ಮನ್ನಾರ್‍ ಗುಡಿ ಶಶಿಕಲಾ ರಾಜಕೀಯ ಜೀವನ ಜೈಲಿನಲ್ಲೇ ಅಂತ್ಯ

Public TV
1 Min Read
Sasikala 3

ಚೆನ್ನೈ: ಮನ್ನಾರ್‍ ಗುಡಿ ಶಶಿಕಲಾ ರಾಜಕೀಯ ಜೀವನ ಜೈಲಿನಲ್ಲೇ ಅಂತ್ಯವಾಗಿದೆ. ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಹಾಗೂ ಉಪಕಾರ್ಯದರ್ಶಿ ಟಿಟಿವಿ ದಿನಕರನ್‍ರನ್ನು ಉಚ್ಛಾಟನೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮ್ಮ ಬಣಗಳ ವಿಲೀನ ಒಪ್ಪಂದದಂತೆ ನಿರ್ಣಯ ಅಂಗೀಕರಿಸಿದ್ದಾರೆ. ಇದರ ಜೊತೆ ಜಯಲಲಿತಾ ಅವರನ್ನ ಎಐಎಡಿಎಂಕೆಯ ಶಾಶ್ವತ ಮುಖ್ಯ ಕಾರ್ಯದರ್ಶಿಯಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಜಯಲಲಿತಾ ಸಾವಿನ ಬಳಿಕ ಸೃಷ್ಟಿಯಾಗಿದ್ದ ರಾಜಕೀಯ ಹೈಡ್ರಾಮಕ್ಕೆ ಸದ್ಯ ಫುಲ್‍ಸ್ಟಾಪ್ ಬಿದ್ದಿದೆ.

ಈ ಹಿಂದೆ ಪನ್ನಿರ್ ಸೆಲ್ವಂ ಎಐಡಿಎಂಕೆ ಸೇರ್ಪಡೆಯಾಗುವ ಮೊದಲು ಶಶಿಕಲಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂಬ ಬೇಡಿಕೆಯನ್ನು ಇರಿಸಿದ್ದರು.

ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕಣದಲ್ಲಿ ದೋಷಿಯಾಗಿರುವ ಶಶಿಕಲಾ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *