ಬಾಗಿಲು ತಟ್ಟದೇ ಅಧ್ಯಕ್ಷನ ಮನೆಯೊಳಗೆ ಹೋಗಿದ್ದಕ್ಕೆ ಚಪ್ಪಲಿಯಿಂದ ಹೊಡೆದು, ಎಂಜಲು ನೆಕ್ಕುವಂತೆ ಶಿಕ್ಷೆ

Public TV
1 Min Read
NALANDA MAN SPIT 2

ಪಾಟ್ನಾ: ಬಾಗಿಲು ತಟ್ಟದೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮನೆಯೊಳಗೆ ಹೋಗಿದ್ದಕ್ಕೆ ವೃದ್ಧ ವ್ಯಕ್ತಿಯೊಬ್ಬರಿಗೆ ನೆಲಕ್ಕೆ ಉಗುಳಿ ತನ್ನ ಎಂಜಲನ್ನು ತಾನೇ ನೆಕ್ಕುವಂತೆ ಅಮಾನವೀಯವಾಗಿ ಶಿಕ್ಷೆ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆಯಾದ ನಳಂದದಲ್ಲಿರುವ ಅಜೈಪುರ್ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವಯಸ್ಸಾದ ವ್ಯಕ್ತಿಯೊಬ್ಬರು ಸರ್ಕಾರದ ಯೋಜನೆಯೊಂದರ ಸೌಲಭ್ಯ ಪಡೆಯಲು ಗ್ರಾಮದ ಅಧ್ಯಕ್ಷರನ್ನು ಭೇಟಿಯಾಗಲು ಹೋಗಿದ್ದರು ಎಂದು ವರದಿಯಾಗಿದೆ.

NALANDA MAN SPIT

ವಯಸ್ಸಾದ ವ್ಯಕಿಯನ್ನು ಇಬ್ಬರು ಮಹಿಳೆಯರು ಚಪ್ಪಲಿಯಿಂದ ಹೊಡೆಯೋದನ್ನ ಕೂಡ ವಿಡಿಯೋದಲ್ಲಿ ಕಾಣಬಹುದು.

ನಳಂದದಲ್ಲಿ ನಡೆದ ಈ ಘಟನೆಯನ್ನು ಬಿಹಾರ ಸಂಪುಟ ಸಚಿವ ನಂದಕಿಶೋರ್ ಯಾದವ್ ಖಂಡಿಸಿದ್ದು, ಈ ಕೃತ್ಯವೆಸಗಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಈ ಘಟನೆಯನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆಗಳನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಲಾಗುತ್ತದೆ. ರಾಜ್ಯದ ಜನರು ಬಿಜೆಪಿ ಮತ್ತು ಪಕ್ಷದ ಸದಸ್ಯರನ್ನು ನಂಬಬೇಕು. ಈ ರೀತಿಯ ಘಟನೆ ಮತ್ತೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

NALANDA MAN SPIT 1

Share This Article
Leave a Comment

Leave a Reply

Your email address will not be published. Required fields are marked *