Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಈಗ ಎಲೆಕ್ಷನ್ ನಡೆದ್ರೆ ಗೆಲ್ಲೋದ್ಯಾರು? ಸಮೀಕ್ಷೆ ಏನು ಹೇಳುತ್ತೆ?

Public TV
Last updated: August 18, 2017 12:39 pm
Public TV
Share
3 Min Read
nda upa
SHARE

ನವದೆಹಲಿ: ಅಧಿಕಾರಕ್ಕೇರಿದ ಮೂರು ವರ್ಷಗಳ ಬಳಿಕವೂ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹಾಗೇ ಇದೆ. ಇತ್ತೀಚೆಗೆ ಇಂಡಿಯಾ ಟುಡೆ ಕಾರ್ವಿ ಇನ್‍ಸೈಟ್ಸ್ ಸಹಯೋಗದಲ್ಲಿ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆ(ಎಮ್‍ಓಟಿಎನ್) ಇದನ್ನ ಸಾಬೀತು ಮಾಡಿದೆ.

ದೇಶದಾದ್ಯಂತ 19 ರಾಜ್ಯಗಳ ಸುಮಾರು 12,178 ಜನರನ್ನ (68% ಗ್ರಾಮೀಣ ಮತದಾರರು ಹಾಗೂ 32% ನಗರ ಮತದಾರರು) ಈ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಮೋದಿಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ. ಆದರೂ 53% ಮತದಾರರು ದೇಶದ ಉದ್ಯೋಗ ಸಮಸ್ಯೆಯೇ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಜನ ಭಾವಿಸಿದ್ದಾರೆ. 6 ತಿಂಗಳ ಹಿಂದೆ ನಡೆಸಲಾದ ಎಮ್‍ಓಟಿಎನ್ ಸಮೀಕ್ಷೆಗೆ ಹೋಲಿಸಿದ್ರೆ ಈ ಬಾರಿ ಉದ್ಯೋಗದ ಬಗ್ಗೆ ಮತದಾರರ ಸಂದೇಹ 17% ಹೆಚ್ಚಿದೆ. 60% ಮತದಾರರು ನೋಟ್‍ನ್ಯಾನ್‍ನಿಂದ ಲಾಭಕ್ಕಿಂತ ಹಾನಿಯಾಗಿದ್ದೇ ಹೆಚ್ಚು ಎಂದು ಅಭಿಪ್ರಾಯಿಸಿದ್ದಾರೆ.

ಆದ್ರೆ ಈ ಎಲ್ಲದರ ಮಧ್ಯೆ ಮೋದಿ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಗೃಹ ಸಚಿವ ರಾಜ್‍ನಾಥ್ ಸಿಂಗ್ ಮೋದಿ ಸಂಪುಟದ ಅತ್ಯುತ್ತಮ ಸಚಿವರು ಎಂದು ಜನ ವೋಟ್ ಮಾಡಿದ್ದಾರೆ.

poll 5

ಈಗ ಚುನಾವಣೆ ನಡೆದರೆ ಗೆಲ್ಲೋದ್ಯಾರು?                                                                                                                                                  ಸಮೀಕ್ಷೆ ಪ್ರಕಾರ ಇಂದು ಲೋಕಸಭೆ ಚುನಾವಣೆ ನಡೆದ್ರೆ ಎನ್‍ಡಿಎ 42% ಮತ ಹಾಗೂ 349 ಸೀಟ್‍ಗಳನ್ನ ಪಡೆಯಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 28% ಮತ ಹಾಗೂ 75 ಸೀಟ್‍ಗಳನ್ನ ಪಡೆಯಲಿದೆ ಅಂತ ಸಮೀಕ್ಷೆ ಹೇಳಿದೆ. ಇನ್ನು ಇತರೆ ಪಕ್ಷಗಳು 30% ಮತ ಹಾಗೂ 119 ಸೀಟ್‍ಗಳನ್ನ ಪಡೆಯಲಿವೆ ಎಂದು ಎಮ್‍ಓಟಿಎನ್ ಸಮೀಕ್ಷಾ ವರದಿ ಹೇಳಿದೆ.

