ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

Public TV
1 Min Read
TMK NIDHI ARREST COLLAGE

ತುಮಕೂರು: ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದ ವಂಚಕರ ತಂಡವೊಂದನ್ನು ತುಮಕೂರು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಇನ್ಸ್ ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ರಮೇಶ್ ಮತ್ತು ಹರೀಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ತುಮಕೂರು ಹೊರವಲಯದ ಯಲ್ಲಾಪುರದ ನಿವಾಸಿಗಳಾದ ಈ ವಂಚಕರ ತಂಡ ಕಳೆದ ಒಂದು ತಿಂಗಳಿನಿಂದ ನಗರದ ಹಲವರಿಗೆ ಫೋನ್ ಮಾಡಿ ನಿಧಿ ಸಿಕ್ಕಿದೆ, ಬೇಕಾದರೆ 2 ಲಕ್ಷ ರೂ. ತಗೊಂಡು ಬನ್ನಿ ಎಂದು ಹೇಳಿ ವಂಚಿಸುತ್ತಿದ್ದರು.

ಸಾರ್ವಜನಿಕರ ದೂರಿನ ಮೇರೆಗೆ ಗ್ರಾಹಕರ ಸೋಗಿನಲ್ಲಿ ಹೋದ ಡಿಸಿಬಿ ಪೊಲೀಸರು ಯಲ್ಲಾಪುರದ ನಿರ್ಜನ ಪ್ರದೇಶದಲ್ಲಿ ನಿಧಿ ಮಾರಲು ಕಾಯುತಿದ್ದ ತಂಡದ ಮೇಲೆ ದಾಳಿ ನಡೆಸಿದೆ. ಅಲ್ಲದೆ ಈ ವಂಚಕರು ಚಿನ್ನದ ನಾಣ್ಯದ ಬದಲು ಪಾತ್ರೆಯ ಇದ್ದಿಲು ತುಂಬಿಕೊಂಡು ಬಂದಿದ್ದು ಪತ್ತೆಯಾಗಿದೆ. ಇದ್ದಿಲು ತುಂಬಿದ ಪಾತ್ರೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

TMK NIDHI ARREST 2

TMK NIDHI ARREST 3

TMK NIDHI ARREST 4

TMK NIDHI ARREST 5

TMK NIDHI ARREST 6

TMK NIDHI ARREST 7

TMK NIDHI ARREST 1

TMK NIDHI ARREST 8

Share This Article
Leave a Comment

Leave a Reply

Your email address will not be published. Required fields are marked *