ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣ: ರವಿ ಬೆಳಗೆರೆ ಜೈಲು ಪಾಲು

Public TV
1 Min Read
RAVI BELEGERE

ಬೆಂಗಳೂರು: ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಈಗ ಜೈಲು ಪಾಲಾಗಿದ್ದಾರೆ.

ಸಿಸಿಬಿ ಕಚೇರಿಯಲ್ಲೇ ಮೂರು ದಿನ ಕಳೆದಿದ್ದ ರವಿ ಬೆಳೆಗೆರೆಯನ್ನು ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಎಸಿಎಂಎಂ ಕೋರ್ಟ್‍ಗೆ ಪೊಲೀಸರು ಹಾಜರುಪಡಿಸಿದರು. ವಿಚಾರಣೆ ಬಳಿಕ ನ್ಯಾಯಾಧೀಶ ಜಗದೀಶ್ ಬೆಳಗೆರೆಗೆ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟ ಮಾಡಿದರು.

ಬಿಪಿ, ಶುಗರ್ ಇದ್ದು ಪ್ರತಿ ದಿನ  ಇಂಜೆಕ್ಷನ್, ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ರವಿ ಪರ ವಕೀಲರು ಹೇಳಿದರೂ ಕೋರ್ಟ್ ಆರೋಗ್ಯ ಸಮಸ್ಯೆಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತೆ ಸೂಚಿಸಿತು.

ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದನ್ನು ನೋಡಿ ರವಿ ಬೆಳಗೆರೆ ಪೊಲೀಸ್ ಜೀಪಿನಲ್ಲೇ ಕಣ್ಣೀರು ಹಾಕಿದರು. ಪೊಲೀಸರು ಈಗ ಬೆಳಗೆರೆಯನ್ನು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

RAVI BEEL 5

RAVI BEEL 2

RAVI BEEL 3

RAVI BEEL 4

RAVI BEEL 5 1

RAVI BEEL 7

RAVI BEEL 8

RAVI BEEL 9

RAVI BEEL 10

RAVI BEEL 11

RAVI BEEL 13

RAVI BEEL 15

RAVI BEEL 17

RAVI BEEL 18

RAVI BEEL 19

RAVI BEEL 20

RAVI BEEL 1

Share This Article
Leave a Comment

Leave a Reply

Your email address will not be published. Required fields are marked *