poll

ಪರ್ಯಾಯ ಪ್ರಧಾನ ಮಂತ್ರಿ ಅಭ್ಯರ್ಥಿ:
ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಹೆಸರು ಅತ್ಯಂತ ಜನಪ್ರಿಯವಾಗಿ ಉಳಿದಿದೆ. ಆದ್ರೆ ಜನವರಿಯಲ್ಲಿ ನಡೆದ ಸಮೀಕ್ಷೆಗೆ ಹೋಲಿಸಿದ್ರೆ ಅಂದು 28% ಮತಗಳಿದ್ದು, ಈಗ 21% ಗೆ ಇಳಿದಿದೆ. ರಾಹುಲ್ ಗಾಂಧಿಯ ನಂತರ ನಿತೀಶ್ ಕುಮಾರ್‍ಗೆ 13%, ಸೋನಿಯಾ ಗಾಂಧಿಗೆ 12% ಹಾಗೂ ಅರವಿಂದ್ ಕೇಜ್ರಿವಾಲ್‍ಗೆ 7% ಮತ ಸಿಕ್ಕಿದೆ.

ಅತ್ಯಂತ ಜನಪ್ರಿಯ ಸಿಎಂ ಯಾರು?
ಸಮೀಕ್ಷೆಯ ಪ್ರಕಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯುತ್ತಮ ಸಿಎಂ. ಎರಡನೇ ಸ್ಥಾನದಲ್ಲಿ ಬಿಹಾರದ ನಿತೀಶ್ ಕುಮಾರ್ ಹಾಗೂ ಮೂರನೇ ಸ್ಥಾನದಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಇದ್ದಾರೆ.

poll 2

ನಿತೀಶ್ ಕುಮಾರ್ ಯುಪಿಎ ಯಿಂದ ಎನ್‍ಡಿಎ ಗೆ ಬರುವ ಮುಂಚೆಯೇ ಈ ಸಮೀಕ್ಷೆ ನಡೆಸಿದ್ದರಿಂದ ಅದನ್ನ ರೀಕೋಡ್ ಮಾಡಿ ಅಪ್‍ಡೇಟ್ ಮಾಡಲಾಗಿದೆ. ನಂತರವೂ ಎನ್‍ಡಿಎಗೆ ಹೆಚ್ಚಿನ ಸೀಟ್ ಸಿಕ್ಕಿದೆ. ಎನ್‍ಡಿಎ, ಯುಪಿಎ ಮತ್ತು ಇತರೆ ಎಂದು ಮೂರು ಭಾಗಗಳಾಗಿದ್ದ ಫಲಿತಾಂಶ ಎನ್‍ಡಿಎ ಮತ್ತು ಯುಪಿಎ ನಡುವೆ ವಿಭಜನೆಯಾಗಿದೆ. ಈ ಮೂಲಕ ಎನ್‍ಡಿಎಗೆ 51% ಮತ ಹಾಗೂ 421 ಸೀಟ್‍ಗಳು ಅಭಿಸಿದ್ದು, ಯುಪಿಎಗೆ 43% ಮತ ಹಾಗು 120 ಸೀಟ್‍ಗಳು ಸಿಕ್ಕಿವೆ.

ಭಾರತೀಯರಾಗಿ ನೀವು ಹೆಮ್ಮೆ ಪಡಲು ಇರುವಂತಹ ಕಾರಣಗಳೇನು ಎಂಬ ಪ್ರಶ್ನೆಗೆ ಜನ, ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಧರ್ಮ ಹಾಗೂ ನಂಬಿಕೆಯನ್ನ ಪಾಲಿಸಲು ಇರುವ ಸ್ವಾತಂತ್ರ್ಯಗಳೇ ಮೂರು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

poll 1

ಇನ್ನು ದೇಶದ ಬಗ್ಗೆ ಕೋಪಗೊಳ್ಳಲು ಕಾರಣಗಳನ್ನು ಕೇಳಿದಾಗ ರಾಜಕೀಯದಲ್ಲಿನ ಭ್ರಷ್ಟಾಚಾರ, ಧರ್ಮ/ಜಾತಿ ಆಧಾರದ ಮೇಲೆ ಮತ ಚಲಾಯಿಸುವುದು ಹಾಗೂ ಕೋಮುವಾದ ಎಂದು ಉತ್ತರಿಸಿದ್ದಾರೆ. 49% ಜನ ದೇಶದಲ್ಲಿ ರಾಜಕಾರಣಿಗಳೇ ಅತ್ಯಂತ ಭ್ರಷ್ಟರು ಎಂದು ವೋಟ್ ಮಾಡಿದ್ದರೆ, 21% ಜನ ಪೊಲೀಸರು ಭ್ರಷ್ಟರೆಂದು ಅಭಿಪ್ರಯಾಪಟ್ಟಿದ್ದಾರೆ.

