ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳದಂತೆ ನಿರ್ಬಂಧ!

Public TV
1 Min Read
DKS IT

ಬೆಂಗಳೂರು: ಕಳೆದ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ನಡೆಯುತ್ತಿದ್ದ ಐಟಿ ದಾಳಿ ಇದೀಗ ಅಂತ್ಯವಾಗಿದ್ದು, ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳದಂತೆ ಐಟಿ ಸೂಚನೆ ನೀಡಿದೆ.

ಸಚಿವ ಡಿಕೆಶಿ ಮೇಲೆ ನಿಗಾ ಇಡುವಂತೆ ಹಾಗೂ ಎಲ್ಲಾ ವಿಮಾನ ನಿಲ್ದಾಣಗಳಿಗೂ ಆದಾಯ ತೆರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ.

ದೆಹಲಿಯಲ್ಲೂ ಕೂಡ ಐಟಿ ದಾಳಿ ಅಂತ್ಯವಾಗಿದ್ದು, ಆಂಜನೇಯ ಮನೆಯಲ್ಲಿ ಕೂಡ ಐಟಿ ಅಧಿಕಾರಿಗಳು ದಾಳಿ ಅಂತ್ಯಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯ ಮೂರು ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳ ತಪಾಸಣೆ ಮಾಡಿದ್ದಾರೆ. ನಿನ್ನೆಯೇ ಎರಡು ಮನೆಯ ಮೇಲಿನ ದಾಳಿ ಅಂತ್ಯಗೊಳಿಸಿದ್ದ ಅಧಿಕಾರಿಗಳು ಇಂದು ಆಂಜನೇಯ ಮನೆ ಮೇಲೆ ದಾಳಿಯಲ್ಲಿ ಅಂತ್ಯಗೊಳಿಸಿದ್ದಾರೆ.

ದೇವಸ್ಥಾನಕ್ಕೆ ಭೇಟಿ: ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆ, ನೊಣವಿಕೆರೆಯಕಲ್ಲಿರುವ ಕೆರೆಯ ಕಾಡು ಸಿದ್ದೇಶ್ವರ ಅವರ ವಿಜಯನಗರದಲ್ಲಿರೋ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದಾರೆ.

ಆತ್ಮದೊಂದಿಗಿನ ಸಂವಾದವನ್ನು ಹಾಳೆಯಲ್ಲಿ ಬರೆದುಕೊಡುವ ಕಾಡು ಸಿದ್ದೇಶ್ವರ ಅಜ್ಜನ ಅಣತಿಯಂತೆ ನಡೆದುಕೊಳ್ಳುವ ಡಿಕೆಶಿ, ಅಜ್ಜಯ್ಯ ಹಾಳೆಯಲ್ಲಿ ಬರೆದಿದ್ದು ಫಲಿಸುತ್ತದೆ ಎಂಬುದು ಅವರ ನಂಬಿಕೆ. ಹೀಗಾಗಿ ಅಜ್ಜಯ್ಯನ ಭಕ್ತರಾಗಿರೋ ಡಿಕೆಶಿ ಸದ್ಯ ಅವರನ್ನು ಭೇಟಿ ಮಾಡಿ ಪಾದ ಪೂಜೆ ಮಾಡಿದ್ದಾರೆ. ಈ ವೇಳೆ ನಿನಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ. ನೀನು ನೆಮ್ಮದಿಯಿಂದಿರು ಅಂತ ಅಜ್ಜಯ್ಯ ಆಶೀರ್ವದಿಸಿದ್ದಾರೆ. ಈ ಹಿಂದೆಯೂ ಅಜ್ಜಯ್ಯನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈ ವೇಳೆ ಸಚಿವರಿಗೆ ನರೇಂದ್ರಬಾಬು ಸಾಥ್ ನೀಡಿದ್ದಾರೆ.

ಬಳಿಕ ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿರುವ ಡಿಕೆಶಿ, ಇದೀಗ ಗುಜರಾತ್ ಶಾಕೆ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಕುಟುಂಬಸ್ಥರು ಕನಕಪುರ ತಾಲೂಕಿನಲ್ಲಿರುವ ಶಕ್ತಿದೇವತೆ ಕಬ್ಬಾಳಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ.

AJJAYYA 1

AJJAYYA 2

RAJABHAVANA

AJJAYYA 3

AJJAYYA 4

AJJAYYA 5

AJJAYYA 6

AJJAYYA 7

Share This Article
Leave a Comment

Leave a Reply

Your email address will not be published. Required fields are marked *