ಬೈಕಿಗೆ ಡಿಕ್ಕಿ ಹೊಡೆದ KSRTC ಬಸ್ -ಒಂದೇ ಕುಟುಂಬದ ಮೂವರ ಸಾವು

Public TV
1 Min Read
CNG ACCIDENT FF

ಚಾಮರಾಜನಗರ: ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ಬೈಕ್ ಹಾಗೂ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಮೂಲತಃ ಯರಿಯೂರು ಗ್ರಾಮದ ರಾಜಮ್ಮ (48), ಸತೀಶ್  (24), ಬಿಂದು (19) ಮೃತಪಟ್ಟವರು ದುರ್ದೈವಿಗಳು. ಯಳಂದೂರು ಪಟ್ಟಣದಿಂದ ಯರಿಯೂರಿಗೆ ಪ್ರಯಾಣ ನಡೆಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

CNG ACCIDENT

ಒಂದೇ ಬೈಕಿನಲ್ಲಿ ಮೂವರು ಪ್ರಯಾಣಿಸುವ ವೇಳೆ ಹಿಂಬದಿಯಿಂದ ವೇಗವಾಗಿ ಬಂದ KSRTC ಬಸ್ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಸತೀಶ್ ಸಾವನ್ನಪ್ಪಿದ್ದಾರೆ. ನಂತರ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಪತ್ನಿ ಬಿಂದು, ತಾಯಿ ರಾಜಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಘಟನೆ ಕುರಿತು ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CNG ACCIDENT 5

CNG ACCIDENT 4

CNG ACCIDENT 7

CNG ACCIDENT 6

CNG ACCIDENT 3

CNG ACCIDENT 2

Share This Article
Leave a Comment

Leave a Reply

Your email address will not be published. Required fields are marked *