ರಾಮನಗರದಲ್ಲಿ ವಿನೂತನ ಪ್ರತಿಭಟನೆ: ಪಾಲೇಕರ್ ಪ್ರತಿಕೃತಿಯನ್ನು ಚಟ್ಟದಲ್ಲಿ ಮೆರವಣಿಗೆ ಮಾಡಿ ಬೆಂಕಿ

Public TV
1 Min Read
RMG BANDH COLLAGE

ರಾಮನಗರ: ಮಹದಾಯಿ ನೀರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಮುಂಜಾನೆಯಿಂದಲೇ ಪ್ರತಿಭಟನೆಗಳು ಶುರುವಾಗಿವೆ.

ರಾಮನಗರದಲ್ಲಿ ಮೊದಲಿಗೆ ಕರುನಾಡ ಸೇನೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಗೋವಾ ಸಿಎಂ ಮನೋಹರ್ ಪರಿಕ್ಕರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕನ್ನಡ ಜನಮನ ವೇದಿಕೆ ಕಾರ್ಯಕರ್ತರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.

RMG BANDH 10

ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನರ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಗೋವಾ ಸಿಎಂ ಪರಿಕ್ಕರ್ ಹಾಗೂ ನೀರಾವರಿ ಸಚಿವ ಪಾಲೇಕರ್ ಪ್ರತಿಕೃತಿಗಳನ್ನು ಚಟ್ಟಗಳಲ್ಲಿ ಮೆರವಣಿಗೆ ನಡೆಸಿದರು.

ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೋವಾ ಸಿಎಂ ಹಾಗೂ ನೀರಾವರಿ ಸಚಿವರ ಪ್ರತಿಕೃತಿಗಳಿಗೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಾಕಿ ದಹಿಸಿದರು. ಇದೇ ವೇಳೆ ಶಿವಣ್ಣ ಹಾಗೂ ಶಿವಶಂಕರ್ ಎಂಬ ಇಬ್ಬರು ಕಾರ್ಯಕರ್ತರು ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸಿದರು.

https://www.youtube.com/watch?v=2Mye0kES5G0

https://www.youtube.com/watch?v=qNNzR2FPct4

RMG BANDH 1

RMG BANDH 3

RMG BANDH 6

RMG BANDH 4

RMG BANDH 16

RMG BANDH 15

RMG BANDH 14

RMG BANDH 8

RMG BANDH 13

RMG BANDH 7

RMG BANDH 9

RMG BANDH 12

RMG BANDH 2

Share This Article
Leave a Comment

Leave a Reply

Your email address will not be published. Required fields are marked *