Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಸವಣ್ಣನವರನ್ನ ವೀರಶೈವರೇ ಕೊಂದ್ರಂತೆ – ತಲಕಾಡು ಗೌಡ್ರ ಹೇಳಿಕೆಗೆ ಚಿದಾನಂದಮೂರ್ತಿ ಗರಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಸವಣ್ಣನವರನ್ನ ವೀರಶೈವರೇ ಕೊಂದ್ರಂತೆ – ತಲಕಾಡು ಗೌಡ್ರ ಹೇಳಿಕೆಗೆ ಚಿದಾನಂದಮೂರ್ತಿ ಗರಂ

Bengaluru City

ಬಸವಣ್ಣನವರನ್ನ ವೀರಶೈವರೇ ಕೊಂದ್ರಂತೆ – ತಲಕಾಡು ಗೌಡ್ರ ಹೇಳಿಕೆಗೆ ಚಿದಾನಂದಮೂರ್ತಿ ಗರಂ

Public TV
Last updated: July 31, 2017 8:59 am
Public TV
Share
2 Min Read
basavanna
SHARE

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ನಡುವೆಯೇ ಬಸವಣ್ಣನವರ ಮರಣ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇತಿಹಾಸಕಾರರು ಮತ್ತು ಧರ್ಮಗುರುಗಳ ನಡುವೆ ಈ ವಿಚಾರ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಇತಿಹಾಸಕಾರರು ಬಸವಣ್ಣನವರದ್ದು ಕೊಲೆಯೆನ್ನುತ್ತಿದ್ರೆ, ಧರ್ಮಗುರುಗಳು ಮತ್ತು ಚಿಂತಕರು ಲಿಂಗೈಕ್ಯರಾದ್ರು ಅಂತಾ ವಾದಿಸ್ತಿದ್ದಾರೆ. ಇನ್ನೊಂದೆಡೆ ಆತ್ಮಹತ್ಯೆ ಎಂಬ ಮಾತು ಕೇಳಿಬರ್ತಿದೆ. ಆದ್ರೆ ದೃಢೀಕರಿಸುವ ಪುರಾವೆ ಮಾತ್ರ ಯಾರ ಬಳಿಯೂ ಇಲ್ಲ.

basavanna 5

ಬಸವಣ್ಣ ಆತ್ಮಹತ್ಯೆ ಮಾಡಿಕೊಂಡ್ರು ಎಂದು ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು.

basavanna 4

ಆದ್ರೆ ಇತಿಹಾಸಕಾರರಾದ ತಲಕಾಡು ಚಿಕ್ಕರಂಗೇಗೌಡ ಬಸವಣ್ಣನವರದ್ದು ಕೊಲೆ ಎಂದಿದ್ದಾರೆ. ಮೂಲಭೂತವಾದಿ ವೀರಶೈವರೇ ಬಸವಣ್ಣನ ಏಳ್ಗೆ ಸಹಿಸದೆ ಕೊಲೆ ಮಾಡಿದ್ದಾರೆ. ವೀರಶೈವರು ಸಾಕಷ್ಟು ಕಟುಕರಾಗಿದ್ದರು. ಕೂಡಲಸಂಗಮದ ಬಳಿ ಅವರ ಕೊಲೆಯಾಗಿರುವ ಸಾಧ್ಯತೆಯಿದೆ. ಅದರ ಹೊರತು ಬಸವಣ್ಣನದ್ದು ಆತ್ಮಹತ್ಯೆ ಅಥವಾ ಸಹಜ ಸಾವು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಅಂತಿದ್ದಾರೆ. ಇನ್ನು ಚಿಕ್ಕರಂಗೇಗೌಡರ ಈ ಹೇಳಿಕೆ ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ಧಾರ್ಮಿಕ ನಾಯಕರ ಅಂತ್ಯ ದುರಂತ ಕಂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ತೆಳು ಮನಸ್ಸು ಅವರದ್ದಾಗಿರಲಿಲ್ಲ. ಗಟ್ಟಿಯಾದ ವ್ಯಕ್ತಿತ್ವ ಅವರದ್ದು. ಅವರ ಕ್ರಾಂತಿಕಾರಿ ಧೋರಣೆ ಸಹಿಸದೆ ಕೆಲವರು ಕೊಲೆ ಮಾಡಿದ್ದಾರೆ ಅನನೋದನ್ನ ಹೆಚ್ಚು ಒಪ್ಪಬಹುದು ಅಂತ ಚಿಕ್ಕರಂಗೇಗೌಡ ಹೇಳಿದ್ದಾರೆ.

basavanna 3

ಸಾಹಿತಿ ಮತ್ತು ಚಿಂತಕ ಚಿದಾನಂದಮೂರ್ತಿ ಚಿಕ್ಕರಂಗೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ. ಇತಿಹಾಸಕಾರರು ಅಜ್ಞಾನದಿಂದ ಈ ಹೇಳಿಕೆ ನೀಡಿದ್ದಾರೆ. ಬಸವಣ್ಣನವರದ್ದು ಹತ್ಯೆಯೂ ಅಲ್ಲ, ಆತ್ಯಹತ್ಯೆಯೂ ಅಲ್ಲ. ಅವರು ಸ್ವ-ಇಚ್ಛೆಯಿಂದ ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು ಅಂತಾ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಈ ಸಂಬಂಧ ಸ್ಪಷ್ಟ ದಾಖಲಾತಿಗಳಿರುವುದಾಗಿಯೂ ಹೇಳ್ತಿದ್ದಾರೆ.

