಕನೇ ಮಗ. ದಿನ ನಿತ್ಯದ ಚಟುವಟಿಕೆಗಾಗಿ ಪೋಷಕರನ್ನು ಅವಲಂಬಿಸಿರುವ ಬಸವರಾಜ್ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಬಸವರಾಜ್ ಕುಟುಂಬಸ್ಥರು ಆರ್ಥಿಕವಾಗಿ ಸಬಲರಿಲ್ಲದ ಕಾರಣ ದೃಷ್ಟಿ ಕಳೆದುಕೊಂಡ ಮಗನಿಗೆ ಚಿಕಿತ್ಸೆ ಕೊಡಿಸಿಲ್ಲ. ಬಸವರಾಜ್ ಸಹೋದರರೆಲ್ಲರಿಗೂ ಮದುವೆ ಆಗಿದ್ದು, ಮುಂದೆ ತನ್ನನ್ನು ಬಿಟ್ಟು ಹೋದ್ರೆ ಜೀವನ ನಡೆಸುವುದರ ಬಗ್ಗೆ ಚಿಂತಿತರಾಗಿದ್ದಾರೆ.

ಬಸವರಾಜ್ ಕಣ್ಣುಗಳಿಗೆ ಸೂಕ್ತ ಚಿಕಿತ್ಸೆ ನೀಡಿದರೆ ದೃಷ್ಟಿ ಬರಬಹುದೆಂಬ ಎಂಬ ನಿರೀಕ್ಷೆಯಲ್ಲಿದ್ದಾರೆ. ಕಣ್ಣಿನ ದೃಷ್ಟಿ ಬರದೇ ಇದ್ದರೂ ಸಣ್ಣದಾದ ಪುಸ್ತಕದ ಅಂಗಡಿ ಹಾಕಿಕೊಟ್ಟರೆ ಸ್ವಾಭಿಮಾನದ ಜೀವನ ನಡೆಸಬಹುದು ಅಂತಾ ಬಸವರಾಜ್ ಹೇಳುತ್ತಾರೆ.

 

https://youtu.be/yc54skxS9tQ

Share This Article
Leave a Comment

Leave a Reply

Your email address will not be published. Required fields are marked *