ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

Public TV
1 Min Read
ANSARI

ಕೊಪ್ಪಳ: ಶ್ರೀರಾಮನ ಹೆಸರಲ್ಲಿ ಕೊಲೆ, ಸುಲಿಗೆ ಮಾಡ್ತಾರೆ ಅನ್ನೋ ವಿವಾದಿತ ಹೇಳಿಕೆಯನ್ನ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಸಮರ್ಥಿಸಿಕೊಂಡಿದ್ದಾರೆ.

ಗಂಗಾವತಿಯಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯೊಳಗೆ ಶ್ರೀರಾಮನ ಪೂಜೆ ಮಾಡ್ತಾರೆ. ಹೊರಗಡೆ ಬಂದು ಬೆಂಕಿ ಹಚ್ಚುತ್ತಾರೆ. ಅತ್ಯಾಚಾರ ಮಾಡ್ತಾರೆ. ಈ ರೀತಿ ಮಾಡಲು ದೇವರು ಹೇಳಿದ್ದಾರಾ? ಯಾವ ಧರ್ಮ ಗ್ರಂಥದಲ್ಲಿ ಇಂಥ ಕೆಲಸ ಮಾಡಿ ಅಂತ ಹೇಳಿಲ್ಲ ಅಂತ ಹೇಳುವುದರ ಮೂಲಕ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ANSARI 2

ನಾನು ಏನು ಹೇಳಿದ್ದೀನಿ ಅನ್ನೋದು ಟಿವಿಯವರು ಪೂರ್ಣ ತೋರಿಸುವುದಿಲ್ಲ. ಹಿಂದೆ- ಮುಂದೆ ಏನು ಹೇಳಿದ್ದೀನಿ ಅನ್ನೋದು ಬಿಟ್ಟು ಶ್ರೀರಾಮ ಹೆಸ್ರಲ್ಲಿ ಕೊಲೆ ಅನ್ಸಾರಿ ಹೇಳಿಕೆ ಅಂತ ತೋರಿಸ್ತಾರೆ. ಇದಕ್ಕೆ ಗೋಮಧುಸೂದನ್ ಕರೆದು ಡಿಬೆಟ್ ಮಾಡ್ತಾರೆ. ಗಡ್ಡ ಬಿಟ್ಟ ಅಮಾಯಕ ಮುಸ್ಲಿಮ್ ವ್ಯಕ್ತಿಗಳನ್ನು ಕರೆದು ಏನ್ರಿ ಶಾಸಕ ಅನ್ಸಾರಿ ಹೀಗೆ ಹೇಳಿದ್ದಾರೆ ಅಂತ ಕೇಳ್ತಾರೆ. ಅದಕ್ಕೆ ಅವರು ಈ ರೀತಿ ಹೇಳೊದು ತಪ್ಪು ಅಂತಾರೆ ಎಂದು ಟಿವಿ ಮಾಧ್ಯಮದ ವಿರುದ್ಧ ಅನ್ಸಾರಿ ಹರಿಹಾಯ್ದಿದರು. ಇದನ್ನೂ ಓದಿ: ಮನೆಯೊಳಗೆ ಜೈ ಶ್ರೀರಾಮ್, ಹೊರಗೆ ಕೊಲೆ ಸುಲಿಗೆ: ಶಾಸಕ ಇಕ್ಬಾಲ್ ಅನ್ಸಾರಿ ವಿವಾದಿತ ಹೇಳಿಕೆ

vlcsnap 2018 01 30 15h08m34s88

ಪದೇ ಪದೇ ಗೋಮಧುಸೂದನ್ ನನ್ನ ಡಿಬೇಟ್ ಗೆ ಯಾಕೆ ಕರೀತಿರಾ. ನೀವು ಏನಾದ್ರೂ ಅವರಿಗೆ ಜಾಹೀರಾತಿಗೆ ಇಟ್ಟುಕೊಂಡಿದ್ದೀರಾ? ಬಿಜೆಪಿಯಲ್ಲಿ ಮತ್ತ್ಯಾರು ಇಲ್ವಾ. ಗೋಮಧುಸೂದನ್ ಒಬ್ಬರೇ ಇರೋದಾ? ನಿಮಗೆ ಧೈರ್ಯ ಇದ್ರೆ ಚರ್ಚೆಗೆ ನಮ್ಮಂತವರನ್ನು ಕರೆಯಿರಿ. ದೇಶದಲ್ಲಿ ಪ್ರಚೋದನಾಕಾರಿ ನಡೆಯುತ್ತಿದೆ ಅಂದ್ರೆ ಇವರಿಂದಲೇ ಮಾತ್ರ ನಡೆಯುತ್ತಿದೆ ಎಂದು ಮಾಧ್ಯಮದ ವಿರುದ್ಧ ಕಿಡಿ ಕಾರಿದ್ರು.

ಇಂದು ಟಿವಿ ನಡೆಯಬೇಕಲ್ಲ, ರಾಜ್ಯದಲ್ಲಿ ಸುದ್ದಿ ಇರೋಲ್ಲ. ಹೀಗಾಗಿ ಇಷ್ಟ ಇರೋ ಸುದ್ದಿಯನ್ನ ತಗೊಂಡು ಸೆವಂಟಿ ಎಂಎಂ ಮಾಡಿ ಇಷ್ಟುದ್ದ ತೋರಿಸ್ತಾರೆ. ನಿಮಗೆ ಧಮ್ ಇದ್ರೆ ಇಕ್ಬಾಲ್ ಅನ್ಸಾರಿ ಮಂತ್ರಿ ಏನು ಮಾಡಿದ್ದಾನೆ ಅನ್ನೋದು ತೋರಿಸಿ. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಟ್ಟಿದ್ದಾರೆ ಅನ್ನೋದು ಏನೆಲ್ಲಾ ಮಾಡಿದೀನಿ ತೋರಿಸಿ ನೋಡೋಣ ಅಂತ ಟಿವಿ ಮಾಧ್ಯಮಕ್ಕೆ ಪಂಥಾಹ್ವಾನ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *