ಮೆಟ್ರೋ ನಿಲ್ದಾಣದಲ್ಲೂ ನೀರೋ ನೀರು- ಕೆರೆ ಒಡೆದು ಅಂದಾನಪ್ಪ ಲೇಔಟ್ ಜಲಾವೃತ

Public TV
1 Min Read
rain 1

– ಪೊಲೀಸರಿಗೂ ವರುಣನ ಕಾಟ 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮೆಟ್ರೋ ನಿಲ್ದಾಣಗಳಲ್ಲೂ ನೀರೋ ನೀರು. ಬಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿದ್ದು, ಪ್ಯಾಸೇಜ್‍ನಲ್ಲೆಲ್ಲಾ ನೀರು ನಿಂತಿದೆ. ಜನರು ಮೆಟ್ರೋ ನಿಲ್ದಣಕ್ಕೆ ಹೆಜ್ಜೆ ಇಡೋಕೆ ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿದೆ.

vlcsnap 2017 09 27 09h25m15s108

ಇನ್ನು ಮಳೆ ಪೊಲೀಸರನ್ನು ಕೂಡ ಬಿಡಲಿಲ್ಲ. ರಾತ್ರಿ ಪಾಳಿ ಗಸ್ತು ತಿರುಗುವ ಪೊಲೀಸರಿಗೆ ವರುಣರಾಯನ ಕಾಟ ಎದುರಾಗಿತ್ತು. ಮಾಗಡಿ ರಸ್ತೆಯ ಟೋಲ್‍ಗೇಟ್ ಬಳಿ ನಡು ರಸ್ತೆಯಲ್ಲಿ ಪೊಲೀಸ್ ಕಾರೊಂದು ಕೆಟ್ಟು ನಿಂತಿತ್ತು. ಅರ್ಧಗಂಟೆಗೂ ಹೆಚ್ಚು ಕಾಲ ಕೆಟ್ಟು ನಿಂತ ಕಾರನ್ನು ತಳ್ಳಲು ಮಳೆಯಲ್ಲೂ ಪೊಲೀಸರು ನಾನಾ ಪಾಡು ಪಟ್ಟರು. ಪೊಲೀಸ್ ವಾಹನ ಕೆಟ್ಟು ನಿಂತ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

vlcsnap 2017 09 27 09h26m03s76

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಗೊರಗುಂಟೆಪಾಳ್ಯ ಬಳಿಯಿರುವ ಆರ್‍ಎನ್‍ಎಸ್ ಮೋಟರ್ಸ್ ಸಂಪೂರ್ಣ ಜಲಾವೃತವಾಗಿದೆ. ಆರ್‍ಎನ್‍ಎಸ್ ಬಳಿಯಿರುವ ಮನೆಗಳಿಗೂ ನೀರುನುಗ್ಗಿದೆ. ಪರಿಣಾಮ ನಾಲ್ಕೈದು ಮಕ್ಕಳು ಮನೆಯೊಳಗೆ ಸಿಲುಕಿಕೊಂಡು ಹೊರಬರಲಾಗದೆ ಪರದಾಡುತ್ತಿದ್ದರು. ಅಲ್ಲಿನ ಸ್ಥಳೀಯರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮತ್ತೊಂದೆಡೆ ಸಾವಿನ ಮನೆಗೂ ಮಳೆರಾಯ ಅಡ್ಡಿಯಾಗಿದ್ದಾನೆ. ರಸ್ತೆಯಲ್ಲಾ ಜಲಾವೃತವಾಗಿರೋದ್ರಿಂದ ರಾಮಯ್ಯ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯಕ್ಕೆ ಶವ ತರಲು ಸಂಬಂಧಿಕರು ಹೆಣಗಾಡುತ್ತಿದ್ದಾರೆ.

vlcsnap 2017 09 27 09h27m35s231

ದೊಡ್ಡಬಿದರಕಲ್ಲಿನ ಕೆರೆ ಒಡೆದಿದ್ದು ಅಂದಾನಪ್ಪ ಲೇಔಟ್ ನದಿಯಂತಾಗಿಬಿಟ್ಟಿದೆ. ನದಿಯೋಪಾದಿಯಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದ್ದು, ಸ್ಥಳೀಯರು ಪರದಾಡ್ತಿದ್ದಾರೆ.

https://twitter.com/WhitefieldTrf/status/912876241329336321

vlcsnap 2017 09 27 09h28m54s3

vlcsnap 2017 09 27 09h29m39s186

vlcsnap 2017 09 27 09h29m27s70

vlcsnap 2017 09 27 09h29m20s12

vlcsnap 2017 09 27 09h29m09s130

vlcsnap 2017 09 27 09h29m01s70

vlcsnap 2017 09 27 09h27m43s63

vlcsnap 2017 09 27 09h27m24s114

vlcsnap 2017 09 27 09h27m17s52

vlcsnap 2017 09 27 09h26m46s10

vlcsnap 2017 09 27 09h26m38s173

e4cc66a5 d4a2 4570 b2a1 8adb896a8dc2

49f42b52 2ce0 4a6c 8ffd eb80b4a5ac45

Share This Article
Leave a Comment

Leave a Reply

Your email address will not be published. Required fields are marked *