ಕೋಲ್ಕತ್ತಾ: ಈಡನ್ ಗಾರ್ಡನ್ಸ್ನಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಐಪಿಎಲ್ 2026 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಕೇವಲ 3.4 ಓವರ್ಗಳ ಆಟ ಮಾತ್ರ ಸಾಧ್ಯವಾಯಿತು. ನಂತರ ಮಳೆ ಪಂದ್ಯವನ್ನು ಅಡ್ಡಿಪಡಿಸಿತು. ಇದನ್ನೂ ಓದಿ: IPL 2026: ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಮಳೆ ಅಡ್ಡಿ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕೆಕೆಆರ್ 3.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿತ್ತು. ನಾಯಕ ಅಜಿಂಕ್ಯ ರಹಾನೆ ಮತ್ತು ಅಂಗ್ಕ್ರಿಶ್ ರಘುವಂಶಿ ಕ್ರೀಸ್ನಲ್ಲಿದ್ದರು. ಎರಡನೇ ಓವರ್ನಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಬೌಲಿಂಗ್ಗೆ ಎರಡು ವಿಕೆಟ್ಗಳು ಬಿದ್ದಿದ್ದವು. ವಿದೇಶಿ ತಾರೆಗಳಾದ ಫಿನ್ ಅಲೆನ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಕಳೆದುಕೊಂಡು ತಂಡವು ಕಳಪೆ ಆರಂಭವನ್ನು ಪಡೆದಿತ್ತು. ಆದರೆ ಈಗ ಮಳೆಯಿಂದ ಪಂದ್ಯ ರದ್ದಾಗಿದೆ.
ಫಲಿತಾಂಶ ಬಾರದ ಕಾರಣ ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆಯುತ್ತವೆ. ಇದು ಕೆಕೆಆರ್ಗೆ ಮೊದಲ ಪಾಯಿಂಟ್ ಆಗಿದ್ದು, ಪಿಬಿಕೆಎಸ್ ಐಪಿಎಲ್ 2026 ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತವರಲ್ಲಿ ಭಾನುವಾರ ಸಿಎಸ್ಕೆ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್ಸಿಬಿಯನ್ನು ಪಂಜಾಬ್ ಹಿಂದಿಕ್ಕಿ ಮೇಲಕ್ಕೇರಿದೆ. 5 ಪಾಯಿಂಟ್ಗಳೊಂದಿಗೆ ಶ್ರೇಯಸ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ. 4 ಪಾಯಿಂಟ್ಗಳೊಂದಿಗೆ ಆರ್ಸಿಬಿ ಎರಡನೇ ಸ್ಥಾನದಲ್ಲಿದೆ.

