ವಿದ್ಯುತ್ ತಂತಿ ಸ್ಪರ್ಶಿಸಿ ಪೂಜಾರಿ ಸಾವು

Public TV
1 Min Read
ANE DEATH COLLAGE

ಬೆಂಗಳೂರು: ಅಕ್ರಮವಾಗಿ ತೋಟಕ್ಕೆ ಸಂಪರ್ಕ ಪಡೆದುಕೊಂಡಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪೂಜಾರಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

ಹೊಸಕೋಟೆ ತಾಲೂಕಿನ ಸಶಿಮಾಕನಹಳ್ಳಿಯಲ್ಲಿ ಘಟನೆ ನಡೆದಿದ್ದು, ಪೂಜಾರಿ ನಾರಾಯಣಸ್ವಾಮಿ(50) ಮೃತ ವ್ಯಕ್ತಿಯಾಗಿದ್ದಾರೆ. ಅಕ್ರಮವಾಗಿ ರಸ್ತೆ ಮಾರ್ಗದಲ್ಲಿ ತೋಟಕ್ಕೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿತ್ತು. ಇದನ್ನು ಗಮನಿಸದ ಪೂಜಾರಿ ನಾರಾಯಣಸ್ವಾಮಿ ಇಂದು ಬೆಳಗ್ಗೆ ಸೈಕಲ್ ನಲ್ಲಿ ನೀರು ಹೊತ್ತು ಸಾಗುವಾಗ ಅಯತಪ್ಪಿ ನೆಲದ ಮೇಲೆ ಬಿದ್ದಿದ್ದಾರೆ. ಈ ವೇಳೆ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ANE DEATH 3 1

ANE DEATH 2 1

ANE DEATH 4

Share This Article
Leave a Comment

Leave a Reply

Your email address will not be published. Required fields are marked *