poll 3

ಇನ್ನು ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ 35% ಜನ ಗಡಿಯಾಚೆಗಿನ ಭಯೋತ್ಪಾದನೆ ದೇಶಕ್ಕೆ ಅತ್ಯಂತ ದೊಡ್ಡ ಆತಂಕ ಎಂದಿದ್ದಾರೆ. ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 23% ಜನ ಭಾರತ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದರೆ, 7% ಜನ ನಾವು ಯುದ್ಧ ಮಾಡಬೇಕು ಎಂದು ಹೇಳಿದ್ದಾರೆ.

4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ? https://t.co/7hdeZo6yhq #Donation #BJP #Congress #ncp pic.twitter.com/9hhrWUyQVx

— PublicTV (@publictvnews) August 17, 2017

TAGGED:modindaPublic TVsurveyupaಎನ್‍ಡಿಎಪಬ್ಲಿಕ್ ಟಿವಿಮೋದಿಯುಪಿಎಸಮೀಕ್ಷೆ
Share This Article
Facebook Whatsapp Whatsapp Telegram

Cinema Updates

pawan kalyan sharmista panoli
ಪುಣೆ ಕಾನೂನು ವಿದ್ಯಾರ್ಥಿನಿ ಪರ ನಿಂತ ಪವನ್‌ ಕಲ್ಯಾಣ್‌ – ದೀದಿ ಹೇಳಿಕೆಗೆ ಖಂಡನೆ
4 hours ago
Mukhyamantri Chandru
ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್‌ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು
4 hours ago
Kamal Haasan Sudha rani
ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ
5 hours ago
Rachita Ram
ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್
7 hours ago

You Might Also Like

Heavy Rain in Northeast states
Latest

ಕೇರಳದಿಂದ ಈಶಾನ್ಯ ರಾಜ್ಯಗಳವರೆಗೂ ನಿಲ್ಲದ ವರುಣನ ಅಬ್ಬರ – ಮಳೆಯಾರ್ಭಟಕ್ಕೆ 30ಕ್ಕೂ ಹೆಚ್ಚು ಬಲಿ

Public TV
By Public TV
47 seconds ago
Dinesh Gundu Rao 2
Dakshina Kannada

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಬೇಡ ಎಂದಿಲ್ಲ: ದಿನೇಶ್ ಗುಂಡೂರಾವ್

Public TV
By Public TV
14 minutes ago
MI vs PBKS rain
Cricket

ಪಂಜಾಬ್‌ vs ಮುಂಬೈ ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆ ಅಡ್ಡಿ – ಮ್ಯಾಚ್‌ ರದ್ದಾದ್ರೆ ಯಾರಿಗೆ ನಷ್ಟ?

Public TV
By Public TV
20 minutes ago
V Somanna
Bidar

ಡಿಕೆಶಿ ಪಾದಕ್ಕೆ ಕೋಟಿ ನಮಸ್ಕಾರ ಮಾಡ್ತೀನಿ, ಹೇಮಾವತಿ ಕೈ ಬಿಡಿ: ವಿ.ಸೋಮಣ್ಣ

Public TV
By Public TV
42 minutes ago
Ukrainian Drones Strike Airbase In Russia At Least 40 Aircraft Hit
Latest

ರಷ್ಯಾದ ವಾಯುನೆಲೆಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ – 40 ವಿಮಾನಗಳು ಧ್ವಂಸ

Public TV
By Public TV
43 minutes ago
health department
Bengaluru City

ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ, ಚಿಕಿತ್ಸೆ ಕೊರತೆ ಇದ್ರೆ ದೂರು ಕೊಡಿ – ಆರೋಗ್ಯ ಇಲಾಖೆಯಿಂದ ವಾಟ್ಸಪ್‌ ನಂಬರ್‌ ರಿಲೀಸ್‌

Public TV
By Public TV
51 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?