ಬೆಂಗ್ಳೂರಲ್ಲಿ ಮಧ್ಯರಾತ್ರಿ ಧಾರಾಕಾರ ಮಳೆ- ಕೆಆರ್ ಸರ್ಕಲ್‍ನಲ್ಲಿ ಕಾರಿನಲ್ಲಿದ್ದ ವ್ಯಕ್ತಿಯ ರಕ್ಷಣೆ

Public TV
0 Min Read
RAIN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಗುರುವಾರ ರಾತ್ರಿ ಸುಮಾರು 11 ಗಂಟೆಯಿಂದ ಸತತ ಎರಡೂವರೆ, ಮೂರು ಗಂಟೆಗಳ ಕಾಲ ಎಡೆಬಿಡದೇ ಮಳೆ ಸುರಿದಿದೆ.

ಪರಿಣಾಮ ಎಂದಿನಂತೆ ರಸ್ತೆಗಳೆಲ್ಲಾ ಕೆರೆಗಳಾದ್ವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ನಗರದ ಶಾಂತಿನಗರ, ಡಬ್ಬಲ್ ರೋಡ್, ಮೆಜೆಸ್ಟಿಕ್, ರಾಜಾಜಿನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ.

ಕೆಆರ್ ಸರ್ಕಲ್‍ನ ಅಂಡರ್ ಪಾಸ್ ಬಳಿ, ನೀರು ತುಂಬಿ ಕಾರೊಂದು ಮಧ್ಯದಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು, ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿ ಹೊರಗೆ ಕರೆ ತಂದ್ರು.

RAIN 10

RAIN 9

RAIN 8

RAIN 7

RAIN 6

RAIN 5

RAIN 4

RAIN 3

RAIN 2

RAIN 1

Share This Article
Leave a Comment

Leave a Reply

Your email address will not be published. Required fields are marked *