ಕೂಡಲ ಸಂಗಮ ಅವರಿಗೆ ಪವಿತ್ರ ಕ್ಷೇತ್ರ. ತಮ್ಮ ಕ್ಷೋಧಗೊಂಡ ಮನಸ್ಸನ್ನ ಶಾಂತಗೊಳಿಸಲು ಕೆಲ ಕಾಲ ಅಲ್ಲಿ ಇದ್ದು ಲಿಂಗೈಕ್ಯರಾಗ್ತಾರೆ. ಅವರನ್ನ ಯಾರೋ ಕೊಂದಿದದ್ದಾರೆ ಅನ್ನೋದಾಗಲಿ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಸಂಪೂರ್ಣ ಅಸತ್ಯ ಎಂದು ಚಿದಾನಂದಮೂರ್ತಿ ಹೇಳಿದ್ದಾರೆ.

basavanna 2

ಇನ್ನು ಬಸವ ಪೀಠದ ಪೀಠ್ಯಾಧ್ಯಕ್ಷೆ ಮಾತೆ ಮಹಾದೇವಿ ಕೂಡ ಚಿದಾನಂದಮೂರ್ತಿ ಹೇಳಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ. ಆತ್ಮಹತ್ಯೆ ಅಥವಾ ಕೊಲೆ ಎನ್ನುವವರು ಶುದ್ಧ ತಲೆಹರಟೆಗಳು. ಮನಸ್ಸಿಗೆ ಬಂದಂತೆ ಬಸವಣ್ಣನವರ ಬಗ್ಗೆ ಹೇಳುತ್ತಿದ್ದಾರೆ. ಬಸವಣ್ಣ ಆತ್ಯಹತ್ಯೆ ಮಾಡಿಕೊಳ್ಳುವಷ್ಟು ದರ್ಬಲರಾಗಿರಲಿಲ್ಲ. ಅವರು ಕೂಡಲಸಂಗಮದಲ್ಲಿ ಯೋಗದ ಮೂಲಕ ಲಿಂಗೈಕ್ಯರಾದರು. ಈ ಕುರಿತು ನಾನು ಸಾಕಷ್ಟು ಅಧ್ಯಯನವನ್ನೂ ನಡೆಸಿದ್ದೇನೆ ಅಂದ್ರು.

basavanna 1

ಬಸವಣ್ಣನ ಸಾವು ಕುರಿತು ಸಾಕಷ್ಟು ಗೊಂದಲಗಳಿಗೆ. ಬಸವಣ್ಣನ ಭಕ್ತರ ಗೊಂದಲಕ್ಕೆ ಸರ್ಕಾರ ಪರಿಹಾರವನ್ನು ನೀಡಬೇಕು. ಇದಕ್ಕೆ ಇತಿಹಾಸಕಾರರು, ಪಂಡಿತರು ಹಾಗೂ ನ್ಯಾಯಾಧೀಶರನ್ನೊಳಗೂಂಡ ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು ಅಂತಿದೆ ವೀರಶೈವ ಮಹಾಸಭಾ.

ಬಸವಣ್ಣನವರ ಸಾವಿನ ಕುರಿತು ಸ್ಪಷ್ಟ ದಾಖಲೆಗಳಿಲ್ಲದ ಕಾರಣ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಬಸವಣ್ಣನವ್ರ ಹುಟ್ಟು, ಬೆಳವಣಿಗೆ, ಮದುವೆ, ವಚನಗಳ ಬಗ್ಗೆ ಸಾಕಷ್ಟು ದಾಖಲೆಗಳು ಲಭ್ಯವಿದ್ದರೂ ಸಾವಿನ ಬಗ್ಗೆ ಸಮರ್ಪಕ ದಾಖಲೆ ಇಲ್ಲದೆ ಇರೋದು ಈ ಗೂಂದಲಗಳಿಗೆ ಕಾರಣವಾಗಿವೆ.

TAGGED:basavannabengaluruMurderPublic TVsuicideಆತ್ಮಹತ್ಯೆಕೊಲೆಪಬ್ಲಿಕ್ ಟಿವಿಬಸವಣ್ಣಬೆಂಗಳೂರು
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

kagia
Latest

ಕೈಗಾ 5, 6ನೇ ಅಣು ಘಟಕ ಪ್ರಥಮ ಕಾಂಕ್ರೀಟಿಕರಣಕ್ಕೆ ಚಾಲನೆ – ಏನಿದರ ವಿಶೇಷ?

Public TV
By Public TV
9 minutes ago
Why did Muslim countries join hands with America in the fight against Iran
Latest

ಇರಾನ್‌ ವಿರುದ್ಧ ಹೋರಾಟದಲ್ಲಿ ಮುಸ್ಲಿಮ್‌ ದೇಶಗಳು ಅಮೆರಿಕದೊಂದಿಗೆ ಕೈ ಜೋಡಿಸಿದ್ದು ಯಾಕೆ?

Public TV
By Public TV
12 minutes ago
Nagpur Explosives Manufacturing Company blast
Crime

ನಾಗ್ಪುರದ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 17 ಮಂದಿ ಸಾವು, 18ಕ್ಕೂ ಹೆಚ್ಚು ಜನರಿಗೆ ಗಾಯ

Public TV
By Public TV
15 minutes ago
Madikeri
Districts

ಕೊಡಗಿನ ಬೆಟ್ಟತೂರಿನಲ್ಲಿ ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ

Public TV
By Public TV
27 minutes ago
iran israel war
Latest

30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್‌ ರೂಪಿಸಿದ್ದ ರಣತಂತ್ರ ಹೇಗಿತ್ತು?

Public TV
By Public TV
54 minutes ago
Pakistan
Latest

ಖಮೇನಿ ಹತ್ಯೆಗೆ ಆಕ್ರೋಶ – ಕಾಶ್ಮೀರದಲ್ಲಿ ಪ್ರತಿಭಟನೆ, ಪಾಕ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?