ಚಂದ್ರಗ್ರಹಣ: ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ

Public TV
1 Min Read
UDP KRISHNA

ಉಡುಪಿ: ಜಿಲ್ಲೆಯಲ್ಲೂ ಸೋಮವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ದರ್ಶನವಾಯಿತು. ಆಗಸದಲ್ಲಿ ನಡೆದ ಈ ಕೌತುಕವನ್ನು ಕೃಷ್ಣನೂರಿನ ಮಂದಿ ಕಣ್ತುಂಬಿಕೊಂಡರು. ಕೊಲ್ಲೂರಲ್ಲಿ ರಾತ್ರಿ 1 ಗಂಟೆಯವರೆಗೂ ಮೂಕಾಂಬಿಕೆಗೆ ವಿಶೇಷ ಪೂಜೆ ನಡೆಯಿತು.

ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತುಳಸೀಧಾಮ ಭೂಷಿತ ಶ್ರೀಕೃಷ್ಣನಾಗಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದನು. ತುಳಸೀದಳ ಮತ್ತು ತುಳಸಿ ಹಾರಗಳಿಂದ ಶ್ರೀಕೃಷ್ಣನಿಗೆ ಈ ಅಲಂಕಾರ ಮಾಡಲಾಗಿತ್ತು. ಕಡೆಗೋಲು ಶ್ರೀಕೃಷ್ಣನಿಗೆ ಪ್ರತಿದಿನ ಒಂದೊಂದು ಅಲಂಕಾರ ಮಾಡಲಾಗಿತ್ತು. ಚಂದ್ರಗ್ರಹಣ ಹಿನ್ನೆಲೆಯಲ್ಲಿ ತುಳಸಿ ದಳಗಳಿಂದ ಪರ್ಯಾಯ ಸ್ವಾಮೀಜಿಯವರು ಅಲಂಕಾರ ಮಾಡಿದ್ದರು.

UDP 3

ಗ್ರಹಣದ ದೋಷ ದೇವರಿಗೆ- ದೇವರನ್ನು ಕಣ್ತುಂಬಿಕೊಂಡು ಆರಾಧಿಸುವ ಭಕ್ತರಿಗೆ ತಟ್ಟದಿರಲಿ ಅಂತ ತುಳಸಿದಳಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಹಣ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಸೋಮವಾರ ರಾತ್ರಿ ಊಟವನ್ನು ಭಕ್ತರಿಗೆ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು.

ವರ್ಷದ ಮೊದಲ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಸುಮಾರು 2 ಗಂಟೆಗಳವರೆಗೆ ಚಂದ್ರಗ್ರಹಣನಿಗೆ ಕೇತುಗ್ರಸ್ತ ಚಂದ್ರಗ್ರಹಣವಾಗಿತ್ತು. ರಾತ್ರಿ 10.52ಕ್ಕೆ ಆರಂಭವಾದ ಗ್ರಹಣ ರಾತ್ರಿ 12.48ಕ್ಕೆ ಕೊನೆಯಾಯಿತು. ನಿನ್ನೆ ಹುಣ್ಣಿಮೆಯಾಗಿತ್ತು. ಹೀಗಾಗಿ ಸೂರ್ಯ-ಚಂದ್ರನ ನಡುವೆ ಭೂಮಿ ಬಂದ ಕಾರಣ ಕೆಲ ಹೊತ್ತು ಚಂದಿರ ತನ್ನ ಪ್ರಭೆಯನ್ನೇ ಕಳೆದುಕೊಂಡು ಕತ್ತಲಲ್ಲಿ ಮರೆಯಾಗಿದ್ದನು.

UDP 2

ಭಾರತೀಯ ಸಂಪ್ರದಾಯದಲ್ಲಿ ಚಂದ್ರಗ್ರಹಣಕ್ಕೆ ಸಾಕಷ್ಟು ಮಹತ್ವವವಿದೆ. ಧಾರ್ಮಿಕ ದೃಷ್ಟಿಕೋನದಲ್ಲಿ ನೋಡೋದಾದ್ರೆ, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ನಿನ್ನೆ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಿದೆ. ಈ ಹೊತ್ತಲ್ಲಿ ಉಪವಾಸ ಆಚರಣೆ ಮಾಡಲಾಯಿತು. ಹಲವಾರು ಕಡೆಗಳಲ್ಲಿ ದೇವರ ದರ್ಶನ ಇರಲಿಲ್ಲ. ಇತ್ತ ವೈಜ್ಞಾನಿಕ ಲೋಕಕ್ಕೂ ಇದು ಕೌತುಕ ಕ್ಷಣವಾಗಿತ್ತು.

UDP 1

ಬಾನಿನಲ್ಲಿ ನಡೆದ ಈ ಕೌತುಕ ಉಡುಪಿಯ ಫೋಟೋಗ್ರಾಫರ್ ಪ್ರಸನ್ನ ಕೊಡವೂರು ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ:

UDP 12

UDP 11

UDP 10

UDP 9

UDP 8

UDP 7

UDP 6

UDP 5

UDP 4

 

Share This Article
Leave a Comment

Leave a Reply

Your email address will not be published. Required fields are